ಏತಡ್ಕ: ಶ್ರೀ ಸದಾಶಿವ ದೇವಸ್ಥಾನ ಏತಡ್ಕ ಬ್ರಹ್ಮಕಲಶೋತ್ಸವ 25 ರ ಅಂಗವಾಗಿ ನಡೆದ ಮನವಿ ಪತ್ರ ಮಹಾ ಅಭಿಯಾನವನ್ನು ಬದಿಯಡ್ಕದ ಖ್ಯಾತ ಉದ್ಯಮಿ ನಿತ್ಯಾನಂದ ಶೆಣೈಯವರು ದೀಪಜ್ವಲನೆ ಮತ್ತು ಅಭಿಯಾನದ ಕಿಟ್ ಬಿಡುಗಡೆ ಮೂಲಕ ಇತ್ತೀಚೆಗೆ ನೆರವೇರಿಸಿದರು.
"ಮನೆ ಮನೆ ಅಭಿಯಾನ ಎಂದರೆ ಸುತ್ತ ಮುತ್ತಲಿನ ಪ್ರತಿಯೊಬ್ಬರಿಗೂ ದೇವರ ಕೆಲಸದಲ್ಲಿ ಪುಣ್ಯ ಭಾಜನರಾಗುವ ಅವಕಾಶಕ್ಕೆ ಆಹ್ವಾನಿಸಿದಂತೆ" ಎಂದು ಅಭಿಪ್ರಾಯಪಟ್ಟರು.
ಆರಂಭದಲ್ಲಿ ದೇವರ ಪೂಜೆಯ ಅನಂತರ ಸಮಿತಿಯ ಸಂಚಾಲಕರಾದ ಚಂದ್ರಶೇಖರ ಏತಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಡಾ.ವೈ.ವಿ. ಕೃಷ್ಣಮೂರ್ತಿ ಮಹಾ ಅಭಿಯಾನದ ನಿರ್ದೇಶನವಿತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ವೈ.ಶ್ಯಾಮ ಭಟ್, ಗೌರವಾಧ್ಯಕ್ಷ ಡಾ.ವೈ. ಸುಬ್ರಾಯ ಭಟ್, ಉಪ ಗೌರವಾಧ್ಯಕ್ಷ ವೈ.ಶಂಕರ ಭಟ್, ಬಾಲಕೃಷ್ಣ ಕೆ ಕೆ ಉಪಸ್ಥಿತರಿದ್ದರು.
ಶ್ರೀ ದುರ್ಗಾಪರಮೇಶ್ವರಿ ಭಜನಾ ಸಂಘ ಏತಡ್ಕ ಹಾಗೂ ಶ್ರೀ ಕೃಷ್ಣ ಭಜನಾ ಸಂಘ ವಾಣೀನಗರದ ಕಾರ್ಯಕರ್ತರು ಹಾಗೂ ಅನೇಕ ಭಕ್ತಕಿಂಕರರು ಕಿಟ್ ಸ್ವೀಕರಿಸಿ ಒಂದೇ ದಿನದಲ್ಲಿ ಏಕಕಾಲದಲ್ಲಿ ಮನವಿ ಪತ್ರ ಹಾಗೂ ಶಿವಾರ್ಪಣ ಯೋಜನೆಯ ಮಾಹಿತಿ ಪತ್ರ ವಿತರಣೆಗೆ ತೆರಳಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ