ಕವಿ ಭಾಸ್ಕರ ಅಡ್ವಳರ ನೂತನ ಕೃತಿ “ಜೀವಸತ್ವ” ಕೃತಿ ಬಿಡುಗಡೆ

Upayuktha
0


ಬಂಟ್ವಾಳ: ವ್ಯಂಗ್ಯ ಚಿತ್ರಕಾರ ವಿರಾಜ್ ಅಡೂರು ಇವರು ಕವಿ ಭಾಸ್ಕರ  ಅಡ್ವಳರ ನೂತನ ಕೃತಿ “ಜೀವಸತ್ವ”, ವಿನೂತನ ಜ್ಞಾನದ ಕೆಕೆ ಒಗಟಿನ ಮಾಲೆಯನ್ನು ಬಿಡುಗಡೆಗೊಳಿಸಿದರು. ಅವರು ಬಂಟ್ವಾಳ ತಾಲೂಕಿನ ವಿಟ್ಲ ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ  ಕೃತಿ ಬಿಡುಗಡೆಗೊಳಿಸಿ ಮಾತಾಡಿದ ವಿರಾಜ್ ಒಗಟುಗಳು ಬುದ್ಧಿಯನ್ನು ಮಸೆಯುತ್ತವೆ. ಒಗಟಿಗೆ ಉತ್ತರ ಶೋಧಿಸುವ ಕಾರಣದಿಂದ ಏಕಾಗ್ರತೆಯು ಬಲಗೊಳ್ಳುತ್ತದೆ. ಮಾತಿನ ಕಟ್ಟೆಗಳಲ್ಲಿ ನಮ್ಮ ಹಿರಿಯರು ಮನರಂಜನೆಗಾಗಿ ಒಗಟು ಹೇಳುತ್ತಿದ್ದರು. ಒಗಟು ಸಾಹಿತ್ಯದ ಅಂಗವಾಗಿದೆ. ಭಾಸ್ಕರ ಅಡ್ವಳರ ಕೃತಿ “ಜೀವಸತ್ವ” ಹಿರಿಯರು ಮತ್ತು ಕಿರಿಯರೆಲ್ಲರಿಗೂ ಸಹಕಾರಿಯಾಗಿದೆ ಎಂದರು.


ಕೃತಿಕಾರ ಭಾಸ್ಕರ ಅಡ್ವಳರು ಪ್ರಸ್ತಾವನೆ ಮಾಡಿದರು. ಮಕ್ಕಳ ಕಲಾಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಇದರ ಅಧ್ಯಕ್ಷ ರಮೇಶ ಎಂ ಬಾಯಾರು ಅಧ್ಯಕ್ಷತೆ ವಹಿಸಿದರು. ಚಂದಳಿಕೆ ಶಾಲಾ ಮುಖ್ಯೋಪಾಧ್ಯಾಯ ವಿಶ್ವನಾಥ ಗೌಡ ಕುಳಾಲು ಸ್ವಾಗತಿಸಿ, ಶಿಕ್ಷಕ ವೆಂಕಟೇಶ್ವರ ಭಟ್ ವಿಟ್ಲ ವಂದಿಸಿ, ಸಹ ಶಿಕ್ಷಕಿ ರೇಶ್ಮಾ ಲೂಯಿಸ್ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top