ಬೆಂಗಳೂರು : ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶೇಷಾದ್ರಿಪುರದ ಪ್ಲಾಟ್ ಫಾರ್ಮ್ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಚಾತುರ್ಮಾಸ್ಯದ ಆಶ್ವೀಜ ಶುದ್ಧ ದ್ವಾದಶಿಯಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಶ್ರೀ ಹಯವನೋಪನಿಷತ್ ಪ್ರಸಾರಣ ಪ್ರತಿಷ್ಠಾನದ ವತಿಯಿಂದ ಶ್ರೀ ಗೋಪಾಲಕೃಷ್ಣರ ನಿರ್ದೇಶನದಲ್ಲಿ ಬಸವೇಶ್ವರನಗರದ ಅಲಕನಂದ ಭಜನಾ ಮಂಡಳಿ ಹಾಗೂ ಇನ್ನಿತರ ಭಜನಾ ಮಂಡಳಿಗಳ ಸದಸ್ಯರುಗಳು ಶ್ರೀ ಹಯವದನೋತ್ಸವ-2024ರ ಶೀರ್ಷಿಕೆಯಲ್ಲಿ ಭಾವಿಸಮೀರ ಶ್ರೀ ವಾದಿರಾಜರ ವಿರಚಿತ 108 ಕೃತಿಗಳನ್ನು ಪ್ರಸ್ತುತಪಡಿಸಿದರು.
ಈ ಸಂಸ್ಥೆಯು ಪ್ರತಿವರ್ಷ ಚಾತುರ್ಮಾಸ್ಯದ ಪ್ರತಿ ತಿಂಗಳ ಶುದ್ಧ ದ್ವಾದಶಿಯಂದು ಕರ್ನಾಟಕ ಮತ್ತು ಆಂಧ್ರಪ್ರದೇಶದ ಮಠ-ಮಂದಿರಗಳಲ್ಲಿ ಅನೇಕ ಭಜನಾ ಮಂಡಳಿಗಳಿಂದ ಅನೇಕ ಕಡೆ ಶ್ರೀ ವಾದಿರಾಜರ 108 ಕೃತಿಗಳನ್ನು ಹಾಡಿಸುವ ಪದ್ಧತಿಯನ್ನು ಬಹಳ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ