ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ- ಬೆಸ್ಟ್ ಕಾಲೇಜ್ ವಿದ್ಯಾರ್ಥಿಗಳಿಗೆ ಬಹುಮಾನ

Upayuktha
0


ಬಳ್ಳಾರಿ
: ಬಳ್ಳಾರಿ ಜಿಲ್ಲೆ ಪಿಯು ಕಾಲೇಜುಗಳ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು ಮುನಿಸಿಪಲ್ ಕಾಲೇಜಿನಲ್ಲಿ ನಡೆದವು. ಈ ಸ್ಪರ್ಧೆಗಳಲ್ಲಿ ಬೆಸ್ಟ್  ಪಿಯು ಕಾಲೇಜಿನ ಶ್ರಾವಣಿ, ಜ್ಯೋತಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹಾಗೂ ಆಂಗ್ಲ ಚರ್ಚಾ ಸ್ಪರ್ಧೆಯಲ್ಲಿ ಸುಶ್ಮಿತಾ ದ್ವಿತೀಯ ಬಹುಮಾನ ಗಳಿಸಿ ಕಾಲೇಜಿಗೆ ಕೀರ್ತಿಯನ್ನು ತಂದರು. ಈ ವಿಜೇತರು ವಿಭಾಗ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ. ಇವರನ್ನು ಸಂಸ್ಥೆಯ ಅಧ್ಯಕ್ಷ ಕೊನಂಕಿ ರಾಮಪ್ಪ ಉಪಾಧ್ಯಕ್ಷ ಕೊನಂಕಿ ತಿಲಕ್  ಕುಮಾರ್, ಕಾರ್ಯದರ್ಶಿ ಶ್ರೀನಿವಾಸಲು, ಪ್ರಾಂಶುಪಾಲ  ವೆಂಕಟೇಶ್ವರ ರಾವು, ಉಪ ಪ್ರಾಂಶುಪಾಲ  ಶ್ರೀನಿವಾಸ ರೆಡ್ಡಿ ಜಿ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top