ನಾಳೆ ಆರ್‌ವೈಎಂಇಸಿಯಲ್ಲಿ “ಮಂದಾರ-2024” ವಾರ್ಷಿಕೋತ್ಸವ ಸಮಾರಂಭ

Upayuktha
1 minute read
0

 


ಬಳ್ಳಾರಿ: ಬಳ್ಳಾರಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 13.07.2024 ರಂದು ಮಹಾವಿದ್ಯಾಲಯದಲ್ಲಿ “ಮಂದಾರ-2024” ವಾರ್ಷಿಕೋತ್ಸವ ಸಮಾರಂಭಗಳು ಜರುಗುವವು. ಶನಿವಾರ ಬೆಳಿಗ್ಗೆ 10.30ಕ್ಕೆ  ಜರುಗುವ ಶೈಕ್ಷಣಿಕ ಹಾಗೂ ಕ್ರೀಡಾ ಪುರಸ್ಕಾರ – 2024 ಸಮಾರಂಭಕ್ಕೆ  ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಅಲ್ಲಂ ಗುರುಬಸವರಾಜ, ಉಪಾಧ್ಯಕ್ಷರು, ವೀ.ವಿ.ಸಂಘ, ಬಳ್ಳಾರಿ. ಹಾಗೂ ಆರ್.ವೈ.ಎಂ.ಇ.ಸಿ. ಅಧ್ಯಕ್ಷರಾದ   ಜಾನೇಕುಂಟೆ ಬಸವರಾಜ, ವೀ.ವಿ.ಸಂಘದ ಕಾರ್ಯದರ್ಶಿಗಳು, ಡಾ|| ಅರವಿಂದ್ ಪಟೇಲ್ ಸಹ ಕಾರ್ಯದರ್ಶಿಗಳು  ಯಾಳ್ಪಿ ಮೇಟಿ ಪಂಪನಗೌಡ,  ಕೋಶಾಧಿಕಾರಿಗಳು ಬೈಲುವದ್ದಿಗೇರಿ ರ‍್ರಿಸ್ವಾಮಿ ಘನ ಉಪಸ್ಥಿತಿಯಲ್ಲಿ ಉಧ್ಘಾಟನೆ ಸಮಾರಂಭವು ಜರುಗುವುದು.


ಅಲ್ಲದೇ ದಿನಾಂಕ ಶನಿವಾರ ಸಂಜೆ 6.00 ಗಂಟೆಗೆ ವಾರ್ಷಿಕೋತ್ಸವ ಸಮಾರಂಭಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುವವು. ಮುಖ್ಯ ಅತಿಥಿಗಳಾಗಿ  ಕರ್ನಾಟಕ ಸರ್ಕಾರ ವಿಧಾನಪರಿಷತ್ ಸದಸ್ಯರು, ಹಾಗೂ ಆರ್.ವೈ.ಎಮ್.ಇ.ಸಿ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷರಾದ ವೈ.ಎಂ.ಸತೀಶ್, ಜೆ.ತಿಪ್ಪೇರುದ್ರಪ್ಪ ಮಾನ್ಯಕುಲಪತಿಗಳು, ವಿ.ಎಸ್.ಕೆ.ಯು, ಬಳ್ಳಾರಿ, ಬಳ್ಳಾರಿ-ಜಿಲ್ಲಾಧಿಕಾರಿಗಳಾದ  ಪ್ರಶಾಂತ್ ಕುಮಾರ್ ಮಿಶ್ರಾ , ಹಾಗೂ ವಿಶೇಷ ಆಹ್ವಾನಿತರು ವೀ.ವಿ.ಸಂಘದ  ಪದಾದಿಕಾರಿಗಳು ಅಲ್ಲಂ ಗುರುಬಸವರಾಜ, ಜಾನೇಕುಂಟೆ ಬಸವರಾಜ, ಡಾ|| ಅರವಿಂದ್ ಪಟೇಲ್, ಯಾಳ್ಪಿ ಮೇಟಿ ಪಂಪನಗೌಡ, ಬೈಲುವದ್ದಿಗೇರಿ ರ‍್ರಿಸ್ವಾಮಿ, ವೀ.ವಿ.ಸಂಘದ ಮಾಜಿ ಅಧ್ಯಕ್ಷರಾದ ಆರ್. ರಾಮನಗೌಡ, ಉಡೇದ ಬಸವರಾಜ, ಜಿ.ಮಹಾಲಿಂಗಯ್ಯ (ರಾಜಣ್ಣ), ಪಂಲ್ಲೇದ ಪೊಂಪಾವತಿ  ಕೋಳೂರು ಮಲ್ಲಿಕಾರ್ಜುನ ಗೌಡ, ಬಾಡದ ಪ್ರಕಾಶ್ , ಎಸ್.ಎಂ. ಪ್ರಭು ಸ್ವಾಮಿ, ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಆಜೀವಸದಸ್ಯರು, ಇವರುಗಳ  ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಜರುಗುವುದು, ವಿದ್ಯಾರ್ಥಿಗಳಿಗೆ ಮುಂದಿನ ಜೀವನÀದ ಭವಿಷ್ಯತ್ತಿಗಾಗಿ ಕೆಲವು ಸೂಕ್ತ ಸಲಹೆಗಳನ್ನು ನೀಡುವರು. ಅಲ್ಲದೇ ಬಹುಮಾನ ವಿತರಣಾ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು, ಪ್ರಾಂಶುಪಾಲರಾದ ಡಾ|| ಟಿ.ಹನುಮಂತರೆಡ್ಡಿ, ಉಪ ಪ್ರಾಂಶುಪಾಲರಾದ, ಡಾ|| ಸವಿತಾಸೊನೋಳಿ ಹಾಗೂ ಶಿಕ್ಷಕವೃಂದ, ವಿದ್ಯಾರ್ಥಿವೃಂದದವರು, ಭಾಗವಹಿಸಲಿದ್ದಾರೆ. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top