ಬಳ್ಳಾರಿ: ಹಿಂದಿನ ಸರ್ಕಾರದ ಅಧಿಕಾರವಧಿಯಲ್ಲಿ ತಮ್ಮದೇ ಮುತುವರ್ಜಿಯಲ್ಲಿ ಜಾರಿಗೆ ತಂದಿದ್ದ ರಾಜ್ಯದ ಸರ್ಕಾರಿ ಪ್ರೌಢ ಶಾಲೆ ಮತ್ತು ವಸತಿ ಶಾಲಾ ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿಯನ್ನು ಪುನರಾರಂಭಿಸುವಂತೆ ಬಳ್ಳಾರಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮತ್ತು ಶಿಕ್ಷಣ ಸಚಿವರಿಗೆ ಮತ್ತು ಸಮಾಜ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಧ್ಯಮ ಜೊತೆ ಬಳ್ಳಾರಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಡಿ.ಸುರೇಶ್ ಮಾತನಾಡಿ, ಈ ಹಿಂದೆ ತಮ್ಮ ನೇತೃತ್ವದ ಅಧಿಕಾರದಲ್ಲಿದ್ದ ರಾಜ್ಯದಲ್ಲಿ ಕೆಲವು ದುಷ್ಕರ್ಮಿ ಗಳಿಂದ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ,ಮಾನಭಂಗ ಮುಂತಾದ ಅಮಾನವೀಯ ದೌರ್ಜನ್ಯಗಳು ನಡೆದಿದ್ದವು.ಆ ಘಟನೆಗಳಿಂದ ಅಗಾಧವಾಗಿ ನೊಂದಿದ್ದ ತಾವುಗಳು ಇಂತಹ ಕೃತ್ಯಗಳು ರಾಜ್ಯದಲ್ಲಿ ಇನ್ನೂ ಮುಂದೆ ನಡೆಯಬಾರದೆಂದು,ದೃಢ ನಿರ್ಧಾರಕ್ಕೆ ಬಂದು, ಅತ್ಯಾಚಾರಿಗಳಿಂದ ರಕ್ಷಣೆ ಮಾಡಿಕೊಳ್ಳಲು ಮತ್ತು ದುಷ್ಟರನ್ನು ಮಟ್ಟ ಹಾಕಲು ಹೆಣ್ಣು ಮಕ್ಕಳಿಗೆ ಸೂಕ್ತ ತರಬೇತಿ ನೀಡಬೇಕೆಂದು ತಿರ್ಮಾನಿಸಿ,ರಾಜ್ಯದಲ್ಲಿನ ಎಲ್ಲಾ ಆರ್.ಎಮ್.ಎಸ್.ಎ ಶಾಲೆಗಳಲ್ಲಿನ ಹೆಣ್ಣು ಮಕ್ಕಳಿಗೆ ಮಾತ್ರ ಕರಾಟೆ ತರಬೇತಿಯನ್ನು ಆರಂಭಿಸಿ, ಹೆಣ್ಣು ಮಕ್ಕಳಿಗೆ ಧೈರ್ಯ ತುಂಬಿದ್ದಿರಿ ಎಂದರು,
ಮುಂದೆ ಕೇಂದ್ರ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ರಾಜ್ಯದ ಕಿತ್ತೂರು ರಾಣಿಚೆನ್ನಮ್ಮ ಹಾಗೂ ಮೂರಾರ್ಜಿ ದೇಸಾಯಿ ವಸತಿ ಶಾಲೆಗಳ ಮತ್ತು ಮೆಟ್ರಿಕ್ ನಂತರದ ಮತ್ತು ಮೆಟ್ರಿಕ್ ಪೂರ್ವದ ವಸತಿ ಶಾಲೆಗಳಿಗೂ ಅದನ್ನು ವಿಸ್ತರಿಸಿ, ಹೆಣ್ಣು ಮಕ್ಕಳಲ್ಲಿ ದೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬಿದ್ದಿರಿ. ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಕರಾಟೆ ಪ್ರದರ್ಶನವನ್ನು ಏರ್ಪಡಿಸಿದ್ದು, ಇಡೀ ರಾಜ್ಯ ಮತ್ತು ಪಾಲಕರು ಕೂಡಾ ಇದನ್ನು ಮೆಚ್ಚಿಕೊಂಡು ತಮ್ಮನ್ನು ಕೊಂಡಾಡಿದರು.
ಈಗ ತರಬೇತಿ ಕಾರಣಾಂತರಗಳಿಂದ ನಿಂತು ಹೋಗಿದೆ.ತಮ್ಮಿಂದ ಆರಂಭವಾದ ಈ ಯೋಜನೆಯು ಈಗ ಪುನಃ ತಮ್ಮಿಂದಲೆ ಅದನ್ನು ಪುನಃ ಆರಂಭಿಸುವದರಿಂದ ಹೆಣ್ಣು ಮಕ್ಕಳಿಗೆ ದೈರ್ಯ ನೀಡುವದು ಅಲ್ಲದೆ ನಮ್ಮಂತಹ ಬಡ ನಿರುದ್ಯೋಗಿ ಕರಾಟೆ ತರಬೇತಿದಾರರ ಜೀವನ ಮತ್ತು ಅವರ ಕುಟುಂಬಗಳ ನೆಮ್ಮದಿಯ ಜೀವನಕ್ಕೆ ಸಹಕಾರಿಯಾಗುತ್ತದೆ. ಅಲ್ಲದೆ ತರಬೇತಿ ನೀಡುವುದರಿಂದ ಬರುವ ಗೌರವಧನದಿಂದ ನಮ್ಮ ಬದುಕು ನಡೆಯುತ್ತದೆ, ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳಲ್ಲಿ ಕರಾಟೆ ತರಬೇತಿಯನ್ನು ಕಡ್ಡಾಯ ಗೊಳಿಸಬೇಕು ಎಂದರು.
ಜಿಲ್ಲಾ ಪ್ರದಾನಕಾರ್ಯದರ್ಶಿ ಜಡೆಶ್,ಹಿರಿಯ ಕರಾಟೆ ಶಿಕ್ಷಕರಾದ, ಹಿರೇಮಠ್,ರವಿಕುಮಾರ್,ಸುನಿಲ್ ಗವಸ್ಕರ್,ಹುಲಿಗೆಶ್,ಪ್ರಸಾದ್,ಸಯ್ಯದ್ಫಿರೋಜ್,ಫಯಾಜ್ ಸೇರಿದಂತೆ ಹಲವಾರು ಜನರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ