ಸಮಾಜದಲ್ಲಿ ಹೆಣ್ಣಿಗೊಂದು ಗೌರವವಿರಲಿ

Upayuktha
0

ಹೆಣ್ಣು ಈ ಸಮಾಜದ ಕಣ್ಣು. ಜನ್ಮದಾತೆ, ಭೂಮಿ ತೂಕದ ಸಹನೆ, ತಾಯಿ, ಸಹೋದರಿ, ಮಡದಿ ಹೀಗೆ ತನ್ನ ಜೀವನದಲ್ಲಿ ಹತ್ತು ಹಲವು  ಜವಾಬ್ದಾರಿಗಳನ್ನು ನಿರ್ವಹಿಸುತ್ತ, ಸಮಾಜದ ಕಟ್ಟುಪಾಡುಗಳ ಬಂಧನದಲ್ಲಿ ಸಿಲುಕಿದರು ಬಾನೆತ್ತರಕೆ ಹಾರುವ ಕನಸು ಕಾಣುವವಳು ಅವಳು.ಈ ಸಮಾಜದಲ್ಲಿ ಅವಳಿಗೆ ತನ್ನದೇ ವಿಶಿಷ್ಟ ಗೌರವವಿದೆ. ಅವಳೊಂದು ಈ ಸಮಾಜದ ಅವಿಭಾಜ್ಯ ಅಂಗವೂ ಹೌದು. ಹೆಣ್ಣು ಇಂದು ಹೆಜ್ಜೆಯೂರದ ಕ್ಷೇತ್ರವಿಲ್ಲ. ಅಡುಗೆ ಮನೆಯಿಂದ ಹಿಡಿದು ಬಾಹ್ಯಾಕಾಶದವರೆಗೂ ತನ್ನ ಸಾಧನೆಯನ್ನು ವಿಸ್ತರಿಸುತ್ತ ಸಾಗುತಿರುವಳು. ಆದರೆ ಕಾಲ ದಿನೇ ದಿನೇ ಪರಿವರ್ತನೆಯಾಗುತ್ತಿದ್ದಂತೆ ಸಮಾಜದ ಮನಸ್ಥಿತಿ ಕೂಡ ಕುರುಡಾಗುತ್ತಿದೆ. ಹೆಣ್ಣು ಎಂದು ಪೂಜನೀಯ ಭಾವದಿಂದ ಪೂಜಿಸಲ್ಪಡುವ ಅವಳ ಮೇಲೆ ದಿನೇ ದಿನೇ ದೌರ್ಜನ್ಯಗಳು ನಡೆಯುತ್ತಿವೆ.


ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುವ ಶೋಷಣೆಗೆಧ್ವನಿ ಎತ್ತುವವರು ಯಾರು? ದಿನೇ ದಿನೇ ಅವಮಾನದ ಅಂಧಕಾರದೊಳಗೆ ನೋವ ನುಂಗಿ ಕುಳಿತವಳಿಗೆ ಧೈರ್ಯ ತುಂಬುವರಾರು? ಇದೊಂದು ಉತ್ತರವಿಲ್ಲದ ಪ್ರಶ್ನೆಯಾಗಿ ಸಮಾಜದ ಅನೇಕ ಸಮಸ್ಯೆಗಳಲ್ಲಿ ಒಂದಾಗಿದೆ.


ಹೆಣ್ಣಿಗೆ ಸಮಾಜದಲ್ಲಿ ಸರಿ ಸಮಾನ ಗೌರವ  ದೊರಕುತ್ತಿಲ್ಲ. ಹಿಂದಿನಿಂದಲೂ ಆಚರಣೆ, ಮೂಡನಂಬಿಕೆಗಳು ಅವಳು ಪುರುಷನಷ್ಟೇ ಸಮಾನಳು ಎಂದು ಒಪ್ಪಿಕೊಳ್ಳದೆ ಸಮಾಜದಲ್ಲಿ ಅವಳಿಗೆ ಸಿಗಬೇಕಾದ ಹಕ್ಕುಗಳಿಂದ ದೂರವಿಟ್ಟಿತ್ತು. ಇಂದು ಸಮಾಜ ದಲ್ಲಿ ಅವಳು ದ್ವನಿ ಎತ್ತಿರುವಳಾದರು. ಪುರುಷನಷ್ಟೇ ಸಮಾನಳು ಎಂದು ಈ ಸಮಾಜ ಒಪ್ಪಿಕೊಳ್ಳದಿರುವುದು ಬೇಸರದ ಸಂಗತಿ.


ಪ್ರತಿಯೊಂದು ಹಂತದಲ್ಲೂ ಅವಳು ಈ ಸಮಾಜದ ಕೆಂಗಣ್ಣಿಗೆ ಗುರಿಯಾಗಿ ನೋವು ಅವಮಾನಗಳಿಗೆ ಬಲಿಯಾಗುತ್ತಿರುವಳು. ಅವಳಿಗಾಗುವ ಅನ್ಯಾಯದ ವಿರುದ್ಧ ಕಾನೂನು ಪ್ರಶ್ನಿಸುತ್ತಿಲ್ಲ? ಅವಳ ಕಣ್ಣೀರಿಗೆ ಏಕೆ ಬೆಲೆಯೆ ಕೊಡುತ್ತಿಲ್ಲ? ನಮ್ಮ ದೇಶದಲ್ಲಿ ಒಂದು ದಿನಕ್ಕೆ ಅದೆಷ್ಟು ಹೆಣ್ಣು ಮಕ್ಕಳ ಮೇಲೆ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ಅತ್ಯಾಚಾರ ಆಗುತ್ತಿದೆ ಇದೆ. ಆದರೆ ಈ ಹಿಂಸಾಚಾರಕ್ಕೆ ಕೊನೆ ಇಲ್ಲವೇ? ಕಾನೂನು ಸುವ್ಯವಸ್ಥೆಯಿದ್ದರು ಅವಳಿಗೇಕೆ ಸರಿಯಾದ ರೀತಿಯಲ್ಲಿ ಭದ್ರತೆ ಸಿಗುತ್ತಿಲ್ಲ ಎಂಬುದೇ ಯಕ್ಷಪ್ರಶ್ನೆಯಾಗಿ ಕಾಡುತಿದೆ.


ನಮ್ಮ ಸಮಾಜವೂ ಎತ್ತ ಸಾಗುತ್ತಿದೆ. ಈ ಸಮಾಜದಲ್ಲಿ ಪ್ರತಿಯೊಂದು ಹೆಜ್ಜೆಯು ಅವಳು ಭಯದಲ್ಲೆ ಇಟ್ಟು ಬದುಕುವಂತಾಗಿದೆ. ಅವಳ ಪ್ರತಿಭೆಯನ್ನು ಈ ಸಮಾಜ ತುಳಿಯುತ್ತಲೇ ಇದೆ. ಹೆಣ್ಣು ಪೂಜನೀಯಳು ಎಂಬ ಭಾವ ಮರೆಯಾಗಿದೆ. ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರಕ್ಕೆ ನ್ಯಾಯ ಇಲ್ಲದಾಗಿದೆ. ಕರ್ನಾಟಕದಲ್ಲಿ ಸುಮಾರು ಕೊಲೆ ಅತ್ಯಾಚಾರಗಳು ನಡೆಯುತ್ತಲೇ ಇವೆ. ಆದರೆ ನ್ಯಾಯ ದೇವತೆಯು ಮೌನವಾಗಿರುವಳೇ?

ಒಂದು ಹೆಣ್ಣಿಗೆ ಆಗುವ ಅನ್ಯಾಯವನ್ನು ತಡೆಯುವರು ಯಾರು? ಎಂದು ಹೆಣ್ಣು ಕೇಳುವ ಪ್ರಶ್ನೆಗೆ ಈ ಸಮಾಜ ತಲೆತಗ್ಗಿಸಲೇಬೇಕು. ಇನ್ನಾದರೂ ಕಾನೂನು ಸುವ್ಯವಸ್ಥೆ ಬಲಗೊಳ್ಳಬೇಕು, ಹೆಣ್ಣಿಗೆ ಸಮಾಜದಲ್ಲಿ ಧೈರ್ಯದಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕು ಎಂಬುದೇ ನಮ್ಮೆಲ್ಲರ ಆಶಯ.


- ಮಧುಶ್ರೀ ಸೊರಕೆ

ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿನಿ

ವಿವೇಕಾನಂದ ಕಾಲೇಜು ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top