ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ 8ನೇ ತರಗತಿಯ ವಿದ್ಯಾರ್ಥಿನಿ ಇಂಚರಾ ಎಸ್ ಮಯ್ಯ ಅವರು ಆಲಂಕಾರಿನ ಭಾರತಿ ವಿದ್ಯಾ ಸಂಸ್ಥೆಯಲ್ಲಿ ಆಗಸ್ಟ್ 13 ರಂದು ವಿದ್ಯಾಭಾರತಿ ಆಯೋಜಿಸಿದ ಜಿಲ್ಲಾ ಮಟ್ಟದ 14ರ ವಯೋಮಾನದ ಬಾಲಕಿಯರ ಚೆಸ್ ಪಂದ್ಯದಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದಿರುತ್ತಾರೆ. ಇವರು ಪುತ್ತೂರಿನ ಕುಂಜೂರುಪಂಜದ ಶ್ರೀನಿವಾಸ್ ಮಯ್ಯ ಡಿ ಹಾಗೂ ಜಯಲಕ್ಷ್ಮಿ ಎಸ್ ಮಯ್ಯ ಇವರ ಮಗಳಾಗಿರುತ್ತಾಳೆ. 7ನೇ ತರಗತಿ ವಿದ್ಯಾರ್ಥಿಯಾದ ಸನ್ಮಯ್ ಎನ್ ಅವರು 14ರ ವಯೋಮಾನದ ಬಾಲಕರ ಚೆಸ್ ಪಂದ್ಯದಲ್ಲಿ 4ನೇಸ್ಥಾನ ಪಡೆದಿರುತ್ತಾರೆ. ಇವರು ಪುತ್ತೂರಿನ ಸಾಲ್ಮರದ ಸಂತೋಷ್ ಎನ್ ಹಾಗೂ ಶ್ರುತಿ ಎಸ್ ಇವರ ಪುತ್ರ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ