ಚುನಾವಣೆಯಲ್ಲಿ ಕ್ರಿಮಿನಲ್‌ಗಳ ಸ್ಪರ್ಧೆಗೆ ಕಡಿವಾಣ ಬೇಡವೇ?

Upayuktha
0


ಭಾರತೀಯ ಸಂವಿಧಾನ ಪಾಠ ಮಾಡುವ ಸಂದರ್ಭದಲ್ಲಿ ಜನಪ್ರತಿನಿಧಿಗಳಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ನಮ್ಮ ಸಂವಿಧಾನದಲ್ಲಿ ಉಲ್ಲೇಖಿಸಿರುವ ಅಂಶಗಳೇನು ಅನ್ನುವುದನ್ನು ವಿವರಿಸುವ ಸಂದರ್ಭದಲ್ಲಿ ಒಂದು ಪ್ರಮುಖವಾದ ಆರ್ಹತಾ ಗುಣವೆಂದರೆ He/She should not be a criminal. ಅಂದರೆ ಯಾವುದೇ ವ್ಯಕ್ತಿ ಅಪರಾಧಿಯಾಗಿರಬಾರದು; ಕ್ರಿಮಿನಲ್ ಅನ್ನುವುದಕ್ಕೂ ವಿಸ್ತಾರವಾದ ಅರ್ಥವಿದೆ.


ಈ ಉತ್ತರ ಕೊಟ್ಟ ತಕ್ಷಣವೇ ನಮ್ಮ ವಿದ್ಯಾರ್ಥಿಗಳು ಸಾಮಾನ್ಯವಾಗಿ ಕೇಳುವ ಪ್ರಶ್ನೆ ಅಂದರೆ- ಸಾರ್ ಅದೆಷ್ಟೊ ಅಪರಾಧಿಗಳು ಅಂದರೆ ಜೈಲಿನಲ್ಲಿ ಇರುವವರನ್ನು ಸೇರಿಸಿ ಅವರೆಲ್ಲರೂ ಇಂದು ಲೇೂಕಸಭೆ, ರಾಜ್ಯಸಭೆ, ವಿಧಾನಸಭೆಗಳಲ್ಲಿ ಸಂಭಾವಿತರಾಗಿ ಆಸೀನರಾಗಿ ಪ್ರತಿಜ್ಞಾ ವಿಧಿ ಬೇೂಧಿಸಿಕೊಂಡಿರುತ್ತಾರೆ. ಇದು ಹೇಗೆ ಸಾಧ್ಯ? ಇಂತಹ ಪ್ರಶ್ನೆಗಳಿಗೆ ಒಂದೇ ವಾಕ್ಯದಲ್ಲಿ ಉತ್ತರ ನೀಡುವುದು ತುಂಬಾ ಕಷ್ಟ. ಮಾತ್ರವಲ್ಲ ಪರಿಸ್ಥಿತಿ ನೇೂಡಿದಾಗ ಸಂವಿಧಾನದ ಹೊತ್ತಿಗೆಯನ್ನು ಕೈಯಲ್ಲಿ ಹಿಡಿದು ಆತ್ಮವಂಚನೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಉತ್ತರ ನೀಡಬೇಕಾದ ಪರಿಸ್ಥಿತಿ ಅಧ್ಯಾಪಕರದು.


ಸಂವಿಧಾನದಲ್ಲಿ ಏನು ಹೇಳಿದೆ "ಅವನು ಅಪರಾಧಿಯಾಗಿರಬಾರದು. ಅಪರಾಧಿ ಅಂತಹ ಒಂದು ಕೇೂರ್ಟ್‌ ಹೇಳಿದರೆ ತಕ್ಷಣವೇ ಅಪರಾಧಿ ಅನ್ನಿಸಿಕೊಂಡವ ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ. ಅಂತೂ ನಮ್ಮಲ್ಲಿ ಆತ ಅಪರಾಧಿಯೆಂದು ಅಂತಿಮವಾಗಿ ಹೇಳ ಬೇಕಾದರೆ ಐದಾರು ಹಂತಗಳಿವೆ. ಜಿಲ್ಲಾ ನ್ಯಾಯಾಂಗ, ರಾಜ್ಯ ಹೈಕೋರ್ಟ್, ರಾಷ್ಟ್ರದ ಸುಪ್ರೀಂ ಕೇೂರ್ಟ್‌, ಅದರೊಳಗೆ ಒಂದಿಷ್ಟು ಬೆಂಚುಗಳು ಈ ಎಲ್ಲಾ ಹಂತಗಳನ್ನು ದಾಟಿ ಬರಬೇಕು. ಅಲ್ಲಿಯ ತನಕ ಆ ವ್ಯಕ್ತಿ ಮೇಲೆ ಅಪವಾದವಿದೆ ಅಂತಲೇ ಅರ್ಥೈಸಬೇಕು ಬಿಟ್ಟರೆ ಅಪರಾಧಿ ಅನ್ನುವ ಹಾಗಿಲ್ಲ. ಹಾಗಾಗಿ ಈ ಎಲ್ಲಾ ಹಂತಗಳನ್ನು ದಾಟಿ ಬರುವಾಗ ಆತನ ಜನಪ್ರತಿನಿಧಿಯ ಕಾಲಾವಧಿಯೂ ಮುಗಿದಿರುತ್ತದೆ. ಮಾತ್ರವಲ್ಲ ಕೆಲವರಂತೂ ಸ್ವರ್ಗಸ್ಥರಾಗಿ ರಾಜಕೀಯ ಮುತ್ಸದ್ಧಿ ಸ್ಥಾನವನ್ನು ಅಲಂಕರಿಸಿ ಬಿಟ್ಟಿರುತ್ತಾರೆ.


ಪ್ರಸ್ತುತ ಸಂದರ್ಭದಲ್ಲಿ ಕೂಡಾ ಹತ್ತಾರು ಉದಾಹರಣೆಗಳನ್ನು ನೇೂಡಿದ್ದೇವೆ. ಜೈಲಿನಲ್ಲಿ ಇದ್ದು ಚುನಾವಣೆಗೆ ಸ್ಪಧಿ೯ಸಿ ಗೆದ್ದು ಜೈಲಿನಿಂದ ನೇರವಾಗಿ ಲೇೂಕಸಭಾ ಪ್ರಜಾದೇಗುಲಕ್ಕೆ ಬಂದು ಸಭಾಪತಿಗಳ ಎದುರು ನಿಂತು ಪ್ರತಿಜ್ಞೆ ಸ್ವೀಕರಿಸಿ ಮತ್ತೆ ಜೈಲಿಗೆ ಹೇೂಗಿ ಅಲ್ಲಿ ಮಧ್ಯಾಹ್ನದ ಊಟ ಮಾಡಿದ ದುಃಸ್ಥಿತಿಯನ್ನು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೇೂಡಿದ್ದೇವೆ. ಒಂದಂತೂ ನಿಜ ನಮ್ಮಲ್ಲಿ ನಾವೆಷ್ಟೇ ಕಡುಕ ಭ್ರಷ್ಟ, ಅನಾಚಾರಿಯಾಗಿದ್ದರೂ ಕೂಡಾ ಅದನ್ನು ತೊಳೆದು ಪರಿಶುದ್ಧರಾಗಿ ಸಮಾಜದಲ್ಲಿ ಗೌರವ ಸ್ಥಾನ ಪಡೆಯಬೇಕಾದರೆ ಇರುವ ಒಂದೇ ಒಂದು ಸುಲಭ ದಾರಿ ಅಂದರೆ ರಾಜಕೀಯಕ್ಕೆ  ಬರುವುದು.


ಇಲ್ಲಿ ನೀವು ಒಂದಿಷ್ಟು ಧನಿಕರಾಗಿ ಒಂದಿಷ್ಟು ಪ್ರಖ್ಯಾತಿಯೊ ಕುಖ್ಯಾತಿಯಾಗಿದ್ದರೂ ಕೂಡ ಜನ ನಿಮ್ಮನ್ನು ಮೆಚ್ಚಿದ್ದಾರೆ ಅಂದರೆ ನಮ್ಮ ಎಲ್ಲಾ ಪಕ್ಷಗಳು ನಿಮಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಂತೂ ಗ್ಯಾರಂಟಿ. ಅವರಿಗೆ ಸೀಟು ಮುಖ್ಯ ಗೆಲುವು ಮುಖ್ಯ ಅಧಿಕಾರ ಮುಖ್ಯ ಹೊರತು ನೈತಿಕತೆಯಲ್ಲ. ಈ ತಲ್ಲಣ ಸ್ಥಿತಿಯ ರಾಜಕಾರಣದಲ್ಲಿ ಕ್ರಿಮಿನಲ್‌ಗಳು ರಾರಾಜಿಸದೆ ಇರುತ್ತಾರಾ? 


ಇತ್ತೀಚೆಗೆ ಭಾರತದ ರಾಷ್ಟ್ರಪತಿಗಳು ಹೇಳಿದ ಮಾತು ಇದೇ. ನ್ಯಾಯ ನೀಡುವ ಪ್ರಕ್ರಿಯೆ ತ್ವರಿತವಾಗಿ ಮುಗಿಸಿ ಬಿಡಿ. ಇಲ್ಲವಾದರೆ "justice delayed means justice denied" ಅನ್ನುವ ಅರ್ಥದಲ್ಲಿಯೇ ಹೇಳಿದ್ದಾರೆ. ಮಾಜಿ ಲೇೂಕಾಯುಕ್ತ ಜಸ್ಟೀಸ್ ಸಂತೇೂಷ ಹೆಗ್ಡೆಯವರು ಕೂಡಾ ಸದಾ ಇದನ್ನೇ ಹೇಳುತ್ತಿದ್ದರು. "ನಮ್ಮಲ್ಲಿ ನ್ಯಾಯ ವಿಚಾರಣ ಹಂತಗಳು ಐದು ಹಂತಗಳು ಇದುಜಾಸ್ತಿ ಆಯಿತು. ಅಮೇರಿಕಾದಲ್ಲಿ ಕೇವಲ ಎರಡು ಹಂತಗಳಲ್ಲಿ ವಿಚಾರಣೆಯ ಪ್ರಕಿಯೆ ಮುಗಿದು ಹೇೂಗಿರುತ್ತದೆ. ನ್ಯಾಯ ತ್ವರಿತವಾಗಿ ಪ್ರದಾನವಾಗುತ್ತದೆ."


ಇಂದು ನಾವು ಬರೇ ಏಕ ರಾಷ್ಟ್ರ ಏಕ ಚುನಾವಣೆ ಕುರಿತಾಗಿ ಗಂಭೀರವಾಗಿ ತಲೆಕೆಡಿಸಿಕೊಂಡಿದ್ದೇವೆ ಬಿಟ್ಟರೆ ಜನಪ್ರತಿನಿಧಿಗಳ ಆರ್ಹತೆ ಯೇೂಗ್ಯತೆ ನೈತಿಕತೆಯ ಬಗ್ಗೆ ಸ್ವಲ್ಪ ವೂ ತಲೆ ಕೆಡಿಸಿಕೊಂಡಿಲ್ಲ. ಯಾಕೆ ಕೇಳಿದರೆ ಅದು ಬೇಡ. ಅದು ಬೇಡ ಯಾಕೆ ಕೇಳಿದರೆ ಕಾನೂನು ಮಾಡುವವರು ನಾವೇ ಅಲ್ವಾ? ಈ ನಿಟ್ಟಿನಲ್ಲಿ ಜನರು ಹಕ್ಕೊತ್ತಾಯ ಮಾಡಲೇಬೇಕಾದ ಕಾಲ ಘಟ್ಟದಲ್ಲಿ ಬಂದು ನಿಂತಿದ್ದೇವೆ.


- ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top