ಶ್ರೀ ಸತ್ಯಾತ್ಮವಾಣಿ- 49: ಪರಮಾತ್ಮನ ಚಿಹ್ನೆಗಳನ್ನು ಧರಿಸಬೇಕು

Upayuktha
2 minute read
0



ಶ್ರೀಕೃಷ್ಣ ಪರಮಾತ್ಮ ಕಾಲಿಯ ನಾಗನನ್ನು ಕಾಲಿನಿಂದ ತುಳಿದು ಅವನಲ್ಲಿರುವ ಪಾಪವನ್ನು ನಾಶ ಮಾಡಿಸುವ, ಅವನಲ್ಲಿದ್ದ ಅಹಂಕಾರ ಪಾಪವನ್ನು ಹೊರಹಾಕಿಸಲು ಅದ್ಭುತವಾದ ನೃತ್ಯವನ್ನು ಮಾಡಿ ಅಹಂಕಾರ ದಮನ ಮಾಡುತ್ತಾನೆ. ನಾಗ ಪತ್ನಿಯರು ಸ್ತೋತ್ರ ಮಾಡುತ್ತಾರೆ, ಅವರು ಕೃಷ್ಣನಿಗೆ ಕೇಳುತ್ತಾರೆ. ನಮ್ಮ ಪತಿ ಯಾವ ಪುಣ್ಯವನ್ನು ಮಾಡಿ ನಿನ್ನ ಪಾದ ಸ್ಪರ್ಶವಾಗಲು ಯಾವ ಪುಣ್ಯವನ್ನು ಮಾಡಿದ್ದಾನೆ ಎಂದು ಕೇಳುತ್ತಾರೆ. ಪರಮಾತ್ಮನ ಭಕ್ತರ ಪಾದ ಧೂಳಿಗೆ ಎಷ್ಟು ಪುಣ್ಯ ಇದೆ ಅಂತಹ ಪರಮಾತ್ಮನ ಪಾದ ಧೂಳಿ ಇನ್ನೆಷ್ಟು ಸೌಭಾಗ್ಯ ಅದರಲ್ಲೂ ಪರಮಾತ್ಮ ತನ್ನ ಕಾಲನ್ನೇ ತಲೆಯ ಮೇಲೆ ಧರಿಸುವ ಪುಣ್ಯಕ್ಕೆ ಏನು ಮಾಡಿದ್ದಾನೆ ಎಂದು ಕೇಳಿದರು. ಪರಮಾತ್ಮನನ್ನೇ ತಲೆಯ ಮೇಲೆ ಹೊತ್ತುಕೊಂಡು ಯಮುನಾ ನದಿಯಲ್ಲಿ ಸ್ನಾನ ಮಾಡುವ ಪುಣ್ಯ ಎಲ್ಲರಿಗೂ ಬರುವುದಿಲ್ಲ ಅಂತಹ ಪುಣ್ಯ ಯಾವ ಕ೩ಲಸ ಮಾಡಿ ಬಂದಿದೆ ಎಂದು ಕೇಳಿದರು. ಸಿಕ್ಕ ಸೌಭಾಗ್ಯವನ್ನು ನೆನೆದು ಸ್ಮರಣೆ ಮಾಡಿದರೆ ಆ ಪುಣ್ಯವನ್ನು ನೆನೆದು ಸೌಭಾಗ್ಯಕ್ಕೆ ಮತ್ತಷ್ಟು ಭಕ್ತಿ ಬರುತ್ತದೆ. ಭಕ್ತಿ ಇಲ್ಲದೇ ತೋರಿಕೆ ಮಾಡಿದರೆ ಕಬ್ಬನ್ನು ಅಗಿದು ತಿನ್ನದೇ ಕೇವಲ ನೆಕ್ಕಿದಂತೆ ಅನಿಸುತ್ತದೆ. ಭಾಗವತದಲ್ಲಿ ಸಿಕ್ಕ ಭಾಗ್ಯವನ್ನು ಭಾಗ್ಯ ಎಂದು ಚಿಂತನೆ ಬರಲಿ ಎಂದು ಹೇಳುತ್ತದೆ. ಪರಮಾತ್ಮ ಕೊಟ್ಟಿದ್ದು ಭಕ್ತಿಯಿಂದ ಅವನಲ್ಲೇ ಅರ್ಪಿಸುವ ಸಮರ್ಪಣಾ ಭಾವ  ಬಂದರೆ ಸಾರ್ಥಕ ಎಂದು ಭಾಗದಲ್ಲಿ ಹೇಳುತ್ತಾರೆ.


ಸ್ವಭಾತಃ ಭಕ್ತಿಯ ಸಂಪೂರ್ಣವಾಗಿ ಮನದಲ್ಲಿ ಇರಬೇಕು ಆಗ ಪರಮಾತ್ಮ, ಭಗವದ್ ಭಕ್ತರಿಗೆ ಈ ಸೌಭಾಗ್ಯ ದೊರೆಯುತ್ತದೆ. ಕಾಲಿಯ ಯಾವ ತಪಸ್ಸನ್ನು ಮಾಡಿದ್ದಾನೆ ಎಂದು ಪತ್ನಿಯರು ಕೇಳುತ್ತಾರೆ,  ಮಾಡುವ ತಪಸ್ಸಿಗೆ ಅಹಂಕಾರ ಬಂದರೆ ಹಾಳಾಗಿ ಹೋಗುತ್ತದೆ. ಪಾತ್ರೆಯಲ್ಲಿ ತೂತು ಇದ್ದಾಗ ನೀರು ಚಲ್ಲಿ ಹೋಗುವಂತೆ. ಮನಸ್ಸೆಂಬ ಕೊಡದಲ್ಲಿ ಅಹಂಕಾರವೆಂಬ ರಂಧ್ರ ಇದ್ದರೆ ಅದು ಸೋರಿ ಹೋಗುತ್ತದೆ. ವಿನಮ್ರತೆಯಿಂದ ಇದ್ದರೆ ಪುಣ್ಯಕರ್ಮಗಳು ಉಳಿಯುತ್ತದೆ. ಗುರುಗಳಿಗೆ ಮಾನಕೊಡಬೇಕು ಗೌರವ ಕೊಡಬೇಕು ಅವರ ಸ್ಮರಣೆ ಮಾಡಬೇಕು ಪುಣ್ಯ ಕಾರ್ಯ ಮಾಡಲು ದೇಹ ಕೊಟ್ಟವರು ತಂದೆತಾಯಿಗಳು ಅವರಿಗೆ ವಿನೀತನಾಗಿರಬೇಕು, ತತ್ವಾಭಿಮಾನದೇವತೆಗಳಿಗೆ ವಿನೀತರಾಗಿರಬೇಕು, ವಾಯುದೇವರಿಗೆ ಮಾನಕೊಟ್ಟು ನಂತರ ಭಗವಂತನನ್ನು ವಿನೀತನಾಗಿ ಮೊರೆ ಹೋಗಬೇಕು ಇಂತಹ ಪುಣ್ಯ ಮಾಡಲು ಏನು ಮಾಡಿದ್ದಾನೆ ಎಂದು ಕೇಳುತ್ತಾರೆ, ಇವನನ್ನು ನೀನು ಪಾದಸ್ಪರ್ಶ ಮಾಡಲು ಕೊಟ್ಟಿರಲ ಕಾರಣ ದಾನ ಧರ್ಮಾದಿಗಳನ್ನು ಮಾಡಿರಲೇ ಬೇಕು ಎಂದು ಹೇಳುತ್ತಾರೆ.


ಪ್ರಾಣಿಗಳಿಗೆ ಉಪಕಾರ ಮಾಡಿದರೆ ಪರಮಾತ್ಮ ಸಂತಸ ಪಡುತ್ತಾನೆ. ಹೀಗಾಗಿ ಅವನ್ನನು ಉದ್ಧಾರ ಮಾಡು ಎಂದು ಕೇಳುತ್ತಾರೆ. ನಾಗಪತ್ನಿಯರ ಈ ಪ್ರಾರ್ಥನೆಯನ್ನು ನಮ್ಮ ಮನಸ್ಸಿನಲ್ಲಿಟ್ಟುಕೊಂಡು ಪರಮಾತ್ಮನ ದಯೆಯಿಂದ ಪ್ರವಚನವನ್ನು ಕೇಳುತ್ತಿದ್ದೇವೆ ಎಂದು ಅನುಸಂಧಾನ ಮಾಡಬೇಕೆಂದು ತಿಳಿಸಿಕೊಡುತ್ತಾರೆ. ಸತ್ಯಧರ್ಮತೀರ್ಥರು ಹೇಳುತ್ತಾರೆ, ಸಮುದ್ರದಲ್ಲಿರಬೇಕಾದ ಇವ ಇಲ್ಲಿಗೆ ಬಂದಿದ್ದಾನೆ ಆದ್ದರಿಂದ ಅವನಿಗೆ ಶಿಕ್ಷೆ ಕೊಟ್ಟು ಕಳುಹಿಸು ಆದರೆ ಮರಣ ನೀಡಬೇಡ ಎಂದು ಪ್ರಾರ್ಥಿಸುತ್ತಾರೆ. ಪರಮಾತ್ಮನಿಗೆ ಎಲ್ಲ ಶಕ್ತಿಗಳೂ ಇವೆ ಅವನಿಗೆ ಎಂದು ಏನೂ ಬೇಕಿಲ್ಲ ಯಾರೂ ಬೇಕಿಲ್ಲ ತಂದೆ ಇಲ್ಲದೇ ದೇಹ ಗುರುಗಳಲ್ಲಿದೇ ಬುದ್ಧಿ, ದೇವತೆಗಳ ಸಹಾಯವಿಲ್ಲದೇ ಅವನೊಬ್ಬನೇ ಎಲ್ಲವನ್ನು ಮಾಡಬಹುದಾದದವ. ಪರಮಾತ್ಮ ಕೊಡುವ ಗೌರವವನ್ನು ಎಲ್ಲರೂ ಪಡೆಯುತ್ತಾರೆ. ದೇವರಿಂದ ಗುರುಗಳಿಂದ ನಮಗೆ ಮಾನವನ್ನು ಕೊಟ್ಟು ಅನುಗ್ರಹ ಮಾಡಿಸುತ್ತಾನೆ. ಮನುಷ್ಯನಿಗೆ ಬಹಳ ಅಹಂಕಾರ ಇರುತ್ತದೆ, ಸರ್ವಶಕ್ತ ಭಗವಂತನಿಗೆ ಎಷ್ಟು ಅಹಂಕಾರ ಇರಬೇಕು ಆದರೆ ಅವನಿಗೆ ಅಹಂಕಾರ ಇರುವುದಿಲ್ಲ. ಅದಕ್ಕೆ ನಾಗ ಪತ್ನಿಯರು ಮಾನದೇನ ಎಂದು ಸಂಬೋಧನೆ ಮಾಡಿ ಪ್ರಾರ್ಥಿಸುತ್ತಾರೆ.


ನಾಗ ಪಂಚಮಿಯ ದಿನ ಪೂಜೆಗೊಳ್ಳ ಬೇಕಾದ ನಾಗ ಕಾಲಿಯ ನಾಗನೂ ಒಬ್ಬ ಅಂತಹ ಭಕ್ತನಾದ ಕಾಲಿಯ ಅಸುರೀ ಆವೇಶದಿಂದ ಸ್ಪಲ್ಪ ಸಮಯ ತಪ್ಪು ಮಾಡಿದ್ದಾನೆ. ಲಕ್ಷ್ಮಿದೇವಿಯು ಕೂಡ ನಿನ್ನ ಪಾದಸ್ಪರ್ಶ ಪಡೆಯಬೇಕಾದರೆ ಅನಾದಿಕಾಲದಿಂದ ಸೇವೆಯನ್ನು ಮಾಡುತ್ತಾ ಸೌಭಾಗ್ಯ ಪಡೆದಿದ್ದಾಳೆ ಅಂತಹ ಹೀಗೆ ನಮ್ಮ ಪತಿ ಏನು ಪುಣ್ಯ ಮಾಡಿದ್ದ ಎಂದು ನಾಗಪತ್ನಿಯರು ಪ್ರಾರ್ಥನೆಯನ್ನು ಮಾಡುತ್ತಾ ಕೇಳುತ್ತಾಳೆ. ಸಮುದ್ರ ಮಥನದ ನಂತರ ಎಲ್ಲರನ್ನು ಬಿಟ್ಟು ಪರಮಾತ್ಮನನ್ನು ಸರ್ವೋತ್ತಮ ಎಂದು ಆರಿಸಿ ಪುಣ್ಯವಂತಳಾದ ಲಕ್ಷ್ಮಿದೇವಿಯ ಪತಿ ಎಂದು ಪ್ರಾರ್ಥಿಸುತ್ತಾರೆ. ಆಗ ಶ್ರೀಕೃಷ್ಣ ಪರಮಾತ್ಮ ಆಶೀರ್ವಾದ ಮಾಡಿ ಆಜ್ಞೆ ಮಾಡಿ ಕಾಲಿಯಾ ನಾಗನನ್ನು ಸಮುದ್ರಕ್ಕೆ ಕಳುಹಿಸುತ್ತಾನೆ. ಪರಮಾತ್ಮ ತನ್ನ ಇಚ್ಛಾ ಮಾತ್ರದಿಂ ನದಿಯ ಕಲುಷಿತ ನೀರನ್ನು ನಿರ್ವಿಷವನ್ನಾಗಿ ಮಾಡುತ್ತಾನೆ ಎಂದು ಭಾಗವತ ಹೇಳುತ್ತದೆ. ಗರುಡನು ನಿನ್ನ ತಲೆಯ ಮೇಲೆ ಇರುವುದರಿಂದ ನಿನಗೆ ತೊಂದರೆ ಕೊಡುವುದಿಲ್ಲ ಎನ್ನುತ್ತಾನೆ ಪರಮಾತ್ಮ. ನಿತ್ಯದಲ್ಲಿ ಎಲ್ಲರೂ ಭಗವಂತನ ಚಿಹ್ನೆಗಳನ್ನು ಗೋಪಿ ಚಂದನದಿಂದ ಮುದ್ರೆಗಳನ್ನು ಧರಿಸಬೇಕು ಮುದ್ರಾ ಧಾರಣೆ ಮಾಡುವಾಗ  ಪರಮಾತ್ಮನ ಆಯುಧಗಳ ಚಿಹ್ನೆಗಳನ್ನು ಧಾರಣ ಮಾಡಿದ್ದೇವೆ ಅವನು ನಮ್ಮನ್ನು ರಕ್ಷಿಸುತ್ತಾನೆಂಬ ಅನುಸಂಧಾನವಿರಬೇಕು. ಗೋಪಿ ಚಂದನ ಅಥವಾ ತಪ್ತ ಮುದ್ರಾ ಧಾರಣೆ ಮಾಡಿದರೆ ಬಾಧೆಗಳಿಂದ ಕಾಪಾಡುತ್ತಾನೆ. ಈ ಕಾಲಿಯಾ ನಾಗನಿಗೆ ಹೇಳಿದಂತೆ ಪರಮಾತ್ಮನ ಚಿಹ್ನೆಗಳನ್ನು ಧರಿಸಿದ ನಾವು ಕೂಡ ಧರಿಸಬೇಕೆಂದು ನಾವು ತಿಳಿಯಬೇಕು.


ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top