ಶ್ರೀ ಸತ್ಯಾತ್ಮವಾಣಿ- 9: ನಮಸ್ಕಾರದ ಮಹತ್ವ

Upayuktha
0


ಮಸ್ಕಾರ ಬಹಳ ದೊಡ್ಡದಾದ ಪುಣ್ಯ ಸಾಧನ ಶ್ರೇಯಸ್ಸಾಧನ ಭಕ್ತಿಯಿಂದ ನಮಸ್ಕಾರವನ್ನು ಮಾಡಿ ಮಹಾನುಭಾವರಿಂದ, ಪುಣ್ಯವಂತರಿಂದ, ಜ್ಞಾನಿಗಳಿಂದ ಗುರುಹಿರಿಯರಿಂದ ಪಡೆಯುವ ಆಶೀರ್ವಾದದಿಂದ ಪುಣ್ಯ ಸಾಧನೆಯಾಗುತ್ತದೆ. ಇದರಂತೆ ಇದೇ ಸ್ಥಳಗಳಲ್ಲಿ ನಮಸ್ಕಾರ ಮಾಡದೇ ಹೋದಲ್ಲಿ ಪ್ರಾಣ ಶಕ್ತಿ ಹೊರಗೆ ಹೋಗುತ್ತದೆ, ಆಯಸ್ಸು ಕ್ಷೀಣವಾಗುತ್ತದೆ. ದೇವರು ದೇವತೆಗಳಿಗೆ ಅಷ್ಟೇ ಅಲ್ಲ ನಮಗಿಂತ ಉತ್ತಮರಾದವರೆಲ್ಲರಿಗೂ ನಮಸ್ಕಾರ ಮಾಡಲೇಬೇಕು.


ಮೃಕಂಡು ಮಹರ್ಷಿಗಳ ಪುತ್ರರು ಮಾರ್ಕಾಂಡೇಯ ಮಹರ್ಷಿಗಳು, ಅವರ ಆಯುಷ್ಯ ಅಲ್ಪವೆಂದು ಗೊತ್ತಾಗಿತ್ತು. ಚಿಕ್ಕವಯಸ್ಸಿನಲ್ಲಿ ದೊಡ್ಡವರಿಗೆ ನಮಸ್ಕಾರ ಮಾಡಬೇಕೆಂದು ಕಲಿಸುವುದು ಸನಾತನ ಸಂಸ್ಕೃತಿ, ಮೃಕಂಡುಗಳು ನಮಸ್ಕಾರದ ಮಹತ್ವ ತಿಳಿದು ಅವರ ಆಯುಷ್ಯದ ರಹಸ್ಯ ತಿಳಿದು ಆಶ್ರಮಕ್ಕೆ ಬಂದ ಹಿರಿಯರಿಗೆ ಜ್ಞಾನಿಗಳಿಗೆ ಮೊದಲಿಗೆ ನಮಸ್ಕಾರ ಮುಂದಿನ ಕೆಲಸ ಎಂದು ಪುತ್ರನಿಗೆ ಹೇಳಿದ್ದರು. ಮಾರ್ಕಾಂಡೇಯರು ತಂದೆಯ ಮಾತನ್ನು ಕೇಳಿ ಅವರು ಹೇಳಿದಂತೆ ಚಾಚೂ ತಪ್ಪದೇ ಮಾಡುತ್ತಾ ಇದ್ದರು. ನಮಸ್ಕಾರ ಮಾಡಿದವರಿಗೆ ಆಶೀರ್ವಾದ ಮಾಡಬೇಕು, ನಮಸ್ಕಾರ ಮಾಡಿಸಿಕೊಂಡವರು ಆಶೀರ್ವಾದಿಸಬೇಕು. ಸನ್ಯಾಸಿಗಳು ನಾರಾಯಣ ಸ್ಮರಣೆ ಮಾಡುತ್ತಾರೆ, ನಾ ಎಂದರೆ ಸ್ವರ್ಗಕ್ಕಿಂತ ಹೆಚ್ಚಿನ ಸೌಭಾಗ್ಯ ಸಾಮ್ರಾಜ್ಯ, ನಾ ಅಂದು ಅಹಂಕಾರ ಪಟ್ಟರೆ ನರಕ, ರಾ ಅಂದರೆ ರಾಮನಂತೆ ರಾಜ್ಯ ಮಾಡುವಂತೆ ಅಂತಹ ರಾಜ್ಯ ಗೌರವದಿಂದ ಬಾಳುವ ಆಶೀರ್ವಾದ, ಯ ಅಂದರೆ ಯಕ್ಷರಂತೆ ಧನ ಸಂಪತ್ತು ದೊರೆಯುತ್ತದೆ, ಣ ಎಂದರೆ ಸುಖ ಉತ್ತಮವಾದ ಸುಖ ಮೋಕ್ಷಾಬಂದವನ್ನು ಕೊಡುತ್ತಾನೆ ಎಂದು ಯತಿಗಳು ನಾರಾಯಣ ಸ್ಮರಣೆಯನ್ನು ಮಾಡಬೇಕು ಎಂದು ಹೇಳುತ್ತಾರೆ. ಮಾರ್ಕಾಂಡೇಯ ಮಹರ್ಷಿಗಳು ಬಾಗಿ ನಮಸ್ಕಾರ ಮಾಡಿದಾಗ ಸಪ್ತರ್ಷಿಗಳು ಧೀರ್ಘಾಯಸ್ಸಿನ ಆಶೀರ್ವಾದ ಮಾಡುತ್ತಾರೆ. ಮಾರ್ಕಾಂಡೆಯರು ಎದ್ದ ನಂತರ ನೋಡಿದರೆ ಅಲ್ಪಾಯುಷ್ಯವನ್ನು ಅವರ ಹಣೆಯಲ್ಲಿ ಕಂಡ ಸಪ್ತರ್ಷಿಗಳು ಬ್ರಹ್ಮದೇವರ ಬಳಿ ಮಾರ್ಕಂಡೇಯರನ್ನು ಕರೆದುಕೊಂಡು ಹೋದರು ನಾವೆಲ್ಲ ಮಾಡಿದ ಆಶೀರ್ವಾದ ಸುಳ್ಳಾದರೆ ಹೇಗೆ ಎಂದು ಕೇಳಿದರು. ಆಗ ಬ್ರಹ್ಮದೇವರು ಧೀರ್ಘಾಯಸ್ಸಿನ ಆಶೀರ್ವಾದ ಮಾಡುತ್ತಾರೆ. ಅಲ್ಪಾಯುಷ್ಯವನ್ನು ಪಡೆದು ಬಂದ ಮಾರ್ಕಂಡೇಯರ ಪುರಾಣವನ್ನು ಇಂದು ಮಾರ್ಕಾಂಡೇಯರ ಕಥೆಯನ್ನು ಕೇಳುತ್ತಾರೆ. ದೊಡ್ಡವರಿಗೆ ನಮಸ್ಕಾರ ಮಾಡಿದವರಿಗೆ ನಾವು ನಮಸ್ಕಾರ ಮಾಡಿದರೂ ನಮಗೆ ಆಯುಷ್ಯ ವೃದ್ಧಿಯಾಗುತ್ತದೆ. 


ಮಹಾಭಾರತದ ಯುದ್ಧ ಆರಂಭವಾಗುವ ಸಂದರ್ಭದಲ್ಲಿ ಅರ್ಜುನನು ಎಲ್ಲರಿಗೂ ತನ್ನ ಬಾಣಗಳಿಂದ ನಮಸ್ಕಾರ ಮಾಡುತ್ತಾನೆ ಮೊದಲೆರಡು ಬಾಣಗಳನ್ನು ಕಾಲಿಗೆ, ಮತ್ತು ಒಂದು ಬಾಣವನ್ನು ಆಜ್ಞೆ ಕೇಳಲು ಕಿವಿಗಳ ಬಳಿ ಬಾಣದಿಂದ ಆಜ್ಞೆ ಕೇಳುತ್ತಾನೆ. ಇಂದ್ರ ಮತ್ತು ಮಾತಲಿಯ ಸಂವಾದದ ಮೂಲಕ ಭೀಷ್ಮಾಚಾರ್ಯರು ಯುಧಿಷ್ಠಿರನಿಗೆ ಹೇಳುತ್ತಾರೆ, ಮಾತಲಿಯು ಯಾರಿಗೆ ನಮಸ್ಕಾರ ಮಾಡಬೇಕೆಂದು ಇಂದ್ರ ದೇವರಿಗೆ ಕೇಳಿದಾಗ ಇಂದ್ರ ದೇವರು ಹೇಳುತ್ತಾರೆ, ಧರ್ಮ ಅರ್ಥ ಕಾಮ ಇಂತಹ ಸಂದರ್ಭದಲ್ಲಿ ಕೂಡ ಧರ್ಮವನ್ನೇ ವಿಚಾರ ಮಾಡುತ್ತಾರೆಯೋ ಅವರು ಧರ್ಮ ಮಾರ್ಗದಲ್ಲಿರುವವರು, ಧರ್ಮದ ಹಾದಿಯಲ್ಲಿ ದುಡಿದು ಇರುವವರನ್ನು ಹುಡುಕಿ ನಾನು ನಮಸ್ಕಾರ ಮಾಡುತ್ತೇನೆ ಎಂದು ಹೇಳುತ್ತಾರೆ. ಧರ್ಮ ಮಾಡುವಾಗಲೂ ಅಧರ್ಮದ ವಿಚಾರ ಬರದೇ ಇರುವವರು ಯೋಗ್ಯರು, ತೀರ್ಥಕ್ಷೇತ್ರಗಳ ಯಾತ್ರೆಯನ್ನು ಅಧರ್ಮದ ವಿಚಾರ ಮಾಡುತ್ತಾ ಮಾಡುವವರು ಪಾಪ ಮಾಡಿದಂತೆ ಅಧರ್ಮದ ವಿಚಾರ ಬರದೇ ಧರ್ಮ ಕಾರ್ಯ ಮಾಡಿದವರು ನಮಸ್ಕಾರ ಯೋಗ್ಯರು ಎಂದು ಇಂದ್ರ ದೇವರು ಹೇಳುತ್ತಾರೆ.


ಹಿರಿಯರು ಹೇಗೆ ಇರಬೇಕು ಎಂಬುದಕ್ಕೆ ಇಂದ್ರ ದೇವರು ಉಪದೇಶ ಮಾಡುತ್ತಾರೆ, ಸ್ವಾಭಾವಿಕವಾಗಿ ಉತ್ತಮ ರೂಪ ಇದ್ದರೆ ಅಂತಹ ಗುಣಗಳು ಇರುತ್ತದೆ. ಶಾಸ್ತ್ರದಲ್ಲಿ ಹೇಳಿದ ಲಕ್ಷಣಗಳು ಯೋಗ್ಯವಾಗಿ ಇದ್ದರೆ ಅವರು ಗುಣವಂತರಾಗಿ ಇದ್ದಾರೆ ಎಂದು ಅರ್ಥ ಸದ್ಗುಣಗಳ ರೂಪಗಳನ್ನು ಪಡೆದುಕೊಂಡಿರವವರು ಭೋಗಗಳಲ್ಲಿ ನಿರಾಸಕ್ತಿ ಇದ್ದು ಭಗವಂತನ ನಾಮಸ್ಮರಣೆ ಮಾಡುತ್ತಾ ತಮ್ಮಷ್ಟಕ್ಕೆ ತಾವೇ ಇರುವವರಿಗೆ ನಮಸ್ಕಾರ ಮಾಡಬೇಕು ಎಂದು ಶ್ರೀಕೃಷ್ಣ ಪರಮಾತ್ಮನು ಭಾಗವತದಲ್ಲಿ ರುಕ್ಮಿಣಿ ಪತ್ರ ತಂದ ಬ್ರಾಹ್ಮಣನನ್ನು ಕುರಿತು ಹೇಳಿರುತ್ತಾನೆಯೋ ಅದೇ ಮಾತನ್ನು ಇಂದ್ರದೇವರು ಮಾತಲಿಗೆ ಹೇಳುತ್ತಾರೆ. ಯಾರು ಎಲ್ಲರೊಂದಿಗೂ ಪ್ರೀತಿಯಿಂದ ಇರುತ್ತಾರೋ ಯಾರಿಗೆ ವಿಶೇಷ ಮಾನ ಮಾರ್ಯಾದೆಗಳ ಅಪೇಕ್ಷೆಯಿರುವುದಿಲ್ಲವೋ ಅಂತವರಿಗೆ ನಮಸ್ಕಾರ ಮಾಡಬೇಕು. ಪಾತ್ರರಿದ್ದು ಅಪೇಕ್ಷೆ ಪಡದೇ ಇರುವವರಿಗೆ ನಮಸ್ಕಾರ ಮಾಡಬೇಕು.


ಎಲ್ಲ ಹಿರಿಯರಿಗೂ ಪಾತ್ರರಿಗೂ ಭಕ್ತಿ ಶ್ರದ್ಧೆಯನ್ನು ನಮಸ್ಕಾರ ಮಾಡುವ ಗುಣವನ್ನು ಹರಿ ವಾಯು ಗುರುಗಳು ನಮಗೆ ಕರುಣಿಸಲಿ.


ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top