ಭರತಾಂಜಲಿ ನೃತ್ಯ ಸಂಸ್ಥೆಯಿಂದ ಪುರುಷ ನಾಟ್ಯ ವಿಲಾಸ
ಮಂಗಳೂರು: ನೃತ್ಯ ಗುರುಗಳು ಪರೀಕ್ಷೆಗಳನ್ನು ಪೂರೈಸಿಕೊಂಡರೆ ಸಾಲದು; ಅಳವಾದ ಅಧ್ಯಯನ ಜ್ಞಾನ ಸೃಜನಶೀಲತೆ ಬೆಳೆಸಿಕೊಳ್ಳಬೇಕು. ಹಾಗಾದಾಗ ಮಾತ್ರ ಸಮರ್ಥ ನೃತ್ಯ ಗುರು ಎನಿಸಿಕೊಳ್ಳಲು ಸಾಧ್ಯ ಎಂದು ಉಪಾಧ್ಯಾಯ ಸ್ಕೂಲ್ ಆಫ್ ಡಾನ್ಸ್ ಬೆಂಗಳೂರು ಇದರ ನೃತ್ಯ ಗುರು ವಿದ್ವಾನ್ ಪಾಶ್ವನಾಥ ಉಪಾಧ್ಯಾಯ ಅಭಿಪ್ರಾಯ ಪಟ್ಟರು.
ಅವರು ಮಂಗಳೂರಿನ ಕೊಟ್ಟಾರದ ಭರತಾಂಜಲಿ ನೃತ್ಯ ತರಬೇತಿ ಸಂಸ್ಥೆಯವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಗರದ ಡಾನ್ ಬಾಸ್ಕೋ ಹಾಲ್ ನಲ್ಲಿ ಹಮ್ಮಿಕೊಂಡ ಪುರುಷ ನಾಟ್ಯ ವಿಲಾಸ ಹಾಗೂ ನೃತ್ಯ ಗುರು ಉಳ್ಳಾಲ ಮೋಹನ್ ಕುಮಾರ್ ಇವರ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದರು.
ಸಮರ್ಥ ನೃತ್ಯ ಗುರು ಅಥವಾ ನೃತ್ಯ ಕಲಾವಿದರು, ಸತ್ಯ ಘಟನೆಗಳು ಮತ್ತು ಸಮಕಾಲಿನ ಸಂಗತಿಗಳನ್ನು ತಮ್ಮ ನೈಪುಣ್ಯತೆಯಿಂದ ಮಾತ್ರ ಪ್ರತಿಬಿಂಬಿಸಲು ಸಾಧ್ಯ. ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ ಭರತಾಂಜಲಿ ನೃತ್ಯ ಸಂಸ್ಥೆಯ ನೃತ್ಯ ಗುರುಗಳು ಶ್ಲಾಘನೀಯ ಎಂದರು.
ಸನ್ಮಾನವನ್ನು ಸ್ವೀಕರಿಸಿದ ನಾಟ್ಯಾಚಾರ್ಯ ಉಳ್ಳಾಲ ಮೋಹನ ಕುಮಾರ್ ಶುಭ ಹಾರೈಸಿದರು. ಇನ್ನೋರ್ವ ಮುಖ್ಯ ಅತಿಥಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ ಕರಾವಳಿ ಕಂಡಂತಹ ಸಮರ್ಥ ನೃತ್ಯ ಗುರುಗಳು ಉಳ್ಳಾಲ ಮೋಹನ್ ಕುಮಾರ್. ಇವರು ನಮ್ಮ ತುಳುನಾಡಿನ ಒಂದು ದೊಡ್ಡ ಆಸ್ತಿ ಎಂದರು.
ವಾಗ್ಮಿ ಕಶೆಕೋಡಿ ಸೂರ್ಯನಾರಾಯಣ ಭಟ್ ಕಾರ್ಯಕ್ರಮದ ಅವಲೋಕನ ಮಾಡಿದರು. ವಿದ್ವಾನ್ ಶ್ರೀಧರ ಹೊಳ್ಳ ಅಭಿನಂದನಾ ನುಡಿಗಳನ್ನು ಮಾತನಾಡಿದರು. ವಿದುಷಿ ಪ್ರತಿಮಾ ಶ್ರೀಧರ್ ಸ್ವಾಗತಿಸಿ ವಂದಿಸಿದರು. ನೃತ್ಯ ಶಿಕ್ಷಕಿ ವಿದುಷಿ ಪ್ರಕ್ಷಿಲಾ ಜೈನ್ ಕಾರ್ಯಕ್ರಮ ನಿರೂಪಿಸಿದರು.
ಗುರು ಮೋಹನ್ ಕುಮಾರ್ ಇವರನ್ನು ತುಳುನಾಡಿನ ಜಾನಪದೀಯ ಕಲೆಯಾದ ಯಕ್ಷಗಾನದ ರಾಜ ಕಿರೀಟವನ್ನು ತೊಡಿಸಿ ಸನ್ಮಾನಿಸಲಾಯಿತು. ಕರ್ನಾಟಕ ಕಲಾಶ್ರೀ ಗುರು ಕಮಲ ಭಟ್, ಸಂಸ್ಥೆಯ ನೃತ್ಯ ಶಿಕ್ಷಕಿ ಮಾನಸ ಕುಲಾಲ್, ಅದಿತಿ, ಆಕಾಶ್ ಎಸ್ ಹೊಳ್ಳ, ಅಂಕಿತಾ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಕೊನೆಯಲ್ಲಿ ಹಾಸನದ ಉನ್ನತ್ ಜೈನ್ ಇವರ ಶಿಷ್ಯ ಸುಮಂತ್, ಬೆಂಗಳೂರಿನ ಪಾರ್ಶ್ವನಾಥ ಉಪಾಧ್ಯಾಯ ಇವರ ಶಿಷ್ಯ ಶೋಭಿತ್ ರಮೇಶ್ ಇವರುಗಳು ಭರತನಾಟ್ಯ ಪ್ರದರ್ಶನವನ್ನು ಪ್ರದರ್ಶಿಸಿದರೆ ಹುಬ್ಬಳ್ಳಿಯ ವಿದ್ವಾನ್ ಸುಜಯ್ ಶಾನುಭಾಗ್ ಇವರಿಂದ ಭಕ್ತಿ ಪ್ರಧಾನವಾದ ರಂಗ ಎನ್ನುವ ಪ್ರಸ್ತುತಿಯು ಮನೋಜ್ಞವಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಮನರಂಜಿಸಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

