‘ಹರ್ ಘರ್ ತಿರಂಗಾ’ ಹಾರಿಸುವಾಗ ರಾಷ್ಟ್ರಧ್ವಜಕ್ಕೆ ಅವಮಾನವಾಗದಂತೆ ನೋಡಿಕೊಳ್ಳಿ !

Upayuktha
0

ಭಾರತೀಯರೇ,ರಾಷ್ಟ್ರಧ್ವಜದ ಗೌರವವನ್ನು ಕಾಪಾಡಲು ತಕ್ಷಣ ಕೃತಿಶೀಲರಾಗಿ ಮತ್ತು ರಾಷ್ಟ್ರಕರ್ತವ್ಯವನ್ನು ನಿರ್ವಹಿಸಿ !


ಆಗಸ್ಟ್ 15 ಎಂದರೆ ರಾಷ್ಟ್ರೀಯ ಕರ್ತವ್ಯದ ಅರಿವು ಮಾಡಿಕೊಡುವ ರಾಷ್ಟ್ರೀಯ ಹಬ್ಬ! ಎಲ್ಲ್ಲೆಡೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವಾಗ ಅದರ ಬಳಕೆ ಅಯೋಗ್ಯ ರೀತಿಯಲ್ಲಿ ಅಥವಾ ರಾಷ್ಟ್ರಧ್ವಜ ಸಂಹಿತೆಗೆ ವಿರುದ್ಧವಾಗಿ ನಮ್ಮ ಕೃತಿ ಆಗುತ್ತಿಲ್ಲವಲ್ಲ ಎಂಬುದರೆಡೆ ನಾವು ಗಮನ ಕೊಡಬೇಕಿದೆ !


ಆದ್ದರಿಂದ ಈ ಕಾಲಾವಧಿಯಲ್ಲಿ ಕೆಳಗೆ ನೀಡಿರುವ ಕೆಲವು ಅಯೋಗ್ಯ ಕೃತಿಗಳನ್ನು ನಾವು ಮಾಡದಿರೋಣ ಮತ್ತು ಇದರ ಬಗ್ಗೆ ಇತರರಲ್ಲಿಯೂ ಜಾಗೃತಿ ಮೂಡಿಸೋಣ !

ರಾಷ್ಟ್ರಧ್ವಜದ ಬಣ್ಣವಿರುವ ಗಾಳಿಪಟವನ್ನು ಹಾರಿಸಬೇಡಿ !

ತಮ್ಮ ಮುಖ, ಬಟ್ಟೆಗಳ ಮೇಲೆ ರಾಷ್ಟ್ರಧ್ವಜವನ್ನು ಚಿತ್ರಿಸಬೇಡಿ !

ರಾಷ್ಟ್ರಧ್ವಜದ ಸ್ವರೂಪದ, ಬಣ್ಣವಿರುವ ‘ಕೇಕ್’ ಕತ್ತರಿಸಬೇಡಿ !

ರಾಷ್ಟ್ರಧ್ವಜ ಕಾಲಿನಡಿ ಬೀಳದಂತೆ, ಹರಿಯದಂತೆ ಎಚ್ಚರ ವಹಿಸಿ !

ಪ್ಲಾಸ್ಟಿಕ್ ರಾಷ್ಟ್ರಧ್ವಜವನ್ನು ಪತಾಕೆ ಅಥವಾ ಅಲಂಕಾರಕ್ಕೆಂದು ಉಪಯೋಗಿಸಬೇಡಿ !


ಈಗ ಸಾಮಾನ್ಯವಾಗಿ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಕಂಡುಬರುವ ವಿಷಯಗಳ ಬಗ್ಗೆ ನೋಡೋಣ !

ಅ. ಆಗಸ್ಟ್ 15 ಅಂದರೆ ಸ್ವಾತಂತ್ರ್ಯ ದಿನ ಮತ್ತು ಜನವರಿ ೨೬ ಅಂದರೆ ಪ್ರಜಾಪ್ರಭುತ್ವ ದಿನವನ್ನು ಅಭಿಮಾನದಿಂದ ಆಚರಿಸುವಂತಹ ಸಂದರ್ಭಗಳಲ್ಲಿ ಕಾಗದದ ಅಥವಾ ಪ್ಲಾಸ್ಟಿಕ್‌ನ ರಾಷ್ಟ್ರಧ್ವಜಗಳು ಅದೇ ದಿನ ಮಧ್ಯಾಹ್ನದಿಂದಲೇ ಮಾರ್ಗಗಳಲ್ಲಿ ಹಾಗೂ ಚರಂಡಿಗಳಲ್ಲಿ ಛಿದ್ರವಿಛಿದ್ರವಾಗಿ ಅನಾಥವಾಗಿ ಬಿದ್ದಿರುವುದು ಕಂಡುಬರುತ್ತದೆ.


ಆ. ಪ್ಲಾಸ್ಟಿಕ್‌ನ ಧ್ವಜಗಳು ಬೇಗನೆ ನಶಿಸದಿರುವ ಕಾರಣ ಬಹಳ ದಿನಗಳ ತನಕ ನಾವೆಲ್ಲರೂ ರಾಷ್ಟ್ರಧ್ವಜದ ಅವಮಾನವನ್ನು ಅಸಹಾಯಕರಾಗಿ ಕಣ್ಣುಬಿಟ್ಟು ಕಾಣಬೇಕಾಗುತ್ತದೆ.


ಇ. ದೊಡ್ಡದೊಡ್ಡ ಕ್ರೀಡಾಕೂಟಗಳಲ್ಲಿ ಹಾಗೂ ಕ್ರಿಕೆಟ್ ಪಂದ್ಯಗಳ ಸಂದರ್ಭದಲ್ಲಿ ಕ್ರೀಡಾಪಟುಗಳಿಂದಲೂ, ಕ್ರೀಡಾಭಿಮಾನಿಗಳಿಂದಲೂ ರಾಷ್ಟ್ರಧ್ವಜವನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಎಳೆದಾಡುವುದು, ಬೀಸುವುದು, ಮೈಗೆ ಹೊದ್ದುಕೊಳ್ಳುವುದು, ಅದರಿಂದ ಬೆವರೊರೆಸುವುದು, ಮುಖದ ಮೇಲೆ ರಾಷ್ಟ್ರಧ್ವಜವನ್ನು ಹೋಲುವಂತೆ ಬಣ್ಣ ಬಳಿದುಕೊಳ್ಳುವುದು ಇತ್ಯಾದಿ ಹೀನ ಕೃತ್ಯಗಳಾಗುತ್ತವೆ.


ಈ. ರಾಷ್ಟ್ರಧ್ವಜವನ್ನು ಸರಕಾರಿ ಕಾರ್ಯಕ್ರಮಗಳಲ್ಲಿ ತಲೆ ಕೆಳಗಾಗಿ ಅರಳಿಸುವುದು ಎಷ್ಟೋ ಸಂದರ್ಭಗಳಲ್ಲಿ ಕಂಡುಬರುತ್ತದೆ !

ಹೀಗಿದ್ದರೂ ಸರಕಾರವು ಅವುಗಳನ್ನು ತಡೆಯಲು ಏನೂ ಮಾಡುತ್ತಿಲ್ಲ! ಇದರಿಂದ ಅದರ ಬಗ್ಗೆ ನಾವೆಷ್ಟು ಬೇಜವಾಬ್ದಾರರಾಗಿದ್ದೇವೆ ಎಂಬುದು ತಿಳಿದುಬರುತ್ತದೆ.


ರಾಷ್ಟ್ರಧ್ವಜದ ಅವಮಾನವೆಂದರೆ ದೇಶದ ದೌರ್ಭಾಗ್ಯ !

‘ರಾಷ್ಟ್ರಧ್ವಜದ ಗೌರವ ಕಾಪಾಡಿ’, ಎಂದು 75 ವರ್ಷಗಳ ನಂತರವೂ ಆಡಳಿತವನ್ನು ಎಚ್ಚರಿಸಬೇಕಾಗುತ್ತದೆ. ಇದು ದೇಶದ ದೌರ್ಭಾಗ್ಯವಾಗಿದೆ. ಭಾರತದ ವಿಶಾಲವಾದ ಪ್ರದೇಶವು ದೇಶದ ಶರೀರವಾದರೆ, ರಾಷ್ಟ್ರಧ್ವಜವು ಅದರ ಪ್ರಾಣವಾಗಿದೆ. ಪ್ರಾಣವಿರುವ ಶರೀರವು ಶಿವನ ಆಲಯವಾದರೆ ಪ್ರಾಣವಿಲ್ಲದ ಶರೀರವು ‘ಶವ’ವಾಗುತ್ತದೆ ಎಂಬುದು ಅತ್ಯಂತ ಮಹತ್ವದ ಸಂಗತಿಯಾಗಿದೆ.ರಾಷ್ಟ್ರೀಯ ಗೌರವದ ಲಾಂಛನಗಳ ದುರುಪಯೋಗವನ್ನು ತಡೆಯುವ ಕಾಯ್ದೆ1950 ಕಲಂ 2 ಮತ್ತು5 ಕ್ಕನುಸಾರ ಹಾಗೂ ‘ರಾಷ್ಟ್ರ ಗೌರವ ಅವಮಾನ ನಿರ್ಬಂಧ’ ಅಧಿನಿಯಮ 1971ರ ಕಲಂ 2 ಕ್ಕನುಸಾರ ಹಾಗೂ ಬೋಧ ಚಿಹ್ನೆ ಹಾಗೂ ಹೆಸರುಗಳನ್ನು (ಅಯೋಗ್ಯವಾಗಿ ಉಪಯೋಗಿಸಲು ನಿರ್ಬಂಧ) ಅಧಿನಿಯಮ1950 ಕಾಯಿದೆಗಳಿಗನುಸಾರ ರಾಷ್ಟ್ರಧ್ವಜಕ್ಕೆ ಅವಮಾನ ಮತ್ತು ವಿಡಂಬನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.


ಸರಕಾರ ಇನ್ನಾದರೂ ಕ್ರಮಕೈಗೊಳ್ಳಬೇಕು !

ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರಧ್ವಜದ ಅವಮಾನವಾಗಬಾರದೆಂದು ಸರಕಾರವು ಮುಂದಿನ ಕೃತಿ ಮಾಡಬೇಕು.

1. ಪ್ಲಾಸ್ಟಿಕ್‌ನ ರಾಷ್ಟ್ರಧ್ವಜ, ಬಿಲ್ಲೆ ಹಾಗೂ ಇತರ ವಸ್ತುಗಳನ್ನು ಉತ್ಪಾದಿಸುವ ಉತ್ಪಾದಕರ, ವಿತರಕರ ಮತ್ತು ಮಾರಾಟಗಾರರ ಮೇಲೆ ಆರಕ್ಷಕರ ಸಹಾಯದಿಂದ ದಾಳಿ ಮಾಡಿ ಅವರ ವಸ್ತುಗಳನ್ನು ಜಪ್ತಿ ಮಾಡಬೇಕು.

2. ಕಾಯಿದೆಯ ಉಲ್ಲಂಘನೆ ಮಾಡುವವರ ವಿರುದ್ಧವೂ ಕಾನೂನು ಪ್ರಕಾರ ಕಾರ್ಯಾಚರಣೆ ನಡೆಸುವುದು ಇಂದಿನ ಅವಶ್ಯಕತೆಯಾಗಿದೆ.

3. ಮಾತ್ರವಲ್ಲದೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಸೂಕ್ತ ಶಿಸ್ತುಕ್ರಮ ಜರಗಿಸಬೇಕಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top