ಶ್ರೀ ಸತ್ಯಾತ್ಮವಾಣಿ- 36: ಭಕ್ತನಿಗೆ ಒಲಿವ ಭಗವಂತ

Upayuktha
0


ತ್ಯಂತ ಭಕ್ತಿಯಿಂದ ಅರ್ಜುನ ಶ್ರೀಕೃಷ್ಣ ಪರಮಾತ್ಮನ ಸ್ತೋತ್ರ ಮಾಡಿದ್ದಾನೆ, ಅರ್ಜುನನ್ನು ಪರಮ ಭಕ್ತ ಅತ್ಯಂತ ಪ್ರಿಯನಾದವನು ತನ್ನ ಮನಸ್ಸಿನ ಆಳದಲ್ಲಿ ಭಕ್ತಿಯನ್ನು ಮಾಡುವವನು. ಸಮಸ್ತ ಪ್ರಪಂಚಕ್ಕೆ ಪರಮಾತ್ಮನಲ್ಲಿ ಭಕ್ತಿ ಬರುವಂತೆ ಪ್ರಾರ್ಥನೆ ಮಾಡುತ್ತಾನೆ ಅದಕ್ಕೆ ಉತ್ತರವಾಗಿ ಶ್ರೀ ಕೃಷ್ಣ ಪರಮಾತ್ಮ ಹೇಳುತ್ತಾನೆ, ದಿವ್ಯವಾದ ಅನುಗ್ರಹವನ್ನು ಅರ್ಜುನನ ಮೇಲೆ ಮಾಡುತ್ತಾನೆ. ಇಂತಹ ದೊಡ್ಡ ಅನುಗ್ರಹವನ್ನು ಪಡೆಯುತ್ತಿದ್ದಾನೆ, ಯಾವುದೇ ಒಂದು ಜಯವನ್ನು ಕೊಡುತ್ತೇನೆ ಅಥವಾ ಸಂಪತ್ತನ್ನು ಕೊಡುತ್ತೇನೆ ಎನ್ನುತ್ತಿಲ್ಲ. ನೀನು ನನ್ನ ಭಕ್ತ ನಾನು ನಿನ್ನ ಸ್ವಾಮಿ ನಿನಗೆ ಜಯಕೊಡಲು ಎಲ್ಲ ಸಮಯದಲ್ಲೂ ನಾನು ಜೊತೆಗೆ ಇದ್ದೇನೆ ನಾನಾವಿಧವಾದ ಉಪಕಾರವನ್ನು ಮಾಡುವುದರಿಂದ ಒಂದೊಂದೇ ಕ್ರಿಯೆಗಳನ್ನು ಹೇಳದೇ ನೀನು ಸರ್ವಸ್ವವನ್ನು ನನಗೆ ಅರ್ಪಣೆ ಮಾಡಿದ್ದೀಯ; ಆದ್ದರಿಂದ ನಿನಗೆ ಏನೆಲ್ಲ ಬೇಕೋ ಅದನ್ನೆಲ್ಲಾ ನಾನು ನಿನಗೆ ಕೊಡುತ್ತೇನೆ ಎನ್ನುತ್ತಾನೆ. ಅನಾದಿ ಕಾಲದಿಂದಲೂ ಅನಂತರ ಕಾಲದಲ್ಲೂ ಕೊಡುತ್ತೇನೆ ಎಂದು ಹೇಳುತ್ತಾನೆ.


ಭಗವಂತ ಅನಾದಿ ಕಾಲದಿಂದಲೂ ಎಲ್ಲರಿಗೂ ಎಲ್ಲವನ್ನೂ ಮೊಡುತ್ತಲೇ ಇದ್ದಾನೆ ಭಗವದ್ ದಾಸ್ಯದ ಭಾವನೆ ಅರ್ಜುನನಲ್ಲಿದೆ. ದೇವರು ಎಲ್ಲರಿಗೂ ಪರಮ ಆದರೆ ಅವನು ಪರಮ ಎಂದು ಚಿಂತನೆಯನ್ನು ಮಾಡಿದವರು ಮೋಕ್ಷಕ್ಕೆ ಹೋಗುತ್ತಾರೆ. ಉಪಕಾರವನ್ನು ಪಡೆದವರು ಅನುಸಂಧಾನ ಪಡೆದವರು ಉತ್ತಮಗತಿಯನ್ನು ಹೊಂದಿದರು. ಇಲ್ಲದೇ ಇರುವವರು ಸಾಮಾನ್ಯರಾಗಿ ಉಳಿಯುತ್ತಾರೆ. ಯಾರು ನನ್ನವರೋ ಅವರೆಲ್ಲ ನಿನ್ನವರು ಎಂದು ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಹೇಳುತ್ತಾನೆ, ಸಜ್ಜರರು ಪರಮಾತ್ಮನ ಭಕ್ತಿಯನ್ನು ಮಾಡಿ ಸದ್ಗತಿ ಹೊಂದಲು ಆಸೆ ಇಟ್ಟುಕೊಂಡವರು ಪರಮಾತ್ಮನ ಭಕ್ತರಲ್ಲೂ ಕೂಡ ಭಕ್ತಿಯನ್ನು ಮಾಡಿರಲೇ ಬೇಕು ಎಂದು ಅನುವ್ಯಾಖ್ಯಾನ ಮತ್ತು ಸುಧಾದಿ ಗ್ರಂಥಗಳಲ್ಲಿ ಹೇಳುತ್ತಾರೆ.  



ದೇವತೆಗಳು ಕೂಡ ವಿಷ್ಣುವಿನಲ್ಲಿ ದ್ವೇಷ ಹುಟ್ಟುವಂತೆ ಮಾಡುತ್ತಾರೆ. ಆ ದೇವತೆಗಳಿಗೆ ದೇವರ ಆರೀತಿಯ ಆಜ್ಞೆಗೆ ಅನುಗುಣವಾಗಿ ನಡೆಯುತ್ತಾರೆ. ತಾರತಮ್ಯ ಭಾವ ಇರಬೇಕು, ತಾರತಮ್ಯ ಭಗವಂತನ ಪೂಜೆ ಮಾಡಿದರೇ ಅವನಿಗೆ ಸಂತಸ ಎಂದು ದೇವರಿಗೆ ಕೇವಲ ಅವನು ಸರ್ವೋತ್ತಮ ಎಂಧರೆ ಪ್ರೀತಿ ಆಗುವುದಿಲ್ಲ ಬೇರೆ ಎಲ್ಲ ದೇವತೆಗಳಿಗಿಂತ ಉತ್ತಮ ಎಂದು ತಿಳಿಯುವದರಿಂದ ಉತ್ತಮ ಗತಿಯಾಗುತ್ತದೆ ಎನ್ನುತ್ತಾರೆ. ತಾರ ಎಂದರೆ ಮೋಕ್ಷ ಪ್ರದಾಯಕವಾಗಿರುವವನು ತಾರತಮ್ಯ ಉಪಾಸನೆ ಮಾಡಿದರೆ ದೇವರು ಮೋಕ್ಷವನ್ನು ಕೊಡುತ್ತಾನೆ ಎಂದು ಶ್ರೀಮದಾಚಾರ್ಯರು ಹೇಳಿದ್ದಾರೆ, ಮೋಕ್ಷ ಪಡೆಯಲು ತಾರತಾಮ್ಯ ಜ್ಞಾನ ಪಡೆದಿರಬೇಕು. ಆ ರೀತಿ ತಿಳಿಯದೇ ಇರುವಲ್ಲಿ ದೇವತೆಗಳು ಮನುಷ್ಯನಿಗೆ ಅಜ್ಞಾನ ಕೊಟ್ಟು ದ್ವೇಷ ಮಾಡುವ ಬುದ್ಧಿಯನ್ನು ಕೊಡಲು ಆದೇಶಿಸಿದ್ದಾನೆ. 



ಶ್ರೀಕೃಷ್ಣನು ಹೇಳುತ್ತಾನೆ- ನನಗಿಂತ ಕೆಳಗಿರುವ ನಿನಗಿಂತಲೂ ಮೇಲಿರುವ ಕಕ್ಷೆಯ 6 ಜನರನ್ನು ನಿರ್ಲಕ್ಷ ಮಾಡುವವರೋ ಅವರು ನನ್ನ ದ್ವೇಷಿಗಳು ಕೂಡ ನಿನಗಿಂತ ಉಚ್ಛ ಸ್ಥಾನದಲ್ಲಿರುವವರ ಭಕ್ತಿಯನ್ನು ಮಾಡಬೇಕು. ಎಲ್ಲ ದೇವತೆಗಳು ನಿನ್ನೊಂದಿಗೆ ಇದ್ದಾರೆ ಎಂದು ಪರಮಾತ್ಮ ಹೇಳುತ್ತಾನೆ.  ಕೆಳಗಿನವರು ದಾಸರಾಗಿದ್ದಾರೆ ಉತ್ತಮರ ಅನುಗ್ರಹದಿಂದ ಎಲ್ಲ ಕೆಲಸಗಳಲ್ಲೂ ಯಶಸ್ಸು ಸಿಗುತ್ತದೆ ಎಂದು ಪರಮಾತ್ಮ ಹೇಳುತ್ತಾನೆ. ಅರ್ಜುನನಿಗೆ ಹೇಳುತ್ತಾನೆ ನೀನು ನನ್ನ ಭಕ್ತ ನಿನ್ನನ್ನು ದ್ವೇಷ ಮಾಡಿದರೆ ನನ್ನ ದ್ವೇಷ ಮಾಡಿದಂತೆ ಎಂದು ಹೇಳುತ್ತಾನೆ, ಅರ್ಜುನ ಮಾತ್ರವಲ್ಲ ಐದು ಜನ ಪಾಂಡವರ ಬಗೆಗೆ ಇದೇ ರೀತಿಯ ಪ್ರೀತಿಯನ್ನು ಪರಮಾತ್ಮ ಹೊಂಧಿದ್ದಾನೆ. 



ಅರ್ಜುನನಿಗಾಗಿ ವಿಶೇಷವಾಗಿ ಈ ಸಂದರ್ಭದಲ್ಲಿ ಹೇಳುತ್ತಾನೆ. ಕೌರವರು ನಿನ್ನ ದ್ವೇಷಗಳು ಅದಕ್ಕೆ ನನ್ನ ದ್ವೇಷಿಗಳನ್ನು ನಾಶವನ್ನು ಮಾಡುವ ಸಂಕಲ್ಪ ಮಾಡಿರಲು ಕಾರಣ ಅವರುಗಳು ಕೇವಲ ನಿನಗೆ ಮಾತ್ರ ದ್ವೇಷಿಗಳಲ್ಲ ಅವರುಗಳು ನನಗೂ ದ್ವೇಷಿಗಳು ಎಂದು ಪರಮಾತ್ಮ ಹೇಳುತ್ತಾನೆ. ನಮಗೆ ಎಲ್ಲ ದೇವತೆಗಳ ಬಗೆಗೆ ಎಷ್ಟು ಭಕ್ತಿಯಿಂದ ಮಾಡಬೇಕು ಎಂದು ಪರಮಾತ್ಮ ಹೇಳುತ್ತಾನೆ, ದೇವತೆಗಳಲ್ಲಿ ಭಕ್ತಿ ಮಾಡಬೇಕು, ದ್ವೇಷ ಔದಾಸೀನ್ಯ ಮಾಡಬಾರದು ದೇವತೆಗಳೆಲ್ಲರ ಮೂಲಕ ಶ್ರದ್ದಾ ಭಕ್ತಿಯಿಂದ ಪೂಜೆ ಮಾಡಬೇಕು ಎಂದು ತಿಳಿಸಿಕೊಡುತ್ತಿದ್ದಾರೆ. ದೇವತೆಗಳು ಇಂದ್ರಿಯದಲ್ಲಿದ್ದು ನಿಯಮನ ಮಾಡುವುದರಿಂದ ಅವರಲ್ಲೂ ಕೂಡ ಭಕ್ತಿ ಮಾಡಿ ಪರಮಾತ್ಮನಿಗೂ ಆಗ ಬಹಳ ಸಂತೋಷವಾಗುತ್ತದೆ ಎಂದು ಅರ್ಜುನನನ್ನು ನಿಮಿತ್ತ ಮಾಡಿಕೊಂಡು ನಮಗೆಲ್ಲ ಉಪದೇಶಿಸುತ್ತಿದ್ದಾನೆ. 



ನರನ ಅವತಾರ ನೀನು ನಾರಾಯಣನ ಅವತಾರ ನಾನು ಎಂದು ಪರಮಾತ್ಮ ಹೇಳುತ್ತಾನೆ. ವಿಷ್ಣು ವಾಯು ಶೇಷ ಇವರೆಲ್ಲರ ಆವೇಶ ಸ್ವಯಂ ಇಂದ್ದರ ಅವತಾರನಾದನು ನೀನು ಎಂದು ಅರ್ಜುನನಿಗೆಶ್ರೀಕೃಷ್ಣ ಪರಮಾತ್ಮ ಹೇಳುತ್ತಾನೆ. ಮೂಲ ರೂಪ, ಅವತಾರ ರೂಪ ನಾರಾಯಣದಿಂದ ನೂರು ಕೋಟಿ ಶ್ಲೋಕಗಳ ಉಪದೇಶ ಮಾಡಿದ್ದಾನೆ (ಪಂಚ ರಾತ್ರ ಆಗಮ) ಈ ಪಂಚರಾತ್ರ ಆಗಮವನ್ನು ಭಗವದ್ಗೀತೆಯಲ್ಲಿ ಪರಮಾತ್ಮ ಹೇಳಿದ್ದಾನೆ ಎಂದು ಶ್ರೀಮದಾಚಾರ್ಯರು ಹೇಳಿದ್ದಾರೆ.


ಪರಮಾತ್ಮ ನಿನ್ನಿಂದ ನಾನು ಬೇರೆ ಅಲ್ಲ ನನ್ನಿಂದ ನೀನು ಬೇರೆ ಇಲ್ಲ ಎಂದು ಶ್ರೀ ಕೃಷ್ಣ ಪರಮಾತ್ಮ ಹೇಳಿದ್ದಾನೆ ಎಂದು ಮೇಲ್ನೋಟಕ್ಕೆ ಅರ್ಥ ತೋರುತ್ತದೆ. ಇದೇ ಅಧ್ಯಾಯದಲ್ಲಿ ಅರ್ಜುನ ಎಷ್ಟು ಬಾರಿ ಎಷ್ಟು ಪ್ರಾರ್ಥನೆ ಮಾಡಿದ್ದಾನೆ  ಮಹಿಮೆಯನ್ನು ಹೇಳಿದ್ದಾನೆ ಎಂದು ನೋಡಿದ್ದೀರಿ. ಭಗವಂತನು ಸರ್ವೋತ್ತಮನಾಗಿದ್ದಾನೆ ಎಂದು ಮಹಾಭಾರತದ ಉಲ್ಲೇಖ ಸ್ತುತಿಗಳಲ್ಲಿ ಕೇಳುತ್ತೇವೆ. ಕೃಷ್ಣ ಪರಮಾತ್ಮ ಹಿಂದಿನ ಶ್ಲೋಕದಲ್ಲಿ ಹೇಳುತ್ತಾನೆ ನೀನ ನನ್ನ ಸಂಬಂಧಿ ನಾನು ನಿನ್ನವ ನೀನು ನನ್ನವ ನನ್ನವರೆಲ್ಲರೂ ನಿನ್ನವರು ನಿನ್ನವರೆಲ್ಲರೂ ನನ್ನವರು ಎಂದು ಹೆಳುತ್ತಾನೆ. ಶ್ರೀಕೃಷ್ಣನ ಮಾತೆ ಕೃಷ್ಣನ ಮಾತಿಗೆ ವ್ಯಾಖ್ಯೆಯಾಗಿದೆ, ಪರಮಾತ್ಮ ಅರ್ಜುನನನ್ನು ಎಲ್ಲ ರೀತಿಯಲ್ಲಿ ನಿಯಂತ್ರಿಸುವವ ಎಂದು ಹೇಳಿದ್ದು ಎಂದು ಕೃಷ್ಣ ಸೂಚಿಸುತ್ತಾನೆ. ಇಲ್ಲಿ ಏಕ್ಯವನ್ನು ಹೇಳುತ್ತಿಲ್ಲ ಪ್ರೀತಿ ಇದೆ ಎಂದು ಹೇಳಲಾಗಿದೆ. ಪರಸ್ಪರರ ಪ್ರೀತಿಯನ್ನು ಹೇಳಬೇಕಾಗುತ್ತದೆ. ಭಗವಂತ ಯಾರಿಗೆ ಯಾರಲ್ಲಿ ಪ್ರೀತಿಯನ್ನು ಕೊಡುತ್ತಾನೆ ಅದು ಭಗವಂತನ ಲೀಲೆ  ನಮ್ಮಿಬ್ಬರಲ್ಲಿ ವಾತ್ಸಲ್ಯ ಭಕ್ತಿಯ ಸಂಬಂಧವಿರುವದರಿಂದ ಯಾವುದೇ ಚಿಂತೆ ಮಾಡಬೇಡ ಭಯವನ್ನು ಪಡಬೇಡ ಎಂದು ಅಭಯವನ್ನು ನೀಡುತ್ತಾನೆ.


ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top