ಮಕ್ಕಳ ಮಾನಸಿಕ ಆರೋಗ್ಯ ಶಿಕ್ಷಕರ ಬತ್ತಳಿಕೆಯಲ್ಲಿ ಹೊಸ ಅಸ್ತ್ರವಾಗಲಿ: ಡಾ. ವಿರೂಪಾಕ್ಷ ದೇವರಮನೆ

Upayuktha
0

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ "ವಿವೇಕ ನೈಪುಣ್ಯ" ಕಾರ್ಯಾಗಾರದ ಸಮಾರೋಪ  ಸಮಾರಂಭ




ಪುತ್ತೂರು: “ಶಿಕ್ಷಕನಾದವನು ತನ್ನ ವೃತ್ತಿಯನ್ನು ಮಾತ್ರ ಮಾಡದೆ ವಿದ್ಯಾರ್ಥಿಯ ಒಳಮನಸ್ಸನ್ನರಿತು ಅವರನ್ನು ಮುಂದಕೊಯ್ಯುವ ಕೆಲಸವನ್ನು ಮಾಡಬೇಕಾಗುತ್ತದೆ. ಮಕ್ಕಳ ಮಾನಸಿಕ ಆರೋಗ್ಯ ಶಿಕ್ಷಕರ ಬತ್ತಳಿಕೆಯಲ್ಲಿ ಹೊಸ ಅಸ್ತ್ರವಾಗಲಿ” ಎಂದು ಲೇಖಕರು ಹಾಗೂ ಖ್ಯಾತ ಮನೋವೈದ್ಯರಾದ ಡಾ.ವಿರೂಪಾಕ್ಷ ದೇವರಮನೆ ಅಭಿಪ್ರಾಯ ವ್ಯಕ್ತಪಡಿಸಿದರು.


ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಕುರಿತಂತೆ ಶಿಕ್ಷಕರಿಗಾಗಿ ನಡೆಸಿದ ʼವಿವೇಕ ನೈಪುಣ್ಯʼ ಕಾರ್ಯಗಾರದ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು.


ಸಾವಿರ ಜನರು ಒಗ್ಗೂಡಿ ಮಾಡಲಾಗದ್ದನ್ನು ಒಬ್ಬ ಪ್ರಭಾವಿ ಹಾಗೂ ಸಂವೇದನಾಶೀಲ ಶಿಕ್ಷಕ ತನ್ನ ತರಗತಿ ಕೋಣೆಯ ಒಳಗೆ ವಿದ್ಯಾರ್ಥಿಗಳ ಮೂಲಕ ಹೇಗೆ ಮಾಡಬಲ್ಲ, ತನ್ನ ವಿದ್ಯಾರ್ಥಿಗಳನ್ನು ಪ್ರೀತಿಸುವ, ಅವರ ಬದುಕಿನ ಕುರಿತು ಕಾಳಜಿ ವಹಿಸುವ ಶಿಕ್ಷಕ ತನ್ನ ಗಮನಿಸುವಿಕೆ, ಮಾತು ಹಾಗೂ ಕೃತಿಗಳ ಮೂಲಕ ವಿದ್ಯಾರ್ಥಿಗಳ ಆಲೋಚನಾ ಲಹರಿಯಲ್ಲಿ ಬದಲಾವಣೆಯನ್ನು ಹೇಗೆ ತರಬಲ್ಲ, ಮದ್ಯವ್ಯಸನಿಗಳ ಮಕ್ಕಳ ಕುರಿತು ನಮ್ಮ ಶಿಕ್ಷಕ  ಸಮೂಹ ಏನು ಮಾಡಬೇಕು ಎಂಬುದರ ಕುರಿತಾಗಿ ವಿವಿಧ ಅವಧಿಗಳಲ್ಲಿ ಉಪನ್ಯಾಸಕರಿಗೆ ಮಾಹಿತಿಯನ್ನು ನೀಡಿದರು. ಬಳಿಕ ಉಪನ್ಯಾಸಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.


ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಡಾ.ಕೆ.ಎನ್.ಸುಬ್ರಹ್ಮಣ್ಯ ಅವರು ಸಮಾರೋಪದ ಮಾತುಗಳನ್ನಾಡುತ್ತಾ “ಹೊಸಯುಗದ ವಿದ್ಯಾರ್ಥಿಗಳನ್ನು ತಿದ್ದಿ-ತೀಡಲು ಬೇಕಾದ ತರಬೇತಿ ಇಂದಿನ ದಿನಗಳಲ್ಲಿ ತುಂಬಾ ಅವಶ್ಯಕತೆ ಇದೆ. ಪರಿಸ್ಥಿತಿಗೆ ತಕ್ಕಂತೆ ಬದಲಾವಣೆಗಳನ್ನು ನಾವು ಮಾಡಿಕೊಳ್ಳಬೇಕಿದೆ” ಎಂದು ಹೇಳಿದರು. ಕಾರ್ಯಗಾರದಲ್ಲಿ ಅಂಕಣಕಾರರು ಹಾಗೂ ಕವಯತ್ರಿ ಮಲ್ಲಿಕಾ ಜೆ.ರೈ , ಪ್ರಾಂಶುಪಾಲರಾದ ಮಹೇಶ್‌ ನಿಟಿಲಾಪುರ, ಉಪಪ್ರಾಂಶುಪಾಲರಾದ ದೇವಿಚರಣ್‌ ರೈ, ನರೇಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್‌ ಶ್ಯಾನುಭೋಗ್‌, ವಿವೇಕಾನಂದ ಪದವಿಪೂರ್ವ ಕಾಲೇಜು ಹಾಗೂ ನರೇಂದ್ರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಪಾಲ್ಗೊಂಡರು. ಉಪನ್ಯಾಸಕಿ ಯಶವಂತಿ. ಡಿ ಸ್ವಾಗತಿಸಿ , ಕಾರ್ಯಕ್ರಮವನ್ನು ನಿರೂಪಿಸಿದರು. ದೇವಿಚರಣ್‌ ರೈ ವಂದಿಸಿದರು. 



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top