ತಂಬಾಕು ಉತ್ಪನ್ನಗಳ ನಿಷೇಧ ಅತೀ ಅಗತ್ಯ:ಡಾ ಚೂಂತಾರು.

Upayuktha
0


ಮಂಗಳೂರು: ಶುಕ್ರವಾರದಂದು “ವಿಶ್ವ ತಂಬಾಕು ರಹಿತ ದಿನ”ದ ಅಂಗವಾಗಿ ಮಂಜೇಶ್ವರದ ಹೊಸಂಗಡಿಯಲ್ಲಿರುವ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಉಚಿತ ಬಾಯಿ ಕ್ಯಾನ್ಸರ್ ತಪಾಸಣಾ ಶಿಬಿರ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ   ಸುರಕ್ಷಾ ದಂತ ಚಿಕಿತ್ಸಾಲಯದ ದಂತ ವೈದ್ಯರಾದ ಡಾ|| ರಾಜಶ್ರೀ ಮೋಹನ್ ಚೂಂತಾರು ಮತ್ತು ಬಾಯಿ ಮುಖ ದವಡೆ ಶಸ್ತ್ರ ಚಿಕಿತ್ಸಕರಾದ ಡಾ|| ಮುರಲೀ ಮೋಹನ್ ಚೂಂತಾರು ಅವರ ನೇತ್ರತ್ವದಲ್ಲಿ ನಡೆಯಿತು. ಚೂಂತಾರು ಸರೋಜಿಸಿ ಭಟ್ ಪ್ರತಿಷ್ಠಾನ (ರಿ) ಮಂಗಳೂರು ಮತ್ತು ಸುರಕ್ಷಾ ದಂತ ಚಿಕಿತ್ಸಾಲಯದ ಆಶ್ರಯದಲ್ಲಿ ಈ ತಪಾಸಣಾ ಶಿಬಿರ ಕಳೆದ ಹತ್ತು ವರುಷಗಳಿಂದ ನಡೆಯುತ್ತಿದ್ದು, ಈವರೆಗೆ ಸುಮಾರು ಸಾವಿರ ಮಂದಿ ತಂಬಾಕು ವರ್ಜಿಸಿ ವ್ಯಸನ ಮುಕ್ತರಾಗಿ ಸಮಾಜದ ಮುಖ್ಯ ವಾಹಿನಿಗೆ ಸೇರಿರುತ್ತಾರೆ. 


ಈ ಸಂದರ್ಬದಲ್ಲಿ ಮಾತನಾಡಿದ ಡಾ ಚೂಂತಾರು ಅವರು, ಕ್ಯಾನ್ಸರ್ ಪಿಡುಗು ತೊಡೆದು ಹಾಕಲು ಸಂಪೂರ್ಣ ತಂಬಾಕು ನಿಷೇಧದ ಅಗತ್ಯವಿದೆ ಮತ್ತು ಜನರ ಸಹಭಾಗಿತ್ವ ಅತ್ಯಗತ್ಯ ಎಂದು ನುಡಿದರು. ತಂಬಾಕು ಉತ್ಪನ್ನ ಸೇವಿಸುವ 90 ಶೇಕಡಾ ಮಂದಿ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ ಎಂದು ಅಂಕಿ ಅಂಶಗಳಿಂದ ಸಾಬೀತಾಗಿದೆ. ಆದರೂ ಜನರು ತಂಬಾಕು ಸೇವಿಸಿ ಸಾವಿಗೆ ಆಹ್ವಾನ ನೀಡುವುದು ವಿಷಾದನೀಯ ಎಂದು ತಿಳಿಸಿದರು. 


ಈ ಸಂಧರ್ಬದಲ್ಲಿ ರೋಗಿಗಳಿಗೆ  ಡಾ ಚೂಂತಾರು ಬರೆದ ಅರಿವು ಬಾಯಿ ಕ್ಯಾನ್ಸರ್ ಮಾರ್ಗದರ್ಶಿ ಪುಸ್ತಕವನ್ನು ಉಚಿತವಾಗಿ ಹಂಚಲಾಯಿತು.ಸುರಕ್ಷಾ ದಂತ ಚಿಕಿತ್ಸಾಲಯದ ರಮ್ಯಾ,ಚೈತ್ರ,ಸುಶ್ಮಿತಾ ಹಾಗೂ ಜಯಶ್ರೀ ಉಪಸ್ಥಿತರಿದ್ದರು. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top