ಕಳೆದ 70/75 ವರ್ಷಗಳಿಂದ ಕಾಂಗ್ರೆಸ್ ವಿರುದ್ಧ ಸಿಡಿದೆದ್ದು ಜನ್ಮತಳೆದವುಗಳೇ ಈ ಪ್ರಾದೇಶಿಕ ಪಕ್ಷಗಳು. 1974ರಲ್ಲಿ ಇಂದಿರಾ ಗಾಂಧಿ ಅವರ ಸಂವಿಧಾನ ವಿರೋಧಿ "ತುರ್ತುಪರಿಸ್ಥಿತಿ" ವಿರೋಧಿಸಿ ಜನ್ಮತಳೆದ 'ಜನತಾ ಪಕ್ಷ'ದ ಕವಲುಗಳೆ ವಿವಿಧ ಪ್ರಾದೇಶಿಕ ಪಕ್ಷಗಳು. ಅವುಗಳೆದುರು ಮಂಡಿಯೂರಿ ಕೂರುವ ಕಾಂಗ್ರೆಸ್ ಇಂದು ಗತಿ ಇಲ್ಲದವರಂತೆ 6 ಸೀಟ್ ಕೋಡಿ, 7 ಸೀಟ್ ಕೊಡಿ ಎಂದು ಅಂಗಲಾಚಿದ್ದು ಅದರ ಬೌದ್ಧಿಕ ದಿವಾಳಿತನ ವನ್ನು ತೋರಿಸುತ್ತದೆ. 80 ಕ್ಷೇತ್ರ ಹೊಂದಿರುವ ಉತ್ತರ ಪ್ರದೇಶದಲ್ಲಿ ಅಖಿಲೇಶ ಯಾದವರ ಪಕ್ಷಕ್ಕೆ 2 ಕ್ಷೇತ್ರ ಬಿಟ್ಟು ಕೊಡುತ್ತೇನೆ ಎ೦ದು ಹೇಳಿದ್ದು ಕೇಳಿ ಕಾಂಗ್ರೆಸ್ ಅಭಿಮಾನಿಗಳಿಗೆ ಆಶ್ಚರ್ಯವಾಯಿತು.
ಆದರೆ ಅದರ ಮುಂದಾಳುಗಳಿಗೆ ಮಾತ್ರ ಆತ್ಮವಿಶ್ವಾಸ, ತನ್ನತನ, ಎದೆಗಾರಿಕೆ ಎನ್ನುವುದು ಕಿಂಚಿತ್ತೂ ಇಲ್ಲದೆ ಮಂಡಿಯೂರುವುದರಲ್ಲೇ ಸಂತೋಷ ಪಡುತ್ತಿದೆ. 40-50 ವರ್ಷಗಳಿಂದ ವಿರೋಧಿಸಿಕೊಂಡು ಬಂದ ಪ್ರಾದೇಶಿಕ ಪಕ್ಷಗಳೊಂದಿಗೆ 3-4 ಸೀಟಿಗಾಗಿ ಅಂಗಲಾಚುವ ಅದರ ಇಂದಿನ ಹೀನಾಯ ಸ್ಥಿತಿಗೆ ಖರ್ಗೆಯಂತಹ ಗಾಂಧಿ ಕುಟುಂಬ ಭಕ್ತರೇ ಕಾರಣ.
ರಾಹುಲ್ಗೆ ಬುದ್ದಿ ಹೇಳಿ ಆದ ತಪ್ಪನ್ನು ತಿದ್ದಬೇಕಾದ ಖರ್ಗೆ ಸಾಹೆಬರು ರಾಹುಲ್ ಗಾಂಧಿ ಕುಟುಂಬದ ಭಕ್ತರ ಅಗ್ರೇಸರ್ ರಂತೆ ವರ್ತಿಸುತ್ತಿರುವುದು ಅವರ ಹಿರಿತನಕ್ಕೆ ಭೂಷಣವೆ?
-ವಿಶ್ವನಾಥ ಹೆಗಡೆ ಸಿರ್ಸಿ, ಮುಂಬಯಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ