ಸಾಧಕರಿಗೆ ನಮನ

Upayuktha
0


ಕುಂಬ್ಳೆ: ಹಿರಿಯ ಸಾಹಿತಿ, ಶಿಕ್ಷಣತಜ್ಞ ಶ್ರೀ ವಿ.ಬಿ.ಕುಳಮರ್ವ ಹಾಗೂ ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಶ್ರೀಮತಿ ಲಲಿತಾಲಕ್ಷ್ಮೀ ದಂಪತಿಗಳು  "ಸಾಧಕರಿಗೆ ನಮನ" ಎಂಬ ಶೀರ್ಷಿಕೆಯಲ್ಲಿ ಇದುವರೆಗೆ ಹಲವು ಜನ ಗುರುಹಿರಿಯರನ್ನು ಹಾಗೂ ವಿಶೇಷ ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿಸಿ ಅಭಿನಂದಿಸುವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ.


ಭಾನುವಾರ ಅವರು ಮಂಗಳೂರಿನ ಅಶೋಕನಗರದ ಶ್ರೀ ಶ್ರೀನಿವಾಸ ರಾಯರ ಮನೆಗೆ ತೆರಳಿ ತೊಂಭತ್ತರ ಹರಯದ ಶ್ರೀನಿವಾಸ ರಾವ್ ಹಾಗೂ ಸಾವಿತ್ರಿ ದಂಪತಿಗಳನ್ನು ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸುವುದರೊಂದಿಗೆ ಹಿರಿಯರ ಆಶೀರ್ವಾದಗಳನ್ನು ಪಡೆದುಕೊಂಡರು.


ಶ್ರೀನಿವಾಸ ರಾವ್ ಹಾಗೂ ಸಾವಿತ್ರಿ ದಂಪತಿಗಳು ಕಾಸರಗೋಡು ಹಾಗೂ ಉಡುಪಿ ಜಿಲ್ಲಾ ಸಹಿತವಾದ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಸ್ಥಾಪಕ ಕಾರ್ಯದರ್ಶಿಗಳಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಮುನ್ನಡೆಸುತ್ತಾ ಬಂದವರು. ಮಕ್ಕಳಲ್ಲಿ ಹುದುಗಿರುವ ಸಾಹಿತ್ಯ ಪ್ರತಿಭೆಯನ್ನು ಗುರುತಿಸುವ ನಿಟ್ಟಿನಲ್ಲಿ ಸಾವಿರಾರು ಕಮ್ಮಟಗಳನ್ನು , ಸಮ್ಮೇಳನಗಳನ್ನು ನಡೆಸುತ್ತಾ ಬಂದವರು. ತಮ್ಮ ಜೀವಮಾನವನ್ನೇ ಸಾಹಿತ್ಯ ಮತ್ತು ಸಮಾಜಕ್ಕೆ ಮೀಸಲಾಗಿರಿಸಿದ ಮಹಾನುಭಾವರು. ಇಬ್ಬರೂ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರು. ಈ ಸಂದರ್ಭದಲ್ಲಿ ಅವರು ತಮ್ಮ ಸಾಧನಾ ಪಥದ ಅನುಭವಗಳೊಂದಿಗೆ  ಹಲವಾರು ಹಿರಿಯ ಸಾಧಕರ ಒಟನಾಟದ ದಿವ್ಯಾನುಭವಗಳನ್ನೂ ಹಂಚಿಕೊಂಡರು. 


ಕೆನರಾ ಹೈಸ್ಕೂಲಿನ ಹಿರಿಯ ಶಿಕ್ಷಕಿ ಕವಯತ್ರಿ ಶ್ರೀಮತಿ ಲಕ್ಷ್ಮೀ ಭಟ್ ಅವರೂ ತಮ್ಮ ಅಮೂಲ್ಯ ಪುಸ್ತಕಗಳನ್ನು ಹಿರಿಯರಿಗೆ ಸಮರ್ಪಿಸಿ ಶುಭ ಹಾರೈಸಿದರು. ವಿ.ಬಿ. ಕುಳಮರ್ವ ಸ್ವಾಗತಿಸಿ ಲಲಿತಾಲಕ್ಷ್ಮೀ ಕುಳಮರ್ವ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top