ಜ್ಞಾನಿಗಳು ಶಾಸ್ತ್ರಜ್ಞರು ಅನೇಕ ಮಹನೀಯರ ಉಪದೇಶಗಳನ್ನು ಪಡೆದವರು ಶುದ್ದವಾದ ಸತ್ ಸಂಪ್ರದಾಯದಿಂದ ದೇವತೆಗಳ ತಾರತ ಮ್ಯಗಳಿಂದ ತಿಳಿದವರು ಜ್ಞಾನಿಗಳು ಧೀರರು. ತಮ್ಮ ಬದುಕಿಗಾಗಿ ಯಾವ ರೀತಿಯ ಪೂಜೆ ಜಪ, ಯಾತ್ರೆ ಮಾಡಬೇಕೆಂದು ತಿಳಿದವರು ಜ್ಞಾನಿಗಳು ಮತ್ತು ಧೀರರು. ತಮ್ಮ ಹಸಿವೆಯನ್ನು ಮಾತ್ರ ನೀಗಿಸಿಕೊಳ್ಳಲು ಇರುವವರು ಧೀರರಲ್ಲ. ನಿಜವಾದ ಧೀಃ ಮಹಾತ್ಮರಿಂಧ ಪಡೆದ ಜ್ಞಾನವನ್ನು ಪಡೆದವರು ಧೀರರು. ತನ್ನ ಕೆಲಸ ಮುಗಿದರಾಯಿತು ಎಂದು ಬೇರೆ ಬೇರೆ ದೇವತೆಯ ಉಪಾಸನೆಯಲ್ಲಿ ತೊಡಗದೇ ಮೂಲ ರೂಪನಾದ ಪರಮಾತ್ಮನ ಉಪಾಸನೆಯನ್ನು ತಾರತಮ್ಯ ಪೂರ್ವಕ ಜ್ಞಾನದಿಂದ ಉಪಾಸನೆ ಮಾಡಬೇಕು ಎಂದು ಶ್ರೀಮದಾಚಾರ್ಯರು ಹೇಳಿದಂತೆ ಮಾಡುತ್ತಾರೆಯೋ ಆ ರೀತಿ ಉಪಾಸನೆ ಮಾಡಬೇಕು, ಹೀಗೆ ಉಪಾಸನೆ ಮಾಡಿದವರು ಧೀರರು. ಪರಮಾತ್ಮನ ಮಹಿಮೆಯನ್ನು ತಿಳಿದು ಉಪಾಸನೆಯನ್ನು ಮಾಡಬೇಕು. ಭಕ್ತಿ ಇದ್ದಾಗ ಬೇರೆಲ್ಲವೂ ಗೌಣ ಆದರೆ ಬೇರೆಲ್ಲ ಆಚರಣೆ ಮಾಡಿ ಭಕ್ತಿಯೇ ಇಲ್ಲದಾಗ ಅದು ವ್ಯರ್ಥ, ಸರಿಯಾದ ಜ್ಞಾನವನ್ನು ಪಡೆದು ಭಕ್ತಿ ಪೂರ್ವಕ ಭಗವಂತನ್ನು ಉಪಾಸನೆ ಮಾಡಿದಾಗ ಭಗವಂತನು ಪ್ರೀತನಾಗುತ್ತಾನೆ.
ತಾರತಮ್ಯ ಪೂರ್ವಕ ತಿಳಿದು ಎಲ್ಲ ದೇವತೆಗಳಿಗಿಂತ ಪರಮಾತ್ಮನ ಸರ್ವೋತ್ತಮತ್ವನ್ನು ತಿಳಿದರೆ ಭಗವಂತನಿಗೆ ಪ್ರಿಯವಾದುದು, ಇದು ಸತ್ಯ ಹೀಗಾಗಿ ಸತ್ಯವನ್ನು ತಿಳಿದವರು ಪರಮಾತ್ಮನ ಪ್ರಿಯರು ಏಕೆಂದರೆ ಭಗವಂತ ಸತ್ಯಪ್ರಿಯ. ಇಂತಹ ಭಗವಂತನನನ್ನು ಸರ್ವೋತ್ತಮತ್ವ ತಿಳಿದವರಿಗೆ ಸದಾಕಾಲ ಒಲಿಯುತ್ತಾನೆ ಹಾಗೆಯೇ ತಾರತಮಮ್ಯ ಬಿಟ್ಟು ಉಪಾಸನೆ ಮಾಡಿದಲ್ಲಿ ಹಾನಿ ಮತ್ತು ದುಃಖವಿದೆ.
ಬೇರೆಲ್ಲ ದೇವತೆಗಳು ದೇವರ ಅಧೀನರಾಗಿದ್ದಾರೆ ಎಂದು ತಿಳಿದು ಉಪಾಸನೆ ಮಾಡಬೇಕು, ಅವರೇ ನಿಜವಾದ ಧೀರರು. ಅಂತದಲ್ಲಿ ಅಂದರೆ ತಾರತಮ್ಯದ ಅಂತ್ಯದಲ್ಲಿರುವವ ಭಗವಂತ ಜ್ಞಾನಕ್ಕಾಗಿ ಗುರುಗಳು, ಪರಮಗುರುಗಳು, ತತ್ವಾಭಿಮಾನಿ ದೇವತೆಗಳು, ಸರಸ್ವತಿ ವಾಯುದೇವರು ಬ್ರಹ್ಮದೇವರನ್ನು ಲಕ್ಷ್ಮಿ ದೇವಿಯನ್ನು ನೆನದು ಜ್ಞಾನ ಕೊಡುವ ರೂಪವಾದ ಹಯಗ್ರೀವ ದೇವರನ್ನು ಉಪಾಸನೆಯನ್ನು ಮಾಡಬೇಕು. ನಮ್ಮ ಅಪೇಕ್ಷೆಗೆ ತಕ್ಕಂತೆ ತನ್ನ ರೂಪಗಳನ್ನು ಹೊಂದಿದ್ದಾನೆ. ಅತೀ ಅದ್ಭುತವಾದ ವಿರಾಟ ರೂಪವನ್ನು ಭಗವಂತ ಪ್ರಪಂಚಕ್ಕೆ ತೋರುತ್ತಾನೆ, ಅನಂತ ರೂಪಗಳನ್ನು ತೋರುತ್ತಾನೆ. ಜ್ಞಾನಕ್ಕಾಗಿ ನನ್ನ ಗುರುಗಳಿಂದ ಆರಂಭಿಸಿ ಲಕ್ಷ್ಮಿ ದೇವಿಯವರೆಗೂ ಸ್ಮರಿಸಬೇಕು. ವ್ಯಾಸ ರೂಪಿಯಾದ ಭಗವಂತನನ್ನು ಸ್ಮರಿಸಬೇಕು. ನಮ್ಮ ಭಕ್ತಿಗೆ ತಕ್ಕಂತೆ ಶುದ್ಧವಾದ ಜ್ಞಾನವನ್ನು ವೇದವ್ಯಾಸ ದೇವರು ಕರುಣಿಸುತ್ತಾರೆ. ಜ್ಞಾನಕ್ಕೆ ತಕ್ಕಂತೆ ಮಾತು ಬರಬೇಕು ಎಂದಾಗ ಉತ್ತಮ ಮಾತುಗಳು ಬರಬೇಕು ಎಂದಾಗ ತಾರತಮ್ಯ ಪೂರ್ವಕ ಹಯಗ್ರೀವ ದೇವರ ಅನುಗ್ರಹ ದೇವರ ಪಡೆದರೆ ಉತ್ತಮ ವಾಣಿ ನಮಗೆ ದೊರೆಯುತ್ತದೆ. ಪರಮಾತ್ಮನ ಬಗೆಗೆ ಸರಿಯಾಗಿ ತಿಳಿಯದ ಜ್ಞಾನ ಇದ್ದರೆ ವ್ಯರ್ಥ. ಭಗವಂತನ ಮಹಿಮೆಯನ್ನು ತಿಳಿಸಿ, ಜ್ಞಾನವನ್ನು ಬೇಡಿದರೆ, ಉತ್ತಮ ವಾಣಿಯನ್ನು ಕೊಡುತ್ತಾನೆ.
ಆರೋಗ್ಯವನ್ನು ಕೊಡುವ ದೇವರು ಧನ್ವಂತರಿ, ಅಶ್ವಿನಿ ದೇವತೆಗಳು, ವರುಣ ದೇವ, ಸೂರ್ಯ ಮೊದಲಾದ ಆರೋಗ್ಯದ ಅಭಿಮಾನಿಗಳನ್ನು ಭಜಿಸಿ ಧನ್ವಂತರಿಯನ್ನು ಭಜಿಸದಿದ್ದರೆ ಆರೋಗ್ಯ ದೊರೆಯುವುದಿಲ್ಲ. ವೈದ್ಯರಲ್ಲಿ ಮತ್ತು ಔಷಧಿಯಲ್ಲಿ ಬರುವ ಭಗವಂತನ್ನು ನೆನೆದು ಸ್ಮರಿಸಿ ಸ್ವೀಕಾರ ಮಾಡಿದಾಗ ಆರೋಗ್ಯ ಹಾಗೂ ಪುಣ್ಯ ಪ್ರಾಪ್ತಿಯಾಗುತ್ತದೆ. ದುಃಖಿತರಾದ ಜನರಿಗೆ ಪರಮಾತ್ಮನು ಆಶ್ರಯನಾಗಿದ್ದಾನೆ. ಅವನನ್ನು ಓಷಧೀ ಔಷಧಿಯೆನ್ನುತ್ತಾನೆ. ವೈದ್ಯರಲ್ಲಿ ಕೂಡ ಪರಮಾತ್ಮನಿರುತ್ತಾನೆ.
ವೇದ್ಯೋ ವೈದ್ಯಃ ಬೇಗನೆ ನೋಡಲು ಸಿಗುವವ ಭಗವಂತ ಬಹುಬೇಗ ಸಿಗುತ್ತಾನೆ. ಅವನ ಯೋಗ ನಿಮಗೆ ಸದಾಬೇಕು, ಭಗವಂತನಿಗಾಗಿ ನಾವು ಕಾಯಬೇಕು ಅಂತಿಲ್ಲ ಯಾವಾಗಲೂ ಸಿಗುವ ಭಗವಂತ ಅಂತಸ್ಥನಾದ ಒಳಗಿರುವ ಭಗವಂತ ತಾರತಮ್ಯದ ಅಂತದಲ್ಲಿರುವ ರೂಪದಲ್ಲಿರುವ ಭಗವಂತ ಕೇವಲ ಮಧ್ಯಮ ದೇವತೆಗಳಲ್ಲಿ ಆಸಕ್ತರಾಗದ ಅಂತಿಮ ದೇವತೆಯನ್ನು ಭಜಿಸುವುದಾದರೆ ಮೋಕ್ಷವೇ ಸಿಗುತ್ತದೆ.
ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ