ಸಂಡೂರು:110/33/11ಕೆವಿ ಡೋಣಿಮಲೈ ವಿದ್ಯುತ್ ವಿತರಣಾ ಕೇಂದ್ರದಲ್ಲಿ 20 ಎಮ್.ವಿ.ಏ ಪವರ್ ಟ್ರಾನ್ಸ್ಫಾರ್ಮರ್ ತುರ್ತು ನಿರ್ವಹಣಾ ಕಾಮಾಗಾರಿ ಕೈಗೊಂಡಿರುವುದರಿಂದ ಸಂಡೂರು ಪಟ್ಟಣ ಸೇರಿದಂತೆ ಹಲವೆಡೆ ಸೆಪ್ಟಂಬರ್ 20 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ಸಂಡೂರು ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಂಡೂರು ಪಟ್ಟಣ ಸೇರಿದಂತೆ ದೇವಗಿರಿ ಐಪಿ, ಯಶವಂತನಗರ ಐಪಿ ಗ್ರಾಹಕರು ಮತ್ತು ಕೃಷ್ಣನಗರ, ಸುಶೀಲಾನಗರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ನಿರಂತರ ಜ್ಯೋತಿ ಮತ್ತು ಐಪಿಸೆಟ್ ಗ್ರಾಹಕರಿಗೆ ವಿದ್ಯುತ್ ಸರಬರಾಜಿನಲ್ಲಿ ಸ್ಥಗಿತ ಉಂಟಾಗಲಿದೆ. ಸಿರುಗುಪ್ಪ ನಾಳೆ ವಿದ್ಯುತ್ ವ್ಯತ್ಯಯ ಸಿರಗುಪ್ಪ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾರ್ಯ ಹಮ್ಮಿಕೊಂಡಿರುವುದರಿಂದ ಪಟ್ಟಣದ ಹಲವೆಡೆ ಸೆಪ್ಟೆಂಬರ್ 20 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಸಂಪರ್ಕಕಡಿತಗೊಳಿಸಲಾಗುತ್ತದೆ ಎಂದು ಜೆಸ್ಕಾಂ ಸಿರುಗುಪ್ಪೆ ಉಪ-ವಿಭಾಗದಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಿರುಗುಪ್ಪೆ ನಗರ, ಬಾಗೇವಾಡಿ, ದೇಶನೂರು,ಕೆಂಚನಗುಡ್ಡ, ದೇವಲಾಪುರ, ಬಗ್ಲೂರು, ರಾರಾವಿ, ಚಾಣಕನೂರು, ಕೆ.ಸೂಗೂರು, ರಾವಿಹಾಳು, ಬೀರಳ್ಳಿ, ಹಚ್ಚೋಳ್ಳಿ, ಕುಡುದರಹಾಳು, ಕುರುವಳ್ಳಿ, ಕೆ.ಬೆಳಗಲ್, ಅರಳಿಗನೂರು ಮತ್ತು ಸುತ್ತಮುತ್ತಲಿನ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ