ನಂಜನಗೂಡು ರಾಯರ ಮಠ: ಮಂತ್ರಾಲಯ ಶ್ರೀಗಳಿಂದ ರಾಯರ ಬೃಂದಾವನಕ್ಕೆ ವಿಶೇಷ ಪೂಜೆ

Upayuktha
0



ಬೆಂಗಳೂರು: ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂತ್ರಾಲಯದ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಗುರುವಾರದ ಪ್ರಯುಕ್ತ ವಿಶೇಷವಾಗಿ ರಾಯರ ಬೃಂದಾವನಕ್ಕೆ ಪೂಜೆ ಸಲ್ಲಿಸಿದರು. 


ಈ ಸಂದರ್ಭದಲ್ಲಿ ವಾರ್ತಾ ವಿಭಾಗ, ರಿಪಬ್ಲಿಕ್ ಕನ್ನಡ, ರಿಪಬ್ಲಿಕ್ ನ್ಯಾಶನಲ್ ನೆಟ್ವರ್ಕ್ ವಾರ್ತಾ ನಿರೂಪಕರೂ ಆದ ಶ್ರೀ ರಾಘವೇಂದ್ರ ಸ್ವಾಮಿಗಳ ಅಂತರಂಗ ಭಕ್ತರೂ ಆಗಿರುವ ಶ್ರೀಪಾದ್ ಪಾಟೀಲ್ ರವರು  ಮತ್ತು ಶ್ರೀ ಮಠದ ವಿಶೇಷ ಕಾರ್ಯಕ್ರಮಗಳನ್ನು ನಿಯೋಜನೆ ಮಾಡುವಂತಹ  ಸುಧೀಂದ್ರ ದೇಸಾಯಿ ಅವರು ಶ್ರೀ ಗುರುರಾಯರ ಸನ್ನಿಧಿಗೆ ಆಗಮಿಸಿ, ಗುರುಗಳಿಗೆ ದೀಪವನ್ನು ಬೆಳಗಿಸಿದರು.  ನಂತರ ಮಂತ್ರಾಲಯ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಶೇಷವಸ್ತ್ರ ಫಲ ಮಂತ್ರಾಕ್ಷತೆಯನ್ನು  ಸ್ವೀಕರಿಸಿ ಶ್ರೀ ಗುರುಗಳ ಅನುಗ್ರಹಕ್ಕೆ ಪಾತ್ರರಾದರು, ಈ ಸಂದರ್ಭದಲ್ಲಿ  ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್,  ನಂದಕಿಶೋರ ಆಚಾರ್ ಉಪಸ್ಥಿತರಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top