ದೇವರ ಸೇವೆಯನ್ನು ಮಾಡುವಾಗ ತನ್ನ ಯೋಗ್ಯತೆಗೆ ತಕ್ಕಂತೆ ಶಾಸ್ತ್ರದಲ್ಲಿ ವಿಹಿತವಾದ ಕರ್ಮಗಳನ್ನು ಭಗವಂತನಿಗೆ ನಿನ್ನ ಸೇವೆ ಮಾಡಿ ನಿನ್ನ ಪ್ರೀತಿಗೆ ಮಾಡಿದ್ದು ಅರ್ಪಣೆ ಮಾಡಿದರೆ ಮೋಕ್ಷವನ್ನು ಪಡೆಯಲು ಸಾಧ್ಯವಿದೆ ಎಂದು ಮಹಾಭಾರತದಲ್ಲಿ ಹೇಳಿದೆ. ಒಬ್ಬರನ್ನು ನೋಡಿ ಇನ್ನೊಬ್ಬರನ್ನು ನಾನು ಏಕೆ ಮಾಡಬಾರದು ಎಂಬ ಸ್ಪರ್ಧೆ ಮಾಡಿದರೆ ಯಾರಿಗೂ ಫಲ ಸಿಗುವುದಿಲ್ಲ. ನಮಗೆ ವಿಹಿತವಾದ ಯಾವುದೇ ಕಾರ್ಯವನ್ನು ಶ್ರದ್ಧೆಯಿಂದ ಮಾಡಬೇಕು ಭಕ್ತಿಯಿಂದ ಸಮರ್ಪಣೆಯನ್ನು ಸತ್ಕರ್ಮಗಳನ್ನು ಮಾಡಿದರೆ ಅವುಗಳ ಫಲ ಅನುಭವಿಸಲು ಸಾಧ್ಯವಿದೆ ಪ್ರತಿಯೊಬ್ಬರೂ ಈ ದೃಷ್ಠಿಯಲ್ಲಿ ಮಾಡಿದರೆ ಅವರವರ ಯೋಗ್ಯತೆಗೆ ತಕ್ಕಂತೆ ಮಾಡಬೇಕು.
ಮಾಡಿದ ಧರ್ಮ ಕಾರ್ಯಗಳಿಗೆ ಅನೇಕ ದ್ವಾರಗಳಿವೆ. ಆ ಎಲ್ಲ ಮಾರ್ಗಗಳಿಂದಲೂ ಪುಣ್ಯ ಪಡೆಯಬಹುದೆಂದು ಮಹಾಭಾರತ ಭಗವದ್ಗೀತೆಯಲ್ಲಿ ಹೇಳುತ್ತಾರೆ. ಸ್ತ್ರೀ ಪುರುಷರು ಎಲ್ಲರೂ ಕೂಡ ಎಲ್ಲ ತಮ್ಮ ಅನುಕೂಲ ಹಾಗೂ ಯೋಗ್ಯತೆಗೆ ಅನುಸಾರ ಕರ್ಮ ಮಾಡಿ ಉತ್ತಮ ಫಲವನ್ನು ಪಡೆಯಬೇಕು. ನಾವು ಭಾಗವತದಲ್ಲಿ ಕೇಳುತ್ತೇವೆ, ನಾರದರು ತಮ್ಮ ತಾಯಿಯನ್ನು ನೋಡಿ ಭಾಗವತರ ಸೇವೆಯನ್ನು ಮಾಡಿದ ಎಂಜಲು ಗೋಮಯ ಮಾಡಿದ ಪುಣ್ಯದಿಂದ ಬ್ರಹ್ಮದೇವರ ಮಕ್ಕಳಾಗಿ ಹುಟ್ಟಿದರು. ಉತ್ತಮರ ಸಂಗವನ್ನು ಎನಗಿತ್ತು ಸಲಹೋ ಎಂದು ಶ್ರೀಪಾದರಾಜರು ಹೇಳಿದಂತೆ ಉತ್ಕೃಷ್ಠರ ಸಂಗ ಮಾಡಿದುದರ, ಅಂದರೆ ಉತ್ತಮರ ಸೇವೆಯನ್ನು ಅವರಿಗೆ ಸಂತೋಷವಾಗುವಂತೆ ಮಾಡಿದ ಸೇವೆಯನ್ನು ಮಾಡಿದುದರ ಫಲವಾಗಿ ನಾರದರಿಗೆ ಅಂತಹ ಮಹಾಸೌಭಾಗ್ಯ ದೊರೆಯಿತು ಎಂದು ತಿಳಿಯುತ್ತದೆ. ಸೇವೆಯನ್ನು ಮಾಡುವಾಗ ನಾರದರಿಗೆ ಇದ್ದ ಶ್ರದ್ಧೆ ನಿಷ್ಠೆ ಮತ್ತು ಭಕ್ತಿಯಿಂದ ದೊರೆಯಿತು ಎಂದು ತಿಳಿಯುತ್ತದೆ.
ಧರ್ಮ ಮಾರ್ಗದಲ್ಲಿ ಇದ್ದವರು ಇತಿಹಾಸ ಪುರಾಣಗಳ ಶ್ರವಣ ಉತ್ತಮ ಸೇವೆಗಳನ್ನು ಮಾಡುವಾಗ ಗೃಹಕೃತ್ಯಗಳನ್ನು ಮರೆಯಬಾರದು. ಮನೆಯ ಕೆಲಸ ಮಡುವಾಗ ದೇವರನ್ನು ನೆನೆಯಬೇಕು. ಅಡುಗೆ ಮಡುವಾಗ ಹರಿಕಥಾಮೃತ ಸಾರ ಮೊದಲಾದ ಪಾಠವನ್ನು ಕಲಿತರೆ, ಬೇಸರಿಸದೇ ಭಗವಂತನ ಸೇವೆ ಮಾಡಿದಾಗ ಅಡುಗೆ ಮಾಡುವ ಕೆಲಸ ಮಹಾಲಕ್ಷ್ಮಿ ದೇವಿ ಮತ್ತು ಪ್ರಾಣದೇವರು ನಿಂತು ಮಾಡಿಸುತ್ತಿದ್ದಾರೆ ಎಂಬ ಅನುಸಂಧಾನದಿಂದ ಮಾಡಬೇಕು ಎಂದು ಹೇಳುತ್ತಾರೆ. ಮಕ್ಕಳಾಡಿಸುವಾಗ ಮಡದಿಯೊಂದಿಗೆ ಅಕ್ಕರದಿ ನಲಿವಾಗ ದೇವರನ್ನು ನೆನೆಯಬೇಕು ಎನ್ನುತ್ತಾರೆ.
ದಶಮ ಸ್ಕಂದದಲ್ಲಿ ಶ್ರೀಕೃಷ್ಣ ಪರಮತ್ಮ ಮಾಡಿದ ಲೀಲೆಯನ್ನು ನೆನೆಯುತ್ತ ಮಕ್ಕಳ ಆಟ ಪಾಟಗಳನ್ನು ನೆನೆದರೆ ಅದು ಪುಣ್ಯಕಾರ್ಯ ಅದೂ ಕೂಡ ಒಂದು ಸಾಧನೆ. ಯಾವುದೇ ಕಾರ್ಯ ಮಾಡುವಾಗ ಅಹಂಕಾರ ಪಡದೇ ಶ್ರದ್ಧೆಯಿಂದ ಮಾಡಿದರೆ ಮನೆಯ ಕೆಲಸಗಳನ್ನು ದೇವರ ಕೆಲಸಗಳನ್ನು ಮಾಡಿದರೆ ಮಕ್ಕಳನ್ನು ಚೆನ್ನಾಗಿ ರಕ್ಷಣೆ ಮಾಡುವುದು ಇದೂ ಕೂಡ ಒಂದು ರೀತಿಯ ಪೂಜೆಯೆಂದು ತಿಳಿದು ಮಾಡಬೇಕು ಎಂದು ಶಾಂಡಿಲಿ ಹೇಳುತ್ತಾಳೆ. ಸಣ್ಣ ಮಕ್ಕಳಿಗೆ ಆಟ ಆಡಿಸುವಾಗ ದೇವರ ಆಟಗಳನ್ನು ಆಡಿಸಿ ಧರ್ಮದ ಮಾರ್ಗವನ್ನು ಕತೆಗಳನ್ನು ಹೇಳಿ ಬೆಳೆಸಬೇಕು.
ಏಕೆಂದರೆ ಬೀಜವನ್ನು ಸಣ್ಣವಯಸ್ಸಿನಲ್ಲಿ ಬಿತ್ತಿದರೆ ಮುಂದೆ ಫಲ ಕೊಡುತ್ತದೆ ಎಂದು ಹೇಳುತ್ತಾಳೆ. ಮಕ್ಕಳಿಗೆ ಉತ್ತಮ ಶಿಕ್ಷಣಕೊಟ್ಟು, ಸಂಸ್ಕಾರ ಕೊಟ್ಟು ಉತ್ತಮ ವ್ಯಕ್ತಿಗಳನ್ನು ಮಾಡುವಂತೆ ಬೆಳೆಸಬೇಕು. ಹರಿನಾಮ ಸಂಕೀರ್ತನೆಯನ್ನು ಮಾಡಲು ಕಲಿಸಬೇಕು. ಹೆಣ್ಣುಮಗಳನ್ನು ಬೆಳೆಸುವಾಗ ಪರೀಶಿಕ್ಷಯೇ ಎಂದು ಹೇಳುತ್ತಾಳೆ. ಹೆಣ್ಣುಮಗಳನ್ನು ಕಲಿಸವುದು ದೊಡ್ಡ ಜವಾಬ್ದಾರಿ, ಗುಣವಂತಳು, ಶೀಲವಂತಳು, ಧರ್ಮಂತಳು ಆಗಬೇಕು ಎಂಬ ನಿಟ್ಟಿನಲ್ಲಿ ಅವಳನ್ನು ಮಾಡಿದೆ ಎಂದು ಹೇಳುತ್ತಾಳೆ. ಕುಮಾರರ ಪರಿಶಿಕ್ಷಣವನ್ನು ಗಂಡು ಮಕ್ಕಳಿಗೆ ಮಾಡಿರುತ್ತಾರೆ ಎಂದು ಹೇಳುತ್ತಾಳೆ.
ದೇವರ ಭದ್ರವಾದ ರಕ್ಷಾಕವಚಗಳನ್ನು ತೊಡಬೇಕು ಎಲ್ಲ ರೀತಿಯ ಜನರಿಂದ ಬರುವ, ಮನದ ಒಳಗಿನ ಎಲ್ಲ ಶತ್ರುಗಳಿಂದ ಬರುವ ದೇವತೆಗಳ ಅನುಗ್ರಹ ಪಡೆಯುವಂತೆ ಮಕ್ಕಳನ್ನು ರಕ್ಷಿಸಬೇಕು ಎಂದು ಶಾಂಡಿಲಿ ಹೇಳುತ್ತಾಳೆ. ಮಹಾಭಾರತದಲ್ಲಿ ಈ ವಿಚಾರ ಯಾಕೆ ಬಂದಿದೆ ಎಂದರೆ ಸಾಮಾನ್ಯ ಪ್ರೀತಿಯಿಂದ ಮಕ್ಕಳನ್ನು ಬೆಳೆಸುವುದಲ್ಲ, ಇದು ಹರಿ ಸೇವೆ ಎಂದು ತಿಳಿದು ಮಾಡಬೇಕು. ಮಕ್ಕಳ ಮೇಲೆ ಅನವಶ್ಯಕ ಕೋಪ ತಾಪ ಅಥವಾ ಅತೀ ಪ್ರೀತಿ ಮಾಡಬಾರದು ಎಂದು ಮಹಾಭಾರತದಲ್ಲಿ ಹೇಳುತ್ತಾರೆ.
ದೇವರು ಕೊಟ್ಟ ಧಾನ್ಯವನ್ನು ಎಷ್ಟು ಪ್ರೀತಿಯಿಂದ ಗೌರವದಿಂದ ಕಾಪಾಡಬೇಕು ಎಂದು ಮಹಾಭಾರತ ಹೇಳುತ್ತದೆ. ಆಹಾರ ಧಾನ್ಯಗ:ಳನ್ನು ಧಾನ್ಯ ಲಕ್ಷ್ಮಿಯನ್ನು ಹಾಳು ಮಾಬಾರದು.
ನಮಗೆ ಹೆಚ್ಚಾದುದನ್ನು ದಾನ ಮಾಡಬೇಕು. ಯಾವ ವಸ್ತುವನ್ನು ಹಾಳು ಮಾಡಬಾರದು, ಯಾರೇ ಕೊಟ್ಟಿದ್ದು ಹಾಳು ಮಾಡಬಾರದು ಅದರಂತೆ ದೇವರು. ನಮಗೆ ಕೊಟ್ಟ ಅನುಗ್ರಹವನ್ನು ಹಾಳು ಮಾಡಬಾರದು. ದೇವರಿಗೆ ನಾವು ಅವಮಾನ ಮಾಡಬಾರದು.
ನಮ್ಮನ್ನು ಉದ್ಧಾರ ಮಾಡಲು ದೇವರು ಪ್ರಯತ್ನ ಮಾಡಿ ನಮಗೆ ಕೊಟ್ಟ ಆಶೀರ್ವಾದವನ್ನು ನಾವು ಅವಮಾನ ಮಾಡಬಾರದು. ಎಲ್ಲ ತತ್ವಗಳನ್ನು ನಡೆಸುವ ದೇವರು ನಮಗೆ ಉಸಿರಾಡಲು ಗಾಳಿ, ತಿನ್ನಲು ಆಹಾರವನ್ನು ಅಕ್ಕಿ ಬೇಳೆಗಳನ್ನು ಸೃಷ್ಟಿ ಮಾಡಿಕೊಟ್ಟಾಗ ಅದನ್ನು ಹಾಳು ಮಾಡಿದರೆ ಅದು ಅಪಕಾರ ಎಂದು ಶಾಂಡಿಲಿ ತಿಳಿಸುತ್ತಾಳೆ.
ನಾವು ಹಾಳು ಮಾಡುವುದನ್ನು ಬಿಟ್ಟು ಉಳಿಸಿ ಸಜ್ಜನರಿಗೆ ಬಡವರಿಗೆ ಉಪಯೋಗವಾಗುವಂತೆ ದಾನ ಮಾಡಬೇಕು ಎಂದು ಹೇಳುತ್ತಾರೆ. ಮಕ್ಕಳನ್ನು ಪ್ರೀತಿಯಿಂದ ಪಶುಗಳಿಗೆ ಸಸ್ಯಗಳನ್ನು ಕೂಡ ಕಾಪಾಬೇಕು. ಪತಿ ಇಲ್ಲದಾಗ ಅಲಂಕಾರ ಮಾಡಿ ಕೊಳ್ಳಬಾರದು. ಸುಖವಾದ ನಿದ್ರೆಯಲ್ಲಿರುವವರನ್ನು ಎಬ್ಬಿಸಬಾರದು ಎಂದು ಮಹಾಭಾರತದ ಆದಿ ಪರ್ವದ ಕತೆಯ ಮೂಲಕ ಹೇಳುತ್ತಾರೆ. ಹೀಗೆ ಶಾಂಡಿಲಿ ಮತ್ತು ಸುಮನಳ ಸಂವಾದ ಕೇಳಿದವರು ಕೂಡ ಸ್ವರ್ಗದ ನಂದನವನದಲ್ಲಿ ವಿಹರಿಸುತ್ತಾರೆ ಎಂದು ಭೀಷ್ಮಾಚಾರ್ಯರು ಯುಧಿಷ್ಠಿರನಿಗೆ ಹೇಳುತ್ತಾರೆ.
ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ