ಇತ್ತೀಚೆಗೆ ನಮ್ಮ ರಾಜ್ಯ ಸರ್ಕಾರದ ಕಡೆಯಿಂದ ಒಂದು ಸುದ್ದಿ ಕೇಳಿದ್ದೆ. ಒಬ್ಬ ವ್ಯಕ್ತಿ ವಿಚಾರಣ ಕೈದಿ ಜೈಲಿನಲ್ಲಿರುವ ಕಾರಣ ಅಂತವರ ವಿಚಾರಣೆಗಾಗಿಯೇ ಶೀಘ್ರವಾಗಿ ತೀರ್ಮಾನವಾಗಬೇಕು ಅನ್ನುವ ಸಲುವಾಗಿ ವಿಶೇಷವಾದ ಆಸ್ಥೆ ವಹಿಸಿ ವಿಶೇಷ ನ್ಯಾಯ ಪೀಠವನ್ನು ರಚನೆ ಮಾಡುವ ಸಲುವಾಗಿ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಅನ್ನುವ ಸುದ್ದಿ ಪತ್ರಿಕೆಯಲ್ಲಿ ಓದಿದ ನೆನಪು. ಸರ್ಕಾರಕ್ಕೆ ಈ ಅಧಿಕಾರ ಕೊಟ್ಟವರು ಯಾರು? ಇದು ನ್ಯಾಯಾಂಗದ ಸ್ವಾಯತ್ತತೆಗೆ ವಿರೇೂಧವಲ್ಲವೆ? ತಮಗೆ ಬೇಕಾದ ವ್ಯಕ್ತಿಗಳಿಗೆ ಬೇಕಾದಾಗ ಇಂತಹ special court ಸೃಷ್ಟಿ ಮಾಡಿ ಅವರಿಗೆ ಉಪಕಾರ ಮಾಡುವುದು ಎಷ್ಟು ಸರಿ? ಈ ಪರಿಕಲ್ಪನೆ ಸಂವಿಧಾನ ಬಾಹಿರ ನಿರ್ಧಾರ ಎನ್ನಿಸಿಕೊಳ್ಳುವುದಿಲ್ಲವೇ?
ಸಂವಿಧಾನ 14 ನೇ ಅನುಚ್ಛೇದ ಹೇಳಿರುವುದು ಕಾನೂನಿನ ಎದುರು ಎಲ್ಲರೂ ಸಮಾನರು ಮತ್ತು ಸಮಾನ ಕಾನೂನಿನ ರಕ್ಷಣೆ. ಆದರೆ ಇಲ್ಲಿ ಈ ತತ್ವಗಳಿಗೆ ಎಲ್ಲಿದೆ ಬೆಲೆ? ಇದರಿಂದಾಗಿಯೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ಮತ್ತು ನ್ಯಾಯಾಲದ ಮೇಲಿನ ವಿಶ್ವಾಸ ಕಳೆದುಕೊಳ್ಳುವ ಪರಿಸ್ಥಿತಿ. ಪ್ರತಿಷ್ಠಿತರು ಎಂದು ಕರೆಸಿ ಕೊಂಡವರು ತಪ್ಪು ಮಾಡಿದರೆ ಅವರಿಗೆ ನ್ಯಾಯಾಲಯದಲ್ಲೂ ವಿಶೇಷ ಸವಲತ್ತು. ಇದೆಂತಹ ಪ್ರಜಾಪ್ರಭುತ್ವ ಸ್ವಾಮಿ? ಈ ರೀತಿಯಲ್ಲಿ ವಿಶೇಷ ನ್ಯಾಯ ಪೀಠದ ಸೃಷ್ಟಿಯೇ ಹತ್ತು ಹಲವು ರೀತಿಯಲ್ಲಿ ಸಂಶಯಕ್ಕೆ ಎಡೆ ಮಾಡಿಕೊಡುವುದಂತು ಸತ್ಯ. ತಪ್ಪು ಮಾಡಿದವ ಜನಸಾಮಾನ್ಯರಂತೆ ನ್ಯಾಯಾಂಗ ತನಿಖೆಗೆ ಒಳಗಾಗಲೇ ಬೇಕು. ಇದನ್ನೇ ಕರೆಯುವುದು ಕಾನೂನಿನ ಆಧಿಪತ್ಯ (Rule of law).
ಒಮ್ಮೆ ನಮ್ಮ ಮಾಜಿ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾಯರ ವಿರುದ್ಧವಾಗಿ ಲಕ್ಕು ಬಾಯಿ ಉಪ್ಪಿನ ಕಾಯಿ ಪ್ರಕರಣ ಡಿಲ್ಲಿ ಹೈಕೋರ್ಟ್ ನಲ್ಲಿ ದಾಖಲಾಗಿತ್ತು. ಈ ಕೇಸಿನಲ್ಲಿ ತನಿಖೆಯ ವಿಚಾರಣೆಗಾಗಿ ನಮ್ಮಮಾಜಿ ಪ್ರಧಾನಿ ನರಸಿಂಹರಾಯರು ಕೇೂರ್ಟಿಗೆ ಮಾಡಿಕೊಂಡ ವಿನಂತಿ ಅಂದರೆ "ನಾನು ಈ ದೇಶದ ಮಾಜಿ ಪ್ರಧಾನಿ ನಾನು ಕೇೂರ್ಟಿಗೆ ಬರುವುದು ಮರ್ಯಾದೆಯ ಪ್ರಶ್ನೆ. ಹಾಗಾಗಿ ನ್ಯಾಯಾಧೀಶರಾದ ತಾವುಗಳೇ ದೆಹಲಿಯ ವಿಜ್ಞಾನ ಭವನಕ್ಕೆ ಬಂದು ವಿಚಾರಣೆ ಮಾಡಿ ನಾನು ಅಲ್ಲಿಗೆ ಬರುತ್ತೇನೆ" ಎಂದು ಮನವಿ ಮಾಡಿಕೊಂಡಿದ್ದು ಇಂದಿಗೂ ನಮಗೆ ನೆನಪಿದೆ.
ಆದರೆ ತಮಾಷೆ ಅಂದರೆ ವಿಚಾರಣೆಗಾಗಿ ನ್ಯಾಯಾಧೀಶರು ಎಲ್ಲಿ ಕುಳಿತುಕೊಂಡಿರುತ್ತಾರೊ ಅದೇ ನ್ಯಾಯಾಲಯ ಅನ್ನುವ ತಿಳುವಳಿಕೆ ಅವರಿಗೆ ಬಾರದೇ ಇರುವುದು ವಿಶೇಷ. ಏನ್ನೆಯಾಗಲಿ ತಮಗೆ ಕಂಡ ವ್ಯಕ್ತಿಗಳಿಗೆ ವಿಶೇಷ ನ್ಯಾಯ ಪೀಠವನ್ನು ರಚನೆ ಮಾಡುವುದು ನಮ್ಮ ನ್ಯಾಯಾಂಗ ವ್ಯವಸ್ಥೆಗೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವುದು ಅತಿ ದೊಡ್ಡ ಕಳಂಕ.
ಹಾಗಾದರೆ ಜನಸಾಮಾನ್ಯರು ತಪ್ಪು ಮಾಡಿ ವಿಚಾರಣ ಕೈದಿಗಳಾಗಿರುವರ ಬದುಕಿನ ಪಾಡೇನು? ಅವರು ಈ ದೇಶದ ಪ್ರಜೆಗಳಲ್ಲವಾ?
ಒಮ್ಮೆ ರಾಷ್ಟ್ರಪತಿಗಳಾದ ಗೌರವಾನ್ವಿತ ದ್ರೌಪದಿ ಮುರ್ಮುರವರು ಸುಪ್ರೀಂ ಕೇೂರ್ಟಿನ ನ್ಯಾಯಾಧೀಶ ರನ್ನು ಉದ್ದೇಶಿಸಿ ಮಾತನಾಡುವಾಗ ಹೇಳಿದ ಮಾತು ಇನ್ನೂ ನನಗೆ ನೆನಪಿದೆ. "ಅದೆಷ್ಟೊ ಮಂದಿ ಸಣ್ಣಪುಟ್ಟ ತಪ್ಪು ಮಾಡಿ ವಿಚಾರಣ ಕೈದಿಗಳಾಗಿ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ದೊಡ್ಧ ದೊಡ್ಧ ತಪ್ಪು ಮಾಡಿದವರು ಬೇಲ್ ಪಡೆದು ಹೊರಗೆ ಇದ್ದಾರೆ. ಇಂತಹ ಬಡ ಕೈದಿಗಳಿಗೆ ತ್ವರಿತವಾಗಿ ನ್ಯಾಯ ಒದಗಿಸುವಲ್ಲಿ ತಾವೆಲ್ಲರೂ ಸಕ್ರಿಯವಾಗಿ ಕಾರ್ಯಶೀಲರಾಗಬೇಕು ಅನ್ನುವ ಸಂದೇಶ ನೀಡಿದ್ದು ಎಷ್ಟು ಅರ್ಥಪೂರ್ಣ ಮಾತು ನೇೂಡಿ. ಇಂದು ನಮ್ಮ ಸರ್ಕಾರ ಮಾಡ ಬೇಕಾದದ್ದು ಇಂತಹ ನಿರ್ಣಯ ಗಳೇ ಹೊರತು ಸ್ಪೆಷಲ್ ಕೇೂರ್ಟ್ ಸೃಷ್ಟಿಯ ಕುರಿತಾಗಿ ಅಲ್ಲ. ನ್ಯಾಯ ಎಲ್ಲರಿಗೂ ಸಮಾನವಾಗಿ ಪ್ರದಾನವಾದಾಗ ಮಾತ್ರ ಅಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸುವುದಕ್ಕೊಂದು ಸಾರ್ಥಕತೆ ಬರುತ್ತದೆ. ಅಲ್ವೇ?
- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ