ನಾದಜ್ಯೋತಿ ಸಂಗೀತ ಸಭಾ ಟ್ರಸ್ಟಿನ ವಜ್ರ ಮಹೋತ್ಸವ - 2024-25

Chandrashekhara Kulamarva
0


ಬೆಂಗಳೂರು : ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಸಂಸ್ಥೆಯ ವಜ್ರ ಮಹೋತ್ಸವವನ್ನು ಆಚರಿಸುತ್ತಿರುವ ಸಮಾರಂಭದ ಪ್ರಯುಕ್ತ ಇದೇ ಅಕ್ಟೋಬರ್ 5 ಮತ್ತು 6 ಈ ಎರಡು ದಿನಗಳ ಕಾಲ ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ (ಅಂಚೆ ಕಚೇರಿ ಹತ್ತಿರ) ಶ್ರೀ ರಾಮ ಮಂದಿರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ :

ಅಕ್ಟೋಬರ್ 5, ಶನಿವಾರ, ಸಂಜೆ 6-00 ಗಂಟೆಗೆ ಸಂಸ್ಥಾಪಕರ ದಿನ : ಸ್ವರಜನಿ, ಪರಾಗ್, ಪ್ರಕಿರಣ, ಸಂಗೀತ ಮತ್ತು ನೃತ್ಯಗಳ ಮೂಲಕ ವಿಶಿಷ್ಟವಾದ ಸ್ವರಜತಿಗಳ ನಿರೂಪಣೆ ಮತ್ತು ಪ್ರಸ್ತುತಿ : ವಿ|| ಆರ್.ಎಸ್. ಪ್ರಗಲ್ಭ ಮತ್ತು ಸಂಗಡಿಗರು. ಪಿಟೀಲು : ವಿ|| ನಂದಿನಿ ಮತ್ತು ಮೃದಂಗ : ವಿ|| ಅಜಿತ್ ಕೆ.ಎಂ.


ಅಕ್ಟೋಬರ್ 6, ಭಾನುವಾರ, ಸಂಜೆ 6-00 ಗಂಟೆಗೆ : 'ಕಲಾಜ್ಯೋತಿ' ವಿ|| ಪುಸ್ತಕಂ ರಮಾ ಇವರಿಂದ "ಸಂಗೀತ ಕಾರ್ಯಕ್ರಮ". ಪಿಟೀಲು : ವಿ|| ಕೇಶವ ಮೋಹನ್ ಕುಮಾರ್, ಮೃದಂಗ : ವಿ|| ಅದಮ್ಯ ರಮಾನಂದ್, ಘಟ : ವಿ|| ರಾಘವೇಂದ್ರ ಪ್ರಕಾಶ್.


ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಸಂಸ್ಥೆಯ ಪದಾಧಿಕಾರಿಗಳು ವಿನಂತಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
To Top