ಜಾತಿ ಬೇಧವಿಲ್ಲದ ದಾಸೋಹ ಪರಂಪರೆಯ ಮಠ ನಮ್ಮದು: ಡಾ.ಮುರುಘರಾಜೇಂದ್ರ ಶ್ರೀಗಳು

Upayuktha
0

ಸಾವಿರ ಬಡಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ವಸತಿ ನೀಡುವ ಗುರಿ: ಮರಿಗೌಡರ ಪರಿವಾರದಿಂದ ಶ್ರೀಗಳಿಗೆ ತುಲಾಭಾರ 


ಹುನಗುಂದ: 12ನೆಯ ಶತಮಾನದ ಅಣ್ಣ ಬಸವಣ್ಣನವರು ಕಂಡ ಸಮ ಸಮಾಜದ ಪರಿಕಲ್ಪನೆಯನ್ನು ಅನುಸರಿಸಿಕೊಂಡು ಜಾತಿ ಬೇಧವಿಲ್ಲದೇ ದಾಸೋಹದ ಪರಂಪರೆಯನ್ನು ರೂಢಿಸಿಕೊಂಡ ಮಠಗಳಲ್ಲಿ ಮುಗಳಖೋಡ ಜಿಡಗಾ ಮಠವೂ ಕೂಡಾ ಒಂದು ಎಂದು ಮುಗಳಖೋಡ ಜಿಡಗಾ ಮಠದ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.


ತಾಲ್ಲೂಕಿನ ಬೆಳಗಲ್ಲ ಗ್ರಾಮದ ವಿಜಯ ಮಹಾಂತೇಶ್ವರ ಶಾಖಾ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಮಂಗಳವಾರ ನಡೆದ ಯಲ್ಲಾಲಿಂಗ ಮಹಾಪ್ರಭುಗಳ ಪುರಾಣ ಪ್ರವಚನದ ಮಹಾಮಂಗಲೋತ್ಸವದ ಸಮಾರಂಭದಲ್ಲಿ ತುಲಾಭಾರವನ್ನು ಸ್ವೀಕರಿಸಿ ಮಾತನಾಡಿದ ಅವರು,

ಬಸವಾದಿ ಶರಣರ ಆಶಯದಂತೆ ನಮ್ಮದು ಜಾತಿ, ಬೇಧವಿಲ್ಲದೆ 360೦ ಮಠಗಳಲ್ಲಿ ದಾಸೋಹ ಪರಂಪರೆ ಮುಂದುವರೆಸಿಕೊಂಡು ಹೋಗುತ್ತಿದೆ. ದೊಡ್ಡ ದೊಡ್ಡ ಮಠಗಳು ಮಾತ್ರ ಶಿಕ್ಷಣ, ವಸತಿ ನೀಡಬೇಕೆಂಬುದಿಲ್ಲ ಅವುಗಳಂತೆ ಸಣ್ಣ ಪುಟ್ಟ ಮಠಗಳು ಸಹ ಉಚಿತ ಶಿಕ್ಷಣ ವಸತಿಯನ್ನು ನೀಡಲು ಮುಂದಾಗಬೇಕು. ಆ ನಿಟ್ಟಿನಲ್ಲಿ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ನೀಡಿದ ಸಂಕಲ್ಪದಂತೆ ಜಿಡಾಗಾ ಮಠದಲ್ಲಿ ಒಂದು ಸಾವಿರ ಬಡ ಮಕ್ಕಳಿಗೆ ಉಚಿತ ವಸತಿ, ಶಿಕ್ಷಣ, ದಾಸೋಹ ನೀಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಸದ್ಯ ಈ ವರ್ಷದಿಂದ 100 ಮಕ್ಕಳಿಗೆ ತ್ರಿವಿಧ ದಾಸೋಹವನ್ನು ಆರಂಭಿಸಲಾಗಿದೆ. ಮುoದಿನ ದಿನಗಳಲ್ಲಿ ತಮ್ಮಲ್ಲರ ಸಹಾಯ ಸಹಕಾರದಿಂದ ಸಾವಿರ ಮಕ್ಕಳಿಗೂ ಕೂಡಾ ಉಚಿತ ಶಿಕ್ಷಣ ನೀಡಲು ಸಿದ್ದ. ಉತ್ತಮ ಕಾರ್ಯಕ್ರಮ ಆಯೋಜಿಸಿದ ಬೆಳಗಲ್ ಗ್ರಾಮದಲ್ಲಿ ದೇವಮಾನವರಾದ ಸದ್ಗುರು ಯಲ್ಲಾಲಿಂಗ ಮಹಾಪ್ರಭುಗಳ ಪ್ರವಚನ ಹಮ್ಮಿಕೊಂಡ ನಿಮ್ಮ ಗ್ರಾಮದಲ್ಲಿ ಶಾಂತಿ ಸಮೃದ್ಧಿ ನೆಲೆಸಲಿ ಎಂದು ಹಾರೈಸಿದರು.


ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮಗೆ ಶ್ರಾವಣ ಮಾಸ ಶ್ರೇಷ್ಠ. ಈ ಸಮಯದಲ್ಲಿ ಪ್ರತಿ ಗ್ರಾಮದಲ್ಲೂ ಶರಣರ, ಸಂತರ ಪ್ರವಚನಗಳನ್ನು ಆಯೋಜಿಸಲಾಗುತ್ತಿದ್ದು, ಶರಣರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ಧರ್ಮ ಶ್ರದ್ದೆ,ಭಕ್ತಿಯಿಂದ ನಡೆದಾಗ ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.


ಗ್ರಾಮದ ಮಹಾಂತೇಶ ಮರೀಗೌಡರ ಕುಟುಂಬದಿಂದ ಮುರುಘರಾಜೇಂದ್ರ ಶ್ರೀಗಳಿಗೆ ನಾಣ್ಯಗಳಿಂದ ತುಲಾಭಾರ ಮಾಡಲಾಯಿತು.  


ಲೋಕಸಭಾ ಸದಸ್ಯ ಪಿ.ಸಿ. ಗದ್ದಿಗೌಡರ, ಸಂಜೀವ್ ಮಹಾರಾಜರು,ಸುಂಟನೂರು ದೇವರು, ಬೆಳಗಲ್ ಗ್ರಾಮ ಪಂಚಾಯತ ಅಧ್ಯಕ್ಷೆ ಪ್ರಿಯದರ್ಶಿನಿ ಉಂಡೋಡಿ, ಉಪಾಧ್ಯಕ್ಷೆ ಶಾಂತವ್ವ ಚನ್ನ ದಾಸರ, ಮಹಾಂತೇಶ ಹಳಬರ, ಸಿ. ಕೆ ಜಲಗೇರಿ, ಶಿವಪುತ್ರಪ್ಪ ಕುಂಬಾರ, ಅoದಾನಪ್ಪ ಅಂಗಡಿ, ಚನ್ನಪ್ಪ ಅಂಗಡಿ, ಮುದಕಪ್ಪ ಭಜಂತ್ರಿ, ಯಮನಪ್ಪಗೌಡ ಗೌಡರ, ಮಹೇಶ ಸಜ್ಜನ, ಮಹಾಂತೇಶ ಸಂಗಮದ, ಕರಬಸಪ್ಪ ಹಕಾರಿ, ತಿಪ್ಪಣ್ಣ ಕುರಿ, ಹನಂತ ಬಿಜಕಲ್ಲ, ರೇವಣಪ್ಪ ಹಡಪದ, ರಾಮನಗೌಡ ಮರಿಗೌಡರ, ರಾಮಣ್ಣ ಬಂಡಿವಡ್ಡರ, ಶಾಂತವ್ವ ವಾಲ್ಮೀಕಿ, ಪ್ರವಚನಕಾರ ಪ್ರಭುದೇವ ಹಿರೇಮಠ ಸೇರಿದಂತೆ ಅನೇಕರು ಇದ್ದರು, ಬಿ.ಸಿ. ಚೌಡಾಪುರ ನಿರೂಪಿಸಿದರು, ಬಸವರಾಜ ಕಂಬಾರ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top