ಉಡುಪಿ: ಮಳೆಗಾಲದ ನಿಮಿತ್ತ ಉಡುಪಿಯಲ್ಲಿ ಪ್ರತಿನಿತ್ಯ ನಡೆಯುವ ರಥೋತ್ಸವಕ್ಕೆ ತಾತ್ಕಾಲಿಕ ವಿರಾಮ ನೀಡಲಾಗಿದೆ. ಇನ್ನು ನಾಲ್ಕು ತಿಂಗಳ ಕಾಲ ಉಡುಪಿಯ ಶ್ರೀಕೃಷ್ಣ ಚಾತುರ್ಮಾಸ್ಯ ವ್ರತ ಸ್ವೀಕರಿಸಿ ಶಯನೋತ್ಸವದಲ್ಲಿ ಇರುತ್ತಾನೆ.
ಗುರುವಾರ ಶುಭಮುಹೂರ್ತದಲ್ಲಿ ಶಯನಕ್ಕೆ ಒಳ ಸೇರಿದ ಉಡುಪಿ ಶ್ರೀಕೃಷ್ಣ. ಪೂಜ್ಯ ಪುತ್ತಿಗೆ ಪರ್ಯಾಯ ಉಭಯ ಶ್ರೀಪಾದರಿಂದ ಪಲ್ಲಕಿಯಲ್ಲಿ ಪಲ್ಲಕಿಯಲ್ಲಿ ಹೊರೆಸಿಕೊಂಡು ಮೆಲ್ಲ ಮೆಲ್ಲನೆ ಕೊಳಲಿನ ನಾದ ಕೇಳುತ್ತ ಸಾಗಿ ಬಂದು ನಿದ್ದೆಗೆ ಜಾರಿದ ಬಾಲಕೃಷ್ಣ.
ಈ ಸಂದರ್ಭದಲ್ಲಿ ನೆರೆದ ಭಕ್ತ ಜನ ವೃಂದ ಭಾವುಕರಾದರು. ಇನ್ನು ನವೆಂಬರ್ 13ರ ಉತ್ಥಾನ ದ್ವಾದಶಿಯಂದೇ ಉಡುಪಿಯ ಶ್ರೀಕೃಷ್ಣ ರಥವನೇರಲಿದ್ದಾನೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ