ಚಿತ್ತ-ಭಿತ್ತಿ: "ಅಬ್ಬಾ ಆ ಹುಡುಗಿ" ಚಿತ್ರದಲ್ಲಿ ಅಳವಡಿಸಲಾಗಿರುವ 'ಸಂಸಾರ ನೌಕ' ನಾಟಕ

Upayuktha
0


ಬ್ಯಾರಿಸ್ಟರ್ ಮಾವನ ಮನಗೆ, ಸಾಹುಕಾರತನ ಕಳೆದು ಹೋಗಿರುವ, ಬಡತನದ ಪ್ರತಿನಿಧಿ, ಹರಕಲು ಬಟ್ಟೆ ಕುರುಚಲು ಗಡ್ಡದ, ಸುಂದರ ಬಂದಿದ್ದಾನೆ. ಶ್ರೀಮಂತ ಜಮೀನ್ದಾರನ ಮೊಮ್ಮಗನಾಗಿದ್ದ ಸುಂದರ ಸದಾ ಮಿತ್ರರಿಗೆ ಸಹಾಯ ಮಾಡುತ್ತ ಬಂದವ. ಪ್ರೇಮಿಸಿ-ಪ್ರೇಮವಿವಾಹ ಮಾಡಿಕೊಂಡಾಗÀ, ಪ್ರೇಮ ವಿವಾಹದ ಸಾಂಪ್ರದಾಯಿಕ ವಿರೋಧಿ ತಾತ, ತನ್ನ ಆಸ್ತಿಯಲ್ಲಿ ಕವಡೆ ಕಾಸು ಕೊಡದೇ ಮನೆ, ಮನಗಳಿಂದ ಆತನನ್ನ ಹೊರ ಹಾಕುತ್ತಾನೆ. ಈತ ಚೆನ್ನಾಗಿದ್ದಾಗ ಸಕ್ಕರೆಗೆ ಇರುವೆಗಳ ಸಾಲು ಮುತ್ತುವಂತೆ ಮುತ್ತುತ್ತಿದ್ದ ಸ್ನೇಹಿತರೆಲ್ಲ, ಈತನಿಗೆ ಶ್ರೀಮಂತಿಕೆ ಇಲ್ಲ ಎಂದು ತಿಳಿದೊಡನೆ, ಈತನನ್ನು ಗುರುತಿಸಲೂ ನಾಚಿ, ದೂರವಾಗುತ್ತಾರೆ. ಈ ಸ್ಥಿತಿಯಲ್ಲಿ ಟೈಫಾಯಿಡ್ ಆಗಿರುವ ಪುಟ್ಟ ಮಗುವಿನ ಚಿಕಿತ್ಸೆಗೂ ದುಡ್ಡಿಲ್ಲ. ಈ ಸ್ಥಿತಿಯಲ್ಲಿ ಮಿತ್ರ ಆನಂದ ಹಾಗೂ ವಿಠ್ಠಲರನ್ನು ಭೇಟಿಯಾಗಲು ಪಾರ್ಕಿಗೆ ಹೋಗಿ, ಅವರಿಂದ ಸಹಾಯ ಸಿಗದೇ, ಅಪಮಾನಿತನಾಗಿ ತಳ್ಳಲ್ಪಟ್ಟು, ನೊಂದು, ಬೆಂದು, ತನ್ನ ಜೋಪಡಿಗೆ ಹೋದಾಗ, ಹೆಂಡತಿ ಹಾಗೂ ಮಗುವನ್ನು ಆಕೆಯ ಅಪ್ಪ ಬ್ಯಾರಿಸ್ಟರ್ ತನ್ನ ಮನೆಗೆ ಕರೆದೊಯ್ದದ್ದು ತಿಳಿದು ಅಲ್ಲಿಗೆ ಧಾವಿಸುತ್ತಾನೆ.


ಆಗ ಮಾವ ಈತನನ್ನು ನೋಡಿ ತಿರಸ್ಕಾರದಿಂದ ನಗುತ್ತ ಹೇಳುತ್ತಾನೆ. “ಗಂಡ-ನೀನು ಭಂಡ. ನನ್ನ ಮಗಳನ್ನು ಪ್ರೇಮಿಸಿ ಮದುವೆಯಾಗಿ, ಆಕೆಗೆ ಮಗುವಿಗೆ ತುತ್ತು ಅನ್ನ ನೀಡಲೂ ಯೋಗ್ಯತೆ ಇಲ್ಲದವ. ತೊಲಗು. ನಿನ್ನೊಂದಿಗೆ ನನ್ನ ಮಗಳು ಮೊಮ್ಮಗುವನ್ನು ಎಂದೂ ಕಳಿಸಲಾರೆ. ನೀನು ಮತ್ತೆ ಆ ಮೊದಲಿನ ಸ್ಥಾನಕ್ಕೆ ಬಂದು, ಹಣ ಸಂಪಾದಿಸಿ ಬರುವವರೆಗೆ, ನನ್ನ ಮನೆಗೆ ಬರಬೇಡ. get out.” 1959ರಲ್ಲಿ, ನನ್ನ 8ನೇ ವರ್ಷದಲ್ಲಿ ನಾನು ನೋಡಿದ H.L.N.ಸಿಂಹ ಅವರ ನಿರ್ದೇಶನದ 'ಅಬ್ಬಾ ಆ ಹುಡುಗಿ' ಚಿತ್ರದಲ್ಲಿ ಅಳವಡಿಸಲಾಗಿದ್ದ 'ಸಂಸಾರ ನೌಕ' ನಾಟಕದ ಒಂದು ದೃಶ್ಯ ಇದು. 1938ರಲ್ಲಿ 'ಸಂಸಾರ ನೌಕ', ಕನ್ನಡ ವೃತ್ತಿ ರಂಗಭೂಮಿ ನಾಟಕ ಕ್ಷೇತ್ರದಲ್ಲಿ ಒಂದು ಕ್ರಾಂತಿಕಾರಿ ನಾಟಕ. ಪೌರಾಣಿಕ, ಐತಿಹಾಸಿಕ, ನಾಟಕ ಯುಗದಲ್ಲಿ, ಮೊದಲ ಸಾಮಾಜಿಕ ನಾಟಕ. ಮೂಲ ನಾಟಕಕಾರ ಹಾಗೂ ಈ ಚಿತ್ರದ ನಿರ್ದೇಶಕ H.L.N.ಸಿಂಹ ಬ್ಯಾರಿಸ್ಟರ್ ಆಗಿ, ಬಿ.ಆರ್. ಪಂತಲು ಸುಂದರನಾಗಿ ಹಾಗೂ ಎಂ.ವಿ.ರಾಜಮ್ಮ ಸರಳಳಾಗಿ ಅಭಿನಯಿಸಿದ್ದರು.

ನನಗೀಗ 70 ವರ್ಷ. 63 ವರ್ಷಗಳಾದ ಮೇಲೂ ಆ ದೃಶ್ಯ ಮರೆಯಲಾಗದೇ ನನ್ನ ನೆನಪಿನಲ್ಲಿ ಸ್ಥಿರವಾಗಿದೆ. ಇದೇ ಮೂಲ 'ಸಂಸಾರ ನೌಕ' ನಾಟಕ ರಂಗಭೂಮಿಗೆ 1939ಕ್ಕೆ ಬಂದಿತು. ಮುಂದೆ ಮಹಮ್ಮದ್ ಪೀರ್ ಸಾಹೇಬರು ಸುಂದರನ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸುತ್ತಿದ್ದರಂತೆ. ಬಿ.ಆರ್.ಪಂತಲು ಹಾಗೂ ಎಂ.ವಿ. ರಾಜಮ್ಮ ರಂಗಭೂಮಿಯಲ್ಲಿ ಹಾಗೂ ಮುಂದೆ ಚಲನಚಿತ್ರದಲ್ಲಿ ಸುಂದರ-ಸರಳಾ ಆಗಿ ಪಾತ್ರಗಳಲ್ಲಿ ಮಿನುಗಿದ್ದರು. ಸ್ತಿçà ನಾಟಕ ಮಂಡಳಿಯ ಆರ್.ನಾಗರತ್ನಮ್ಮ ಸಹ ಸುಂದರನ ಪಾತ್ರ ವಹಿಸಿದ್ದರು.


ನನ್ನ ತಂದೆ ಎನ್.ಎಸ್.ವಾಮನ್ ಸುಂದರನ ಪಾತ್ರದಲ್ಲಿ 1962ರಲ್ಲಿ ಅಮೋಘವಾಗಿ ಅಭಿನಯಿಸಿದಾಗ, ನಾನು ಮಗುವಿನ ಪಾತ್ರ ವಹಿಸಿದ್ದೆ. ಮುಂದೆ ನನ್ನ ತಂದೆ ವಾಮನ್ ಅವರ ಮಾರ್ಗದರ್ಶನದಲ್ಲಿ, ಇದೇ ನಾಟಕ ಕ್ಯಾಸೆಟ್ ಆದಾಗ, ಸಿಂಹ ಅವರ ಮಗ ಶೇಷಚಂದ್ರ-ಸುಂದರನಾಗಿ, ಕೆ.ಎಸ್.ಅಶ್ವಥ್ ಬ್ಯಾರಿಸ್ಟರ್ ಆಗಿ ಅಭಿನಯಿಸಿದ್ದರು. ಮುಂದೆ ಇದೇ ನಾಟಕದ ಎರಡು ದೃಶ್ಯಗಳನ್ನು ನಾನು ಅಭಿನಯಿಸುತ್ತಾ ಬಂದೆ. ಹೀಗೆ ವೃತ್ತಿರಂಗಭೂಮಿ, ಹವ್ಯಾಸಿ ರಂಗಭೂಮಿಗಳಲ್ಲಿ ರಂಗನಾಟಕವಾಗಿ, ಚಲನಚಿತ್ರವಾಗಿ, ಕ್ಯಾಸೆಟ್ ಆಗಿ ಮಿಂಚಿದ 'ಸಂಸಾರ ನೌಕ' ನಾನು ಮರೆಯಲಾರದಂತಹ ಅಪೂರ್ವ ಕೃತಿಯಾಗಿದೆ. 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top