ಸಮಗ್ರ, ಸಂಯುಕ್ತ ಚಿಕಿತ್ಸಾ ವಿಧಾನಗಳು ರೋಗಗಳನ್ನು ದೂರಮಾಡಲು ನೈಸರ್ಗಿಕ ಚಿಕಿತ್ಸಾವಿಧಾನಗಳನ್ನು ಅಳವಡಿಸಿಕೊಳ್ಳುತ್ತವೆ. ಕೇವಲ ತಾಂತ್ರಿಕ ಪರೀಕ್ಷಾ ಕ್ರಮಗಳು ರೋಗಿಯ ಕಾಯಿಲೆಯ ಲಕ್ಷಣ, ಕಾರಣಗಳನ್ನು ಬಿಚ್ಚಿಡಲಾರವು ಎಂಬ ನಗ್ನಸತ್ಯವನ್ನು ನಾವೆಲ್ಲರೂ ಅರಿತುಕೊಳ್ಳುವಂತೆ ಸಂದರ್ಭಗಳು ಮಾತನಾಡುವುದಕ್ಕೆ ತೊಡಗಿವೆ. ಇಂದಿನ ಜ್ವಲಂತ ಹಾಗೂ ಆರಂಭದ ಹಂತದಲ್ಲಿ ನಮ್ಮಿಂದ ಮರೆಯಾಗಿಯೇ ಒಳಸಂಚು ರೂಪಿಸುವ ಕ್ಯಾನ್ಸರ್ ಮನುಷ್ಯನಿಗೊಂದು ಸವಾಲಾಗಿದೆ. ಇಂದಿನ ಅಲೋಪಥಿ ಚಿಕಿತ್ಸಾವಿಧಾನಗಳು ಬಳಕೆಯಲ್ಲಿದ್ದರೂ, ಕೀಮೋಥೆರಪಿ, ರೇಡಿಯೋಥೆರಪಿಗೆ ಒಳಗಾಗುವ ರೋಗಿಗಳು ಅನುಭವಿಸುವ ಅನಿವರ್ಯ ಆರ್ಥಿಕ, ದೈಹಿಕ ಮತ್ತು ಮಾನಸಿಕ ಹಿಂಸೆ, ಖಿನ್ನತೆಯೊಂದಿಗೆ ಜೊತೆಗೂಡಿ ನರಕಯಾತನೆಯನ್ನು ಹುಟ್ಟುಹಾಕುತ್ತದೆ. ಮತ್ತು ಅದು ಕ್ಯಾನ್ಸರ್ ಕಾಯಿಲೆಗಿಂತಲೂ ಗಂಭೀರವಾಗಿದೆ.
ಎಷ್ಟೋ ಸಲ, ಕ್ಯಾನ್ಸರ್ ನಿಂದ ಸಾಯುವ ಬದಲು, ಇವುಗಳ ಅಡ್ಡ ಪರಿಣಾಮಗಳಿಂದಲೇ ರೋಗಿ ಬೇಗನೇ ಯಮಲೋಕ ಸೇರುವಂತಾಗುತ್ತದೆ. ರೋಗಿ ಸಾಯುತ್ತಾನೆ ಎಂದು ಖಚಿತವಾಗಿ ಗೊತ್ತಿದ್ದರೂ, ಪರ್ಯಾಯ ಚಿಕಿತ್ಸೆಯನ್ನು ಸೂಚಿಸುವುದಕ್ಕೆ ಹಮ್ಮು ಬಿಡುವುದಿಲ್ಲ. ರೋಗಿ ಸಾಯುವುದರೊಳಗೆ ತಮ್ಮ ಜೇಬು ತುಂಬಿಸಿಕೊಳ್ಳುವ ಕಾರ್ಪೋರೇಟ್ ಆಸ್ಪತ್ರೆಗಳು ಮಾಂಸಭಕ್ಷಣೆಗೆ ಹಸಿದ ರಣಹದ್ದುಗಳಂತೆ ಕಾಯುತ್ತಾ ಕುಳಿತಿರುತ್ತವೆ! ಅದಕ್ಕೇ ವೈದ್ಯವಿಜ್ಞಾನಿಯೊಬ್ಬ ಹೇಳಿದ- "ಜಗತ್ತಿನ ಎಲ್ಲಾ ಆಧುನಿಕ ಔಷಧಗಳನ್ನು ಸಮುದ್ರಕ್ಕೆ ಎಸೆದರೆ ಜಲಚರಗಳೆಲ್ಲಾ ಸಾಯಬಹುದು. ಆದರೆ ಮಾನವ ಜಗತ್ತಿಗೆ ಒಳಿತಾಗಬಹುದು". ಕ್ಯಾನ್ಸರ್ ಕಾಯಿಲೆಯ ಔಷಧಗಳಿಗೆ ಮನುಷ್ಯನನ್ನು ಪ್ರಯೋಗಪಶುವಾಗಿಸಿದ ಆಧುನಿಕ ವೈದ್ಯಕೀಯ ಚಿತ್ತವೃತ್ತಿಯನ್ನು ಉದ್ದೇಶಿಸಿಯೇ ಈ ಮಾತನ್ನು ಆತ ಹೇಳಿದಂತಿದೆ. ಇದನ್ನು ಶಬ್ದಶಃ ಅರ್ಥಮಾಡದೆ, ಅದರ ಇಂಗಿತವನ್ನು ಅರ್ಥೈಸಿದರೆ ಸಾಕು. ಈಗ ನಾವೆಲ್ಲ ವೈಜ್ಞಾನಿಕವಾಗಿ ಪ್ರಮಾಣೀಕರಿಸುತ್ತಿರುವ ಸತ್ಯಗಳನ್ನು, ಧಾರ್ಮಿಕ ಅನುಶಾಸನಗಳ ಮೂಲಕ ಬದುಕಿನಲ್ಲಿ ರೂಢಿಸಿಕೊಳ್ಳುವಂತೆ ರೂಪುಗೊಳಿಸಿದ ಭರತಖಂಡದ ಋಷಿಪರಂಪರೆಗೆ ಶತಕೋಟಿ ನಮನ.
ಪುರಾತನ ಭಾರತದಲ್ಲಿ ಪ್ರಜ್ಞಾಪೂರ್ವಕವಾಗಿ ಒಪ್ಪಿಕೊಂಡ, ಆದರೆ ನಾವು ಮರೆತು ಅಸಡ್ಡೆ ತಳೆದಿರುವ ಅನಂತ ಸಂಗತಿಗಳು, ಇಂದು ಕ್ಯಾನ್ಸರ್ ಚಿಕಿತ್ಸೆಗೆ ಗೋವಿನ ಕಡೆಗೆ ಮುಖಮಾಡುವಂತೆ ಮಾಡಿದೆ. ಅಧ್ಯಯನ, ಸಂಶೋಧನೆ, ಶಾಸ್ತಿçÃಯ ಉಲ್ಲೇಖಗಳು, ಕ್ಯಾನ್ಸರ್ ಮಾತ್ರವಲ್ಲದೆ ಆಮವಾತದಂತಹ ಅಟೋಇಮ್ಯೂನ್ ಕಾಯಿಲೆಗಳು, ಥೈರಾಯ್ಡ್ ಸಮಸ್ಯೆ, ಅಂಡಾಶಯದ ಗುಳ್ಳೆಗಳಿಗೆ (ಪಿ.ಸಿ.ಒ.ಡಿ) ಗೋಉತ್ಪನ್ನಗಳನ್ನು ಸಂಯೋಜಿಸಿ ಮಾಡಿದ ಆಯುರ್ವೇದ ಔಷಧಗಳು ಪರಿಹಾರ ಸೂಚಿಸಿವೆ. ಹಾಲು, ತುಪ್ಪ, ಮೊಸರು, ಗೋಮೂತ್ರ, ಗೋಮಯಗಳನ್ನು ಪಂಚಗವ್ಯ ಎಂದು ಉಲ್ಲೇಖಿಸಲಾಗಿದೆ.
ಆಯುರ್ವೇದದಲ್ಲಿ ಪಂಚಗವ್ಯ ಘೃತವು, ತುಪ್ಪವನ್ನು ಪ್ರಧಾನ ದ್ರವ್ಯವಾಗಿಟ್ಟುಕೊಂಡು ತಯಾರಿಸುವ ಔಷಧ. ಪಂಚಗವ್ಯವು ದೇಹದ ಕಾಯಿಲೆಗೆ ಮೂಲಕಾರಣವಾದ ಪಂಚಮಹಾಭೂತಗಳ ಏರುಪೇರುಗಳಿಗೆ ಶಮನಕಾರಿ. ಮನೋವಿಕೃತಿಗಳಿಗೂ ದಮನಕಾರಿ. ಬೆಂಗಳೂರಿನ ಆಯುರ್ವೇದ ಪಂಚಗವ್ಯ ಚಿಕಿತ್ಸಾ ತಜ್ಞ, 25 ವರ್ಷಗಳಿಂದ ಕ್ಯಾನ್ಸರ್ಗೆ ಗವ್ಯ ಚಿಕಿತ್ಸೆಯ ಮೇಲೆಯೇ ಅಧ್ಯಯನ, ಸಂಶೋಧನೆ ಮಾಡಿದ, ಕ್ಯಾನ್ಸರ್ ರೋಗಿಗಳನ್ನು ಗುಣಪಡಿಸಿದ ವೈದ್ಯತಪಸ್ವಿ ಡಾ.ಡಿ.ಪಿ.ರಮೇಶ್ ಇವರು ತಮ್ಮ "ಕ್ಯಾನ್ಸರ್ ಗೊಂದು ಆನ್ಸರ್ ಎಂಬ ಪುಸ್ತಕದಲ್ಲಿ ನೈಜ ಘಟನೆಗಳನ್ನು ಆಧಾರಸಹಿತ ಉಲ್ಲೇಖಿಸಿದ್ದಾರೆ. ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ.
51 ವರ್ಷದ ಮಹಿಳೆ. ಎದೆಯ ಎಡಭಾಗದಲ್ಲಿ ಸಣ್ಣ ಗುಳ್ಳೆ. ಮೂರು ತಿಂಗಳುಗಳಿAದಲೇ ಇತ್ತು. ಒಂದು ವರ್ಷದಿಂದ ಆಗಾಗ ಬರುವ ಜ್ವರ, ಬಾಯಿ ಒಣಗುವುದು, ಹಸಿವೆ ಇಲ್ಲದಿರುವುದು, 4 ವರ್ಷದಿಂದ ಬೆನ್ನಿನ ಕೆಳಭಾಗ ನೋವು, 5 ವರ್ಷದಿಂದ ಮರುಕಳಿಸುವ ಕಣ್ಣಿನ ಸೂಕ್ಷಾö್ಮಣುಸೋಂಕು, ಎದೆಯ ಎಡ ಭಾಗದಲ್ಲಿ ಕೆಂಪಾದ ಭಾಗ, ಮುಟ್ಟಿದರೆ ನೋವು. ಸ್ತನದ ಕ್ಯಾನ್ಸರ್ ಎಂದು ದೃಢೀಕರಿಸುವ ತಪಾಸಣೆಗಳ ಮೂಲಕ ಗೊತ್ತಾದ ನಂತರ, ಪಂಚಗವ್ಯ ಚಿಕಿತ್ಸೆಗೆ ಒಳಗಾದರು.ಚಿಕಿತ್ಸೆಯ ನಂತರ ಪೆಟ್ ಸ್ಕಾö್ಯನ್ನಲ್ಲಿ ಕ್ಯಾನ್ಸರ್ ಕೋಶಗಳು ಕಂಡುಬರಲಿಲ್ಲ.ಚಿಕಿತ್ಸೆಗೆ ಮೊದಲು ಕ್ಯಾನ್ಸರ್ ಮಾರ್ಕರ್ ಮಟ್ಟವು 8.5 ಇದ್ದಿದ್ದು, ಚಿಕಿತ್ಸಾ ನಂತರ 2 ರಷ್ಟಕ್ಕೆ ಇಳಿದಿತ್ತು. ಎರಡು ವರ್ಷಗಳ ಪಂಚಗವ್ಯ ಚಿಕಿತ್ಸೆ ಹೀಗೊಂದು ಫಲಿತಾಂಶವನ್ನು ದಾಖಲಿಸಿತು.
ಇನ್ನೊಬ್ಬಳು 53 ವರ್ಷದ ಮಹಿಳೆ. ಎದೆಯ ಎಡ (ಸ್ತನ) ಭಾಗದಲ್ಲಿ ನೋವು, ಬದಲಾದ ಬಣ್ಣ ಮತ್ತು ಸುಸ್ತು, 1 ವರ್ಷದಿಂದ. ಆಗಾಗ ಜ್ವರ, ಹಸಿವೆ ಇಲ್ಲದಿರುವುದು, ಬಾಯಿ ಒಣಗುವುದು, ಎಡ ಸ್ತನದ ಡಕ್ಟಲ್ ಕರ್ಸಿನೋಮಾ ಎಂದು ಗುರುತಿಸಲ್ಪಟ್ಟಿತು. ಮಾಸ್ಟೆಕ್ಟಮಿ ಶಸ್ತçಚಿಕಿತ್ಸೆಗೆ ಒಳಗಾಗಿದ್ದಳು. ಕೀಮೋಥೆರಪಿ ಮಾಡಿರಲಿಲ್ಲ. ಆರು ತಿಂಗಳ ಗವ್ಯ ಚಿಕಿತ್ಸೆಯ ನಂತರ, ಎಲ್ಲಾ ಲಕ್ಷಣಗಳೂ ಗುಣವಾಗಿ, ತಪಾಸಣೆಗಳ ಮೂಲಕ ಸಾಬೀತಾಯಿತು. ಮತ್ತೆ ಆಕೆಯ ದೇಹದ ಯಾವುದೇ ಭಾಗದಲ್ಲಿ ಗಡ್ಡೆಗಳು ಕಾಣಿಸಲಿಲ್ಲ. ಆಕೆಗೆ ಪಂಚಗವ್ಯ ಮತ್ತು ಪಂಚಕರ್ಮ ಸಂಜೀವಿನಿ ಆಯಿತು.
2017ನೇ ಇಸವಿ. 45 ವರ್ಷದ ಮಹಿಳೆ. ಮೈಕೈನೋವು, ತಲೆಸುತ್ತು, ಹಸಿವೆ ಇಲ್ಲದಿರುವುದು, ಕೂದಲು ಉದುರುವುದು, ಅತಿಯಾದ ಹಾಗೂ ಕ್ರಮ ತಪ್ಪಿದ ಮಾಸಿಕ ಋತುಸ್ರಾವ ಇತ್ತು. 3 ಸುತ್ತು ಕೀಮೋಥೆರಪಿ ಪೂರ್ಣಗೊಂಡಿತ್ತು. ಆದರೆ ಲಕ್ಷಣಗಳು ಕಡಿಮೆ ಆಗಿರಲಿಲ್ಲ. ಅಸ್ಥಿಮಜ್ಜೆ (ಬೋನ್ ಮ್ಯಾರೋ ಟ್ರಾನ್ಸಪ್ಲಾಂಟೇಷನ್ಗೆ ತಯಾರಾಗಿದ್ದಳು. ಪಂಚಗವ್ಯ, ಪಂಚಕರ್ಮ, ಆಹಾರಕ್ರಮ, ಯೋಗ, ಪ್ರಾಣಾಯಾಮಗಳಿಂದ ಲ್ಯೂಕಿಮಿಯಾ ರೋಗಿ ಮತ್ತೆ ಬದುಕು ಕಂಡಳು.
ಇನ್ನೊಬ್ಬರಿಗೆ ಗುದನಾಳದ ಕ್ಯಾನ್ಸರ್. 42 ವರ್ಷದ ಪುರುಷ. ಮಲದ್ವಾರದಿಂದ ರಕ್ತಸ್ರಾವ, 6 ತಿಂಗಳುಗಳಿಂದ ಮಲವಿಸರ್ಜನೆ ಸಮಯದಲ್ಲಿ ಸುಸ್ತು, ನೋವು, ಹೊಟ್ಟೆಯ ಮತ್ತು ಬೆನ್ನಿನ ಕೆಳಭಾಗದ ನೋವು. ಶಸ್ತ್ರಚಿಕಿತ್ಸೆಯ ನಂತರ ಕೀಮೋಥೆರಪಿ, ರೇಡಿಯೋಥೆರಪಿಗಳನ್ನು ಅಲೋಪಥಿಯಲ್ಲಿ ಸೂಚಿಸಿದ್ದರು. ಆದರೆ ಎಂಟು ತಿಂಗಳ ಆಯುರ್ವೇದ ಪಂಚಗವ್ಯ ಚಿಕಿತ್ಸೆಗಳಿಂದ ಲಕ್ಷಣಗಳೆಲ್ಲಾ ಮಂಗಮಾಯವಾಗಿತ್ತು.
36 ವರ್ಷದ ಬ್ರೈನ್ ಟ್ಯೂಮರ್ (ಮೆದುಳಿನ ಗಡ್ಡೆ)ಗೆ ಒಳಗಾದ ಮಹಿಳೆ. ತಲೆನೋವು, ವಾಕರಿಕೆ, ವಾಂತಿ, ಹಸಿವೆ ಇಲ್ಲದಿರುವುದು ಮೂರು ತಿಂಗಳುಗಳಿAದ ಇತ್ತು. 1 ವಾರದಿಂದ ಕೆಮ್ಮು ಏದುಸಿರು ಇತ್ತು. ಎಂ.ಆರ್.ಐ.ಸ್ಕಾö್ಯನ್ ಮೆದುಳಿನ ಗಡ್ಡೆಯನ್ನು ಪತ್ತೆ ಹಚ್ಚಿತ್ತು. ಅದು ಬೇರೆ ಅಂಗಗಳಿಗೆ ಹರಡುವ ಸಾಧ್ಯತೆ ಉಳ್ಳ ಕ್ಯಾನ್ಸರ್ ಗಡ್ಡೆ ಆಗಿತ್ತು. ಕೀಮೋಥೆರಪಿಯೂ ಆಯ್ತು. ರೇಡಿಯೋಥೆರಪಿಯೂ ಆಯ್ತು. ಪ್ರಯೋಜನ ಸೊನ್ನೆ. 8 ತಿಂಗಳ ಆಯುರ್ವೇದ ಪಂಚಗವ್ಯ ಚಿಕಿತ್ಸೆಗೆ ಆಗಾಗ ಬರುವ ತಲೆನೋವಿನ ಹೇಳಹೆಸರಿಲ್ಲ. ವಾಂತಿ ಕಂಡುಬರಲಿಲ್ಲ. ಆಹಾರಸೇವನೆ ಸುಲಭವಾಯಿತು. ಕೆಮ್ಮು ನಿಂತಿತು.
70 ವರ್ಷದ ಅಂಡಾಶಯದ ಕ್ಯಾನ್ಸರ್ ಗೆ ಒಳಗಾದ ಮಹಿಳೆಯ ಕತೆ ಮತ್ತೊಂದು. ಹೊಟ್ಟೆನೋವು, ಹಸಿವೆ ಇಲ್ಲದಿರುವುದು, ಸುಸ್ತು, ನಿಶ್ಶಕ್ತಿ, ಆಗಾಗ ಜ್ವರ ಬರುವುದು ಇತ್ತು. ಪೆಟ್ ಸ್ಕಾö್ಯನ್ ಮಾಡಿದಾಗ ಕಿಡ್ನಿಯ ರೀನಲ್ ಸೆಲ್ ಕಾರ್ಸಿನೋಮಾ ಎಂದು ಪತ್ತೆಯಾಯಿತು. ಶಸ್ತçಚಿಕಿತ್ಸೆ ಆಗಲೇಬೇಕೆಂದು ಅಲೋಪಥಿ ವೈದ್ಯರು ಒತ್ತಾಯಿಸಿದಾಗ ಅದನ್ನು ಬಲವಾಗಿ ನಿರಾಕರಿಸಿದರು, 2 ವರ್ಷ ಪಂಚಗವ್ಯ ಚಿಕಿತ್ಸೆ ಪಡೆದುಕೊಂಡರು. ನಂತರದ ರಿಪೋರ್ಟಗಳಲ್ಲಿ ಕ್ಯಾನ್ಸರ್ ಇಲ್ಲವೆಂದು ದೃಢೀಕರಣಗೊಂಡಿತು.
ಇದೇ ರೀತಿ ಪ್ರೋಸ್ಟೇಟ್ (ವೃಷಣ ಗ್ರಂಥಿ) ಕ್ಯಾನ್ಸರ್ ಇತ್ಯಾದಿಗಳೂ ಈ ರೀತಿ ಗುಣವಾಗಿವೆ. ಗೋಮೂತ್ರದ ಬಳಕೆಯಿಂದ ಆಂಟಿಬಯೋಟಿಕ್ ಗಳ, ಕ್ಯಾನ್ಸರ್ ಔಷಧಗಳ ಕಾರ್ಯಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಅಮೆರಿಕಾವು ಸಂಶೋಧನೆ ನಡೆಸಿ ಪೇಟೆಂಟ್ ಸ್ಥಾಪಿಸಿದೆ. "ಗಾವೋ ವಿಶ್ವಸ್ಯ ಮಾತರ" ಎಂದು ಘೋಷಿಸಿದ ಭಾರತದಲ್ಲಿ, ನಾವು ಗೋ ಉತ್ಪನ್ನಗಳ ಸಾಮರ್ಥ್ಯದ ಬಗ್ಗೆ ಕಣ್ಣು ತೆರೆದು ವಿಶ್ವಾಸ ತಳೆಯುವುದು ಯಾವಾಗ ಎಂಬುದೇ ಯಕ್ಷಪ್ರಶ್ನೆ. ಅಡ್ಡ ಪರಿಣಾಮಗಳಿಲ್ಲದ, ಬಹುಮುಖ ಬಹು ಆಯಾಮಗಳಲ್ಲಿ, ವಿವಿಧ ಉದ್ದೇಶಿತ ಪರಿಣಾಮಗಳನ್ನು ಸಾಧಿಸುವ ಪಂಚಗವ್ಯ ಚಿಕಿತ್ಸೆಯ ವಿಷಯ, ಸಂಶೋಧನೆಗಳು ಆಯುರ್ವೇದ ಸ್ನಾತಕೋತ್ತರ ಪದವಿಯ ವಿಷಯವಾಗಲಿ ಎಂಬ ಹಾರೈಕೆ ನನ್ನದು. ಇಂತಹ ಅಮೂಲ್ಯ ಪಂಚಗವ್ಯ ಚಿಕಿತ್ಸೆಯ ಘಟಕವು ಪುತ್ತೂರಿನ ನರಿಮೊಗರಿನಲ್ಲಿರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ಉದ್ಘಾಟನೆಗೊಂಡು, ಸುಸಜ್ಜಿತವಾಗಿ ಪ್ರತೀ ತಿಂಗಳ 11ನೇ ತಾರೀಕಿನಂದು ಪಂಚಗವ್ಯ ಚಿಕಿತ್ಸಾ ಶಿಬಿರವು ನಡೆಯುವುದು ಪುತ್ತೂರಿಗೊಂದು ಹೆಮ್ಮೆಯ ಗರಿ.
- ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ.
ಬಿ.ಎ.ಎಂ.ಎಸ್., ಎಂ.ಎಸ್. (ಆಯು)
ಆಯುರ್ವೆದ ತಜ್ಞವೈದ್ಯರು,
ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ,
ಪಂಚಕರ್ಮ ಮತ್ತು ಪಂಚಗವ್ಯ ಚಿಕಿತ್ಸಾ ಕೇಂದ್ರ,
ನರಿಮೊಗರು ಗ್ರಾಮಪಂಚಾಯತ್ ಸಮೀಪ,ಪುತ್ತೂರು.
ಮೊಬೈಲ್: 9740545979
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ