ಆರೋಗ್ಯ ಜಾಗೃತಿಗಾಗಿ ತಪಾಸಣಾ ಶಿಬಿರಗಳು ಸಹಕಾರಿ : ಪೂರನ್ ವರ್ಮಾ
ಕಕ್ಕಿಂಜೆ : ಗ್ರಾಮೀಣ ಭಾಗದ ಜನರಿಗೆ ಸುಸಜ್ಜಿತವಾದ ಆಸ್ಪತ್ರೆಯ ಸವಲತ್ತುಗಳ ಅಗತ್ಯವಿದೆ. ಜನರ ಆರೋಗ್ಯ ಜಾಗೃತಿಯ ದೃಷ್ಟಿಕೋನದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಮಹತ್ವದ ಪಾತ್ರ ವಹಿಸುತ್ತದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮಾ ಅಭಿಪ್ರಾಯಪಟ್ಟರು.
ಇವರು ಇತ್ತೀಚೆಗೆ ಚಾರ್ಮಾಡಿ ಗ್ರಾಮ ಪಂಚಾಯಿತಿಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ , ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆ, ಆರ್ ಸಿ ಸಿ ನೆರಿಯ ಮತ್ತು ಆರ್ ಸಿ ಸಿ ಕಕ್ಕಿಂಜೆ - ಚಾರ್ಮಾಡಿ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯವಾಗಿ ಆಸ್ಪತ್ರೆ ಮತ್ತು ಡಾಕ್ಟರ್ ಗಳ ಬಳಿಗೆ ನಾವು ತೆರಳುತ್ತೇವೆ ಆದರೆ ಶಿಬಿರದಂತ ಕಾರ್ಯಕ್ರಗಳಲ್ಲಿ ವೈದ್ಯರೇ ಗ್ರಾಮೀಣ ಪ್ರದೇಶದ ಜನರ ಬಳಿಗೆ ಬಂದಿರುವುದು ಸ್ವಾಗತಾರ್ಹ.ಇದನ್ನು ಚಿಕಿತ್ಸೆಯ ಅವಶ್ಯಕ ಇರುವವರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಶಿಬಿರದಲ್ಲಿ ಕಣ್ಣಿನ ತಜ್ಞರು, ಎಲುಬು ತಜ್ಞರು , ಮಕ್ಕಳ ತಜ್ಞರುತಜ್ಞರು, ಜನರಲ್ ಮೆಡಿಸಿನ್ ಹಾಗು ಸ್ರೀ ರೋಗ ಮತ್ತು ಪ್ರಸೂತಿ ತಜ್ಞರು ಉಪಸ್ಥಿತರಿದ್ದು ಉಚಿತ ತಪಾಸಣೆ ನಡೆಸಿದರು. ಶಿಬಿರದಲ್ಲಿ ನೆರಿಯ, ಕಕ್ಕಿಂಜೆ, ತೋಟತ್ತಾಡಿ, ಚಿಬಿದ್ರೆ ಸೇರಿದಂತೆ ಚಾರ್ಮಾಡಿ ಪರಿಸರದ ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.ಮಕ್ಕಳಿನಿಂದ ಹಿರಿಯ ವಯಸ್ಕರು ಸಹ ಬಂದು ಶಿಬಿರದಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು. ತಪಾಸಣೆಗೆ ಬಂದಂತಹ ಅಭ್ಯರ್ಥಿಗಳಿಗೆ ತಿಂಡಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಶಿಬಿರದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್, ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ಡಾ.ಸಾತ್ವಿಕ್ ಜೈನ್, ಆರ್ಥೋಪೆಡಿಕ್ ಡಾ.ಸತನಂದ ಪ್ರಸಾದ್ ರಾವ್ , ಒಪ್ಥಾಲ್ ಡಾ. ಶುಭಾಸ್ ಚಂದ್ರ ರಾವ್ , ಗೇನೊಕಾಲಜಿಸ್ಟ್ ಡಾ.ಪ್ರಿಯಾಂಕ, ಮಕ್ಕಳ ತಜ್ಞ ಡಾ.ಪ್ರತೀತ್ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸುರೇಂದ್ರ, ಆರ್ ಸಿ ಸಿ ಚೇರ್ಮನ್ ವಿವೇಕ್ ಸಂಪತ್ ಆರಿಗ, ಆರ್ ಸಿ ಸಿ ನೆರಿಯ ಸದಸ್ಯೆ ಪುಷ್ಪ ಮತ್ತು ಶರೀಫ್ ಉಪಸ್ಥಿತರಿದ್ದರು. ಶಿಬಿರದ ಉದ್ಘಾಟನಾ ಸಮಾರಂಭವನ್ನು ನಿಕಟ ಪೂರ್ವ ಸದಸ್ಯ ಕೆ. ಪ್ರಕಾಶ್ ನಾರಾಯಣ್ ನಿರೂಪಿಸಿ , ಸದಸ್ಯ ಒಬಯ್ಯ ಗೌಡ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ