ಆತನಿಗೆ ನಾವು ಎಷ್ಟು ಕೃತಜ್ಞತೆಯನ್ನ ಅರ್ಪಿಸಿದರೂ ಕಡಿಮೆ. ಈ ಮನುಷ್ಯ ಜನ್ಮಎನ್ನುವುದು ಸುಲಭವಾಗಿ ಪ್ರಾಪ್ತವಾದದ್ದು ಅಲ್ಲ. ಶರಣೆ ಅಕ್ಕಮಹಾದೇವಿ ಹೇಳುವ ಹಾಗೆ ಬಂದೇ ಬಂದೆ 84 ಲಕ್ಷ ಯೋನಿಗಳ ದಾಟಿ ಬಂದೆ ಎಂದು ಒಂದು ವಚನದ ಸಾಲಿನಲ್ಲಿ ಹೇಳುತ್ತಾರೆ. ಇದನ್ನೇ ದಾಸರು 84 ಲಕ್ಷ ಜೀವರಾಶಿ ದಾಟಿ ಬಂದೆ ಈಶದೀರ ಶೇಷಧೀರ ಎಂದು ಹಾಡುತ್ತಾರೆ.
ಅಂದಮೇಲೆ ಈ ಮನುಷ್ಯ ಜನ್ಮ ಬರಬೇಕಾದರೆ ಎಷ್ಟು ಕಠಿಣವಾದದ್ದು ಎನ್ನುವುದು ಅರಿವಾಗುತ್ತದೆ ಎಷ್ಟೋ ಪ್ರಾಣಿ-ಪಕ್ಷಿ ಪಶುಗಳಾಗಿ ಹುಟ್ಟಿದ ನಂತರ ಈ ಮನುಷ್ಯ ಜೀವಬಂದಿದೆ. ಇಷ್ಟೆಲ್ಲಾ ಕಠಿಣತೆಯಿಂದ ಬಂದ ಈ ಕಾಯವು ಸುವಿಚಾರದ ನುಡಿಗಳನ್ನು ತುಂಬಿಕೊಂಡು ಭಗವಂತನ ಒಡಲ ಸೇರಬೇಕಿದೆ.ಈ ಜನ್ಮ ಇದ್ದಾಗಿಯೂ ಆತ್ಮಜ್ಞಾನದ ಕಡೆಗೆ ನಾವು ಹೋಗದಿದ್ದರೆ ನಾವು ಇತರೆ ಪ್ರಾಣಿಗಳಿಗಿಂತಲೂ ಕನಿಷ್ಠವಾಗಿ ಬಿಡುತ್ತೇವೆ.
ಬೆನ್ನು ಬಾಗದ ಮುನ್ನ, ಕಣ್ಣು ಮಂಜಾಗದ ಮುನ್ನ, ಮರಣ ಬಾರದ ಮುನ್ನ, ನಾವು ಭಗವಂತನ ಧ್ಯಾನದಲ್ಲಿ ತೊಡಗಬೇಕು. ಭಗವಂತ ತನಗೆ ಬೇಕೆಂದು ಎತ್ತಿಕೊಳ್ಳುವಂತಿರಬೇಕು ನಮ್ಮ ಕಾಯ ಆಗ ಮಾತ್ರ ಸಾರ್ಥಕ ಎನಿಸುವುದು. ಜೀವನ್ ಮುಕ್ತಿ ಹೊಂದುವ ಸಾಮರ್ಥ್ಯ ಮನುಷ್ಯನಲ್ಲಿ ಮಾತ್ರ ಇರುವುದು ಇದು ಮತ್ಯಾವ ಪ್ರಾಣಿಗೂ ಸಿಗಲಾರದು.
ಜೀವಾತ್ಮನು ಈ ದೇಹವನ್ನು ಬಿಟ್ಟು ಹೋದಮೇಲೆ ಈ ದೇಹಕ್ಕೆ ಒಂದಿಷ್ಟು ಬೆಲೆ ಇಲ್ಲ ಸತ್ತ ಮಲಕ್ಕೆ ಬೆಲೆ ಇದೆ ಹೊರತು ಈ ಮನುಷ್ಯ ದೇಹ ಸತ್ತ ಮೇಲೆ ರಾಜ ಮಹಾರಾಜನದ್ದೇ ಇರಲಿ ಪ್ರಧಾನಿ ಮುಖ್ಯಮಂತ್ರಿಯದ್ದೇ ಇರಲಿ ಅದು ಆಗ ಅಪ್ರಿಯವಾಗುತ್ತದೆ. ಅದಕ್ಕಾಗಿ ದೇಹದೊಳಗೆ ಜೀವಾತ್ಮ ಇರುವಾಗಲೇ ಪುನೀತರಾಗೋಣ. ಅದರಲ್ಲೇ ನಾವು ಇನ್ನೂ ಹೆಚ್ಚು ಪುಣ್ಯವಂತರು ಏಕೆಂದರೆ ಮಹಾಯೋಗಿ ಸಂತ ಮಹಾತ್ಮರು ಓಡಾಡಿದ ಪುಣ್ಯಭೂಮಿ ಸಕಲ ಸಮೃದ್ಧದ ಜಗತ್ತಿನ ದೇವರ ಕೋಣೆಯಂತಿರುವ ಭಾರತದಲ್ಲಿ ಜನಿಸಿದ್ದೇವೆ.
ಆಫ್ರಿಕಾದ ದೇಶದ ಜನರು ಇವತ್ತಿಗೂ ಪ್ರಾಣಿಗಳಂತೆ ಬದುಕುತ್ತಿದ್ದಾರೆ. ಇನ್ನು ಶ್ರೀಮಂತ ದೇಶಗಳು ತಮ್ಮ ಮೂಲ ಪರಂಪರೆಯನ್ನೇ ಮರೆತು ಸಂಸ್ಕಾರ ಜ್ಞಾನವಿಲ್ಲದೆ ಬಳಲುತ್ತಿರುವರು. ಅವರೆಲ್ಲರನ್ನು ನೋಡಿದರೆ ನಾವು ಭಾಗ್ಯವಂತರೇ ಆಗಿದ್ದೇವೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ