ಭೀಷ್ಮಾಚಾರ್ಯರು ಹೇಳುತ್ತಾರೆ, ದುರ್ಯೋಧನ ಪಾಂಡವರು ಎಲ್ಲಿದ್ದಾರೆ ಎಂದು ಹುಡುಕುವುದು ಗೊತ್ತಿಲ್ಲ, ಧಾರ್ಮಿಕರು ಎಲ್ಲಿ ಇರುತ್ತಾರೆ ಎಂಬುದನ್ನು ತಿಳಿಯಲು ಧಾರ್ಮಿಕರಾಗಿರಬೇಕು. ಗೂಢಚಾರರು ಹೇಳಿದ್ದಕ್ಕೆ ತಲೆ ಆಡಿಸುತ್ತಿರುವ ನೀನು ಅವರು ಸಾವನ್ನು ಹೇಗೆ ನಂಬುತ್ತಿ ಅವರು ವೇದಗಳು ಸ್ಮೃತಿಗಳು ಹೇಳಿದ ಎಲ್ಲ ಆಚರಣೆ ಮಾಡುವಂತಹವರು ಹಿರಿಯರ ಮಾತನ್ನು ಎಂದಿಗೂ ಉಲ್ಲಂಘನೆ ಮಾಡದವರು ಎಂಬುದೇ ಅವರ ದೊಡ್ಡ ಗುಣ ವೃದ್ಧರಿಗೆ ನಮಸ್ಕಾರ ಮಾಡಿದವರಿಗೆ ದೀರ್ಘಾಯಸ್ಸು. ಅಂತಹದರಲ್ಲಿ ಅವರಿಗೆ ಸಾವು ಹೇಗೆ ಬರುತ್ತದೆ ಎಂದು ಕೇಳುತ್ತಾರೆ. ಧರ್ಮವನ್ನು ಅನುಷ್ಠಾನ ಮಾಡುವ ಪಾಂಡವರು ಸುರಕ್ಷಿತರಾಗಿದ್ದಾರೆ ಎಂದು ಹೇಳಿದರು. ನಮ್ಮನ್ನು ರಕ್ಷಿಸಲು ನಮ್ಮ ಧರ್ಮವಿದೆ. ನಾವು ಹೇಗೆ ಧರ್ಮಾನುಷ್ಠಾನ ಮಾಡುತ್ತೇವೆ. ಅದರ ತಕ್ಕಂತೆ ನಾವು ಬದುಕುತ್ತೇವೆ. ನಾವು ಎಷ್ಟು ನಿಷ್ಠೆಯಿಂದ ಧರ್ಮ ಪಾಲನೆ ಮಾಡಿದರೆ ಅದಕ್ಕೆ ತಕ್ಕಂತೆ ಬದುಕುತ್ತೇವೆ. ಧರ್ಮೋ ರಕ್ಷತಿ ರಕ್ಷಿತಃ ಎಂಬ ನಂಬಿಕೆ ವಿಶ್ವಾಸ ಎಲ್ಲರಲ್ಲಿಯೂ ಇರಬೇಕು ಎಂದು ಭೀಷ್ಮಾಚಾರ್ಯರು ಹೆಳುತ್ತಾರೆ, ಮಾಡಿದ ಸಂಕಲ್ಪವನ್ನು ಎಡೆಬಿಡದೇ ಮಾಡಬೇಕು. ಆರಂಭಿಸಿದ್ದು ತಪ್ಪದೇ ಇರುವವರೆಗೇ ಮಾಡಬೇಕು. ಆರಂಭದಲ್ಲಿ ಇದ್ದ ಉತ್ಸಾಹ ನಿಷ್ಠೆ ಭಕ್ತಿಯಿಂದ ಮಾಡುತ್ತ ಇರುವರೂ ಕೊನೆಯ ತನಕ ಮಾಡಿದರೆ ಅವರು ಸುವೀರ್ಯರು ಹಾಗೆ ಇದ್ದ ಪಾಂಡವರಿಗೆ ಏನೂ ಆಗಿರಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಬಾಲಕ ಪಾಂಡವರ ಬಗ್ಗೆ ಭೀಷ್ಮಾಚಾರ್ಯರು ಹೇಳಿದಂತೆ ನಮ್ಮ ಹಿರಿಯರು ನಮ್ಮ ಬಗ್ಗೆ ಬೆಳೆಸಿಕೊಳ್ಳಬೇಕು.
ಎಲ್ಲಿ ಪಾಂಡವರು ಇರುತ್ತಾರೆ ಎಂಧರೆ ಧರ್ಮರಾಜ ಸತ್ಯವಂತ ಅವನು ಎಂತಹ ಸ್ಥಾನದಲ್ಲಿ ಇರುತ್ತಾನೆ ಎಂದು ಹೇಳುತ್ತಾರೆ, ಭೀಷ್ಮಚಾರ್ಯರು ಹೇಳುತ್ತಾರೆ. ಸತ್ಯಧರ್ಮನಾಗಿದ್ದ ಧರ್ಮರಾಜನು ಹೇಗಿದ್ದ ಎಂದು ಹೇಳುತ್ತಾರೆ,ಧರ್ಮರಾಜ ಇದ್ದಲ್ಲಿ ಅಮಂಗಲ ಇರುವುದಿಲ್ಲ, ದಾನಶೀಲರು ವದಾನ್ಯರು ಇರುತ್ತಾರೆ ಎಂದು ಹೆಳುತ್ತಾರೆ. ವದಾನ್ಯಕ್ಕೆ ಕೇವಲ ದಾನಶೀಲ ಎಂಬ ಅರ್ಥ ಮಾತ್ರವಲ್ಲ ವದಾನ್ಯಕ್ಕೆ ಪ್ರೀತಿಯಿಂದ ಮಾತನಾಡುವವ ಎಂಬ ಅರ್ಥವೂ ಇದೆ ಎನ್ನುತ್ತಾರೆ. ಯುಧಿಷ್ಠಿರ ಇರುವಲ್ಲಿ ಎಲ್ಲೂ ಪ್ರೀತಿಯಿಂದ ಇರುತ್ತಾರೆ. ಜಗಳಗಂಟರು ಪ್ರೀತಿಯಿಂದ ಜಿಪುಣರು ದಾನಶೀಲರಾಗುತ್ತಾರೆ. ಅಸೂಯೆ ಎಂಧರೆ ಗುಣಗಳಿದ್ದರೂ ದೋಷ ಹೇಳುವುದು ಇರ್ಷ್ಯೆ, ಗುಣವಂತ ಪ್ರಜೆಗಳ ಸಮುದಾಯ ಇದ್ದಲ್ಲಿ ಅವನ ಪ್ರಜೆಗಳು ಹೀಗೆ ಇರುತ್ತಾರೆ ಎಂದು ವರ್ಣಿಸುತ್ತಾರೆ. ರಾಜ್ಯಗಳಲ್ಲಿ ರಾಜರು ಧರ್ಮದಿಂಧ ಪ್ರಾಮಾನಿಕರಾಗಿದ್ದರೆ ಪ್ರಜೆಗಳಲ್ಲೂ ಅವೇ ಗುಣಗಳು ಬರುತ್ತವೆ ಎಂಧು ಮಹಾಭಾರತದಲ್ಲಿ ತಿಳಿಸುತ್ತಾರೆ. ಸಜ್ಜನರಿಗೆ ಕೆಟ್ಟವರ ಮಧ್ಯ ಇದ್ದರೂ ಅವರನ್ನು ತಿದ್ದಬಲ್ಲ ಎಂದು ಹೇಳುತ್ತಾರೆ. ಸಜ್ಜನರಲ್ಲಿ ತಮ್ಮ ಸುತ್ತಲಿರುವವರಲ್ಲಿ ಧರ್ಮ ಮಾರ್ಗದಲ್ಲಿ ನಡೆಸುವ ಸಾಮರ್ಥ್ಯ ಇರುತ್ತದೆ ಎಂಧು ಮಹಾಭಾರತ ಹೆಳುತ್ತದೆ.
ಸತ್ಯಧರ್ಮ ತೀರ್ಥರ ಕೊಡುಗೆ ಅಪಾರ ಬಹಳ ಗ್ರಂಥಗಳನ್ನು ರಚಿಸಿದ್ದಾರೆ. ಅವರ ಗ್ರಂಥಗಳ ರಚನೆಗೆ ಪ್ರಾರ್ಥನೆಯನ್ನು ಮಾಡಿ ಅವರ ಬಗೆಗೆ ಕೃತಜ್ಞತೆ ತಿಳಿಸಬೇಕು. ಸತ್ಯಧರ್ಮ ಶ್ರೀಪಾಂದಗಳವರು ಶ್ರೀಮದ್ ಭಾಗವತವೆಂಬ ಗ್ರಂಥವನ್ನು ತಂದುಕೊಟ್ಟಿದ್ದಾರೆ. ವೇದವ್ಯಾಸರ, ಶ್ರೀಮದಾಚಾರ್ಯರ ಬಳಿ ಇದೆ. ಇದನ್ನು ಕೊಡುವಿರೆ ಎಂದಾಗ ಸ್ವಲ್ಪ ಬೆಲೆ ಕೊಟ್ಟರೆ ಕೋಡುತ್ತೇವೆ ಎಂದರೆ ಸತ್ಯಧರ್ಮ ತೀರ್ಥರು ಒಂದೊಂದು ಶ್ಲೋಕಗಳಿಗೆ 8-10 ಅರ್ಥವನ್ನು ಹೇಳಿ ನಮಗೆ ತಲುಪಿಸಿದ್ದಾರೆ. ವಿರಾಟ ಪರ್ವಕ್ಕೆ ಸತ್ಯಧರ್ಮರು ಏಕೆ ವ್ಯಾಖ್ಯಾನ ಮಾಡಿದರು ಎಂದು ತಿಳಿಯಬೇಕೆಂದು ತಿಳಿಯಬೇಕಾದರೆ ಮೂಲರಾಮ ಸಾಕ್ಷಾತ್ ಆಗಿ ಒಲಿದು ಬಂದಿದ್ದ. ಸತ್ಯಧರ್ಮರು ಪೂರ್ವಾಶ್ರಮದಲ್ಲಿ ದರ್ಶನ ನೀಡಿದ್ದಾರೆ. ಸತ್ಯಧರ್ಮ ಎಂದು ಹೆಸರು ಇಡಲು ಇವರ ತಪಸ್ಸಿಗೆ ಒಲಿದು ಬಂದಿದ್ದಕೆ ಸತ್ಯ ಎಂದರೆ ಸಫಲ ಎಂಬ ಅರ್ಥವಿದೆ. ಸತ್ಯವರ ತೀರ್ಥರು ಇವರಿಗೆ ಸತ್ಯಧರ್ಮ ಎಂದು ಹೆಸರಿಟ್ಟರು.
ಪರಮಾತ್ಮ ಇವರ ಹತ್ತಿರ ಒಲಿದು ಬಂದ ಎಂದು ಇವರು ವಿರಾಟ ಪರ್ವ ಬರೆದರು. ವಿರಾಟರಾಜನು ಯಾರ ಕಾಲಗೆ ಬಿದ್ದನೋ ಅಂತಹ ಧರ್ಮರಾಜನ ಹೆಸರಿಟ್ಟುಕೊಂಡ ಸತ್ಯಧರ್ಮರ ಬರೆದಿದ್ದಾರೆ. ಉದ್ಯೋಗ ಪರ್ವ ಎಂದರೆ ಸಕಲ ಉಪಾಯಕೊಟ್ಟು ನಮ್ಮ ಮೂಲಕ ಸಕಲ ಕರ್ಮಗಳನ್ನು ಮಾಡಿಸುವ ಉದ್ಯೋಗ ನಾಂಕ ಪರಮಾತ್ಮನ ಮಹಿಮೆಯನ್ನು ಹೇಳಿದ್ದಾರೆ, ಇಂತಹ ಉಪಕಾರ ಮಾಡಿದ್ದಾರೆ. ಸತ್ಯಧರ್ಮರು 3 ಬಾರಿ ಶ್ರೀಮನ್ ನ್ಯಾಯ ಸುಧಾ ಗ್ರಂಥ ಬರೆದಿದ್ದಾರೆ. ತಮ್ಮ ಗುರುಮಠ, ರಾಜನ ಅರಮನೆ ಮತ್ತು ಪೂರ್ವಾಶ್ರಮದ ಮನೆಯಲ್ಲಿ ಬರೆದು ಇಟ್ಟಿದ್ದಾರೆ. ನಮ್ಮ ಮತಿಯಲ್ಲಿ ಶ್ರೀಮನ್ಯಾಯಸುಧಾ ಬರೆಯಲಿ ಎಂಧು ಬರೆದಿದ್ದಾರೆ. ಕವಿಕಂಠ ಮಣಿ ಎಂಬ ಗ್ರಂಥವನ್ನು ಬರೆದಿದ್ದಾರೆ. ನಮಸ್ಕಾರ ಮಾಡುವಾಗ ಮಠೇಷ್ಟ ಕುಲದೇವತಾ ಪ್ರಾರ್ಥನೆ ಮಾಡುತ್ತೇವೆ. 24 ಗುರುಗಳು ಎಂದು ಅವಧೂತರು ಹೆಳಿದಂತೆ ನಮಗೆ ಪ್ರೇರಣೆ ಮಾಡಿ ಎಂದು ಪ್ರಾರ್ಥಿಸುತ್ತಾರೆ. ಶ್ರೀಸತ್ಯಧರ್ಮರ ಮಹಿಮೆಯನ್ನು ಕೇಳಿದರೆ ರುದ್ರದೇವರು ಸ್ವತಃ ಬಂದು ಅವರ ಪೂಜೆಯನ್ನು ಪಡೆದು ಹೋಗಿದ್ದಾರೆ ಎಂದು ಕೇಳುತ್ತೇವೆ. ತ್ರಯೋದಶಿ ತಿಥಿಯಲ್ಲಿ ವೃಂದಾವನಸ್ಥರಾದರು ಸರ್ವಸಿದ್ಧಿ ತಿಥಿಯಂದು ತ್ರಯೋದಶಿ ಆದ್ದರಿಂದ ಅಂದೇ ವೃಂದಾವನಸ್ಥರಾಗಿದ್ದಾರೆ.
ಹೊಳೆನರಸೀಪುರದಲ್ಲಿ ವಸಿಷ್ಠ ಕರಾರ್ಚಿತ ನರಸಿಂಹದೇವರು ಅಲ್ಲಿ ಸತ್ಯಧರ್ಮ ತೀರ್ಥರಿಗೆ ಸ್ವತಃ ನರಸಿಂಹ ದೇವರೇ ಬಂದು ಕೊಟ್ಟರು ಎಂಧು ಅಲ್ಲಿಯ ಸ್ಥಳೀಯ ಅರ್ಚಕರು ಕತೆಯನ್ನು ಹೇಳುತ್ತಾರೆ. ನಮ್ಮ ಮನದ ನರಸಿಂಹದೇವರ ಮಂದಿರವನ್ನು ಅಜ್ಞಾನದ ಬೀಗ ಒಡೆದಂತೆ ನ್ಮಮ ಅಜ್ಞಾನ ಒಡೆದು ನಮಗೆ ಭಕ್ತಿಯಲ್ಲಿ ಹುಟ್ಟಲಿ ಎಂದು ಪ್ರಾರ್ಥಿಸಿದ್ದಾರೆ. ರಾಮನಾಥ ಪುರದಲ್ಲಿ ನ್ಯಾಯಸುಧಾ ಗ್ರಂಥದ ಪಾಠವನ್ನು ಹೇಳುತ್ತಿದ್ದವರು ಮೂಲ ಗ್ರಂಥ ಕೈಯಿಂದ ಬರೆದು, ಪಾಠವನ್ನು ಹೇಳಿ ಅದಕ್ಕೆ ವ್ಯಾಖ್ಯಾನ ಬರೆದವರು ಅಲ್ಲಿ ಗಂಗೆ ಉದ್ಭವಳಾಗಿ ಕಾವೇರಿಗೆ ಸೇರಿದ್ದಾಳೇ ಎಂದು ಹೇಳುತ್ತಾರೆ. ಸತ್ಯಧರ್ಮರಲ್ಲಿ ಚಿತ್ರಕಲೆ ಬಹಳ ಉತ್ತಮವಾಗಿತ್ತು. ರಾಮದೇವರ ತೊಟ್ಟಿಲಲ್ಲಿ ಹನುಂತದೇವರ ಚಿತ್ರವನ್ನು ಬರೆಇದ್ದಾರೆ. ಬಂಗಾರ ಬಣ್ಣ ಎಲ್ಲದಲ್ಲೂ ಬರೆಯುವ ಕಲೆ ಅವರಲ್ಲಿ ಇತ್ತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ