ಪರಿಷತ್ ಚುನಾವಣೆ ಅಭ್ಯರ್ಥಿ ವಿವಾದ: ಪಕ್ಷದ ನೀತಿ ಎಲ್ಲರಿಗೂ ಒಂದೇ ತೆರನಾಗಿರಲಿ

Upayuktha
0


ಮಾನ್ಯ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷರೇ, ನಮಸ್ತೆ

ಪರಿಷತ್ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ರ ಉಚ್ಚಾಟನೆಗೆ ಶಿಫಾರಸಿನ‌ ಹಿಂದಿನ ಕಾರಣಗಳನ್ನು ಮಾಧ್ಯಮದಲ್ಲಿ ಹೇಳ್ತಾ ಇರೋದನ್ನು ಗಮನಿಸಿದೆ ಬಹಳ ಸಂತೋಷ.‌ ಜಿಲ್ಲಾಧ್ಯಕ್ಷರ ನೆಲೆಯಲ್ಲಿ ಏನ್ಮಾಡ್ಬೇಕೋ ಅದನ್ನು ಮಾಡ್ತಾ ಇದ್ದೀರಿ ಅದು ಸರಿಯೂ ಇರಬಹುದು.

ಆದ್ರೆ ರಘುಪತಿ ಭಟ್ರ ಬೆಂಬಲಕ್ಕೆ ನಿಂತವನಾಗಿ ಅಲ್ಲ; ಬದಲಾಗಿ ಪಕ್ಷದ ಓರ್ವ ಸಾಮಾನ್ಯ ಸದಸ್ಯತ್ವ ಹೊಂದಿದ ಕಾರ್ಯಕರ್ತನಾಗಿ (ಪ್ರಾಯಃ ಅಸಂಖ್ಯ ಕಾರ್ಯಕರ್ತರ ಅಭಿಪ್ರಾಯವೂ ಹೀಗೇ ಇರಬಹುದೇನೋ) ಕೆಲವು ವಿಚಾರ ತಮ್ಮ ಅವಗಾಹನೆಗೆ... ದಯವಿಟ್ಟು ಲಾಲಿಸಬೇಕು.


ರಘುಪತಿ ಭಟ್ರಿಗೆ ನಗರಸಭಾ ಸದಸ್ಯತ್ವ, ಜಿಲ್ಲಾ ಘಟಕದಲ್ಲಿ ಅನೇಕ ಜವಾಬ್ದಾರಿಗಳು, ಮೂರು ಬಾರಿ ಶಾಸಕತ್ವ ಇತ್ಯಾದಿ ಇತ್ಯಾದಿ ಎಲ್ಲ ಕೊಟ್ಟಿದೆ. ಹೀಗಿರುವಾಗ ಮಾತೃಪಕ್ಷಕ್ಕೆ ದ್ರೋಹಬಗೆಯುವುದು ಸರಿಯಲ್ಲ... ಎಂದಿದ್ದೀರಿ.


ನೂರಕ್ಕೆ ನೂರು ಸರಿ ಎಂದೇ ಭಾವಿಸೋಣ. ಆದ್ರೆ ಈ ನ್ಯಾಯ ಎಲ್ರಿಗೂ ಅನ್ವಯಿಸುತ್ತಾ?? ಉಡುಪಿಯೂ ಸೇರಿದಂತೆ ರಾಜ್ಯದಲ್ಲಿ  ಮೂರು ಬಾರಿ ಸಂಸದ, ರಾಜ್ಯಾಧ್ಯಕ್ಷ, ನಾಲ್ಕು ಬಾರಿ ಶಾಸಕ ಸಚಿವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮೂರು ನಾಲ್ಕು ಬಾರಿ ಪರಿಷತ್ ಸದಸ್ಯ ಸಚಿವ ಪ್ರತಿಪಕ್ಷ ನಾಯಕ, ಎರಡು ಬಾರಿ ಶಾಸಕ ಪ್ರತಿಪಕ್ಷ ಉಪನಾಯಕ, ಪರಿಷತ್ ಪ್ರತಿಪಕ್ಷ ನಾಯಕ ಆರು ಬಾರಿ ಸಂಸದ ಮುಖ್ಯಮಂತ್ರಿ ಕೇಂದ್ರ ಮಂತ್ರಿ ರಾಜ್ಯಾಧ್ಯಕ್ಷ ಆರು ಬಾರಿ ಶಾಸಕ ಸಚಿವ ಸ್ಪೀಕರ್ ಹೀಗೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದವರೇ ಇನ್ನೂ ಅಧಿಕಾರದ ಆಕಾಂಕ್ಷಿಗಳಾಗಿ ಹೋರಾಟ ಮಾಡ್ತಾರೆ.‌ ಕೆಲವರು ಕೋರ್ ಕಮಿಟಿಯಲ್ಲಿದ್ದುಕೊಂಡು ತಮ್ಮ ತಮ್ಮೊಳಗೇ ಮತ್ತಷ್ಟು  ಅಧಿಕಾರಗಳನ್ನು ಪಡೆಯುವ ಹುಮ್ಮಸ್ಸಿನಲ್ಲಿದ್ದಾರೆ.


ಇವರಿಗೆಲ್ಲ ಈ ಕಾನೂನಿಲ್ವಾ? ಇದ್ದರೆ ಅನ್ವಯ ಯಾಕಿಲ್ಲ?

ಉಡುಪಿಯಲ್ಲೇ ತಾವು ಹಾಗೂ ಕೆ ಉದಯ ಕುಮಾರ ಶೆಟ್ಟಿಯಂಥವ್ರು ಎಷ್ಟು ವರ್ಷ ಆಯ್ತು ಪರಿಶ್ರಮವನ್ನು ಪಕ್ಷಕ್ಕಾಗಿ ಧಾರೆಯೆರೆಯುತ್ತಲೇ ಇಲ್ವೇ? ಇನ್ನೂ ನೂರಾರು ಕಾರ್ಯಕರ್ತರು ಜನಸಂಘದ ಕಾಲದಿಂದಲೂ ಯಾವ ಅಪೇಕ್ಷೆಯೂ ಇಲ್ಲದೇ ಶ್ರಮಿಸ್ತಾ ಇಲ್ವೇ? ಏನು ಸಿಗ್ತಾ ಇದೆ‌. ಈಗ ಪರಿಷತ್ ಗೆ ನಾಮಕರಣದ ಹೊತ್ತಲ್ಲೂ ಅದೇ ಮಂದಿ ರೇಸಲ್ಲಿದ್ದಾರಲ್ವಾ? ಯಾಕೆ ಉದಯ ಕುಮಾರ ಶೆಟ್ರಂಥವ್ರಿಗೆ ಅವಕಾಶ ಸಿಗಲ್ಲ.


ಭಟ್ರೂ ಹೇಳಿದ್ರು. ನನಗಲ್ಲದಿದ್ರೆ ಕರಾವಳಿಯ ಮಲೆನಾಡಿನ‌ ಅಂಥ ಯಾರೇ ಹಿರಿಯರನ್ನು ಪರಿಗಣಿಸಿದ್ರೂ ನಾನು ನಿಲ್ಲಲ್ಲ ಅಂತ. ಯಾಕೆ ಪಕ್ಷ ಅದನ್ನು ಗಮನಿಸಿಲ್ಲ!? ಇದೆಲ್ಲ ಯೋಚಿಸಬೇಕಾದ ಸಂಗತಿ ಅಲ್ವಾ? ಹಾಗಾದ್ರೆ cadre based party ಅಂದ್ರೇನು? ಸಾಮಾನ್ಯ ಕಾರ್ಯಕರ್ತರ ಧ್ವನಿಯಾಗುವ ನಾಯಕರಾರು.? ಇವತ್ತು ಪರಿಷತ್ ನಾಮಕರಣಕ್ಕೆ ಕ್ಯೂ ನಿಂತವರಲ್ಲಿ ಬಹುತೇಕರು ಜೀವನದ ಅರ್ಧ ಆಯುಷ್ಯ ಅಧಿಕಾರದ ರಾಜಕಾರಣದಲ್ಲೇ ಇದ್ದವರ ಹೆಸರುಗಳು ಚಾಲ್ತಿಯಲ್ಲಿವೆಯಲ್ವಾ? ಯಾಕೆ ಅಷ್ಟೊಂದು ಬರಬಂತಾ?


ಏನ್ ಸರ್ ಇದೆಲ್ಲ?? 

ನನಗೆ ಜೀವಮಾನಕ್ಕೆ ಯಾವ ಅಧಿಕಾರ ಸ್ಥಾನ ಮಾನ‌ ಪದಾಧಿಕಾರ ಅಪೇಕ್ಷಿಸಿಲ್ಲ .ಕೊಟ್ರೂ ಬೇಡವೇ ಬೇಡ. ಆದ್ರೆ ಅದೆಷ್ಟು ಜನ  ಹಿರಿಯರಿಗೆ ಅವಕಾಶ ಇದ್ದಾಗಲೂ ಏನೂ ಸಿಗಲ್ಲ ಯಾಕೆ? 


ಅಂಥ ರಘುಪತಿ ಭಟ್ರ ಉಚ್ಚಾಟನೆಗೆ ಹೇಳಿರುವ ಸಂಗತಿಗಳೂ ಎಲ್ರಿಗೂ ಲಿಖಿತ ಶಾಸನದ ಮೂಲಕ ಎಲ್ರಿಗೂ ಅನ್ವಯಿಸುವಂತೆ ಪಕ್ಷ ಪ್ರಯತ್ನಿಸಲಿ. ಆಗ ಅದಕ್ಕೊಂದು ಅರ್ಥ ಬರ್ತದೆ. ಇನ್ನೂ ಅನೇಕರಿಗೆ ಅವಕಾಶ ಸಾಧ್ಯವಾಗ್ತದೆ. ಅದು ಬಿಟ್ಡು ಒಬ್ರಿಗೊಂದು ಮತ್ತೊಬ್ರಿಗೊಂದು ಅಂದ್ರೆ ಉಚ್ಚಾಟನೆಗೆ ಅರ್ಥವೇ ಇರಲ್ಲ. 


ಆ ಹಿನ್ನೆಲೆಯಲ್ಲಿ ರಘುಪತಿ ಭಟ್ರ ಉಚ್ಚಾಟನೆಗೆ ಕೊಡ್ತಾ ಇರೋ ಕಾರಣಗಳು ಅಸಂಗತವಾಗ್ತವೆ. ಒಂದು ವೇಳೆ ಅಂಥ ಶಾಸನ ಸರ್ವತ್ರ ಬಂದಿದ್ರೆ ಭಟ್ರೂ ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ಖಂಡಿತ ಸ್ಪರ್ಧಿಸ್ತಾ ಇರ್ಲಿಲ್ಲ ಅನ್ನೋದು ಸುಸ್ಪಷ್ಟ.


ಹಿಂದೆ ಶಿಕ್ಷಣದ ಕೊರತೆ ಇತ್ತು. ಆದ್ರಿಂದ ಮೌನವಾಗಿ ಸ್ವೀಕರಿಸುವ ಸ್ಥಿತಿ ಇತ್ತು. ಆದ್ರೆ ಈಗ ಶಿಕ್ಷಣ ಸಿಗ್ತಾ ಇದೆ. ಸೋಶಿಯಲ್ ಮೀಡಿಯಾ ಹರಿತವಾಗಿದೆ. ಜನ ಕಾರ್ಯಕರ್ತರು ಪ್ರಶ್ನಿಸ್ತಾರೆ.‌ ಪ್ರಶ್ನಿಸಲೂ ಬೇಕಾಗಿದೆ.‌ ಇಲ್ಲಾಂದ್ರೆ ಇವತ್ತಲ್ಲ ನಾಳೆ ರಾಜಕೀಯ ಪಕ್ಷಗಳ ಅಸ್ಮಿತೆಗೆ ಕಾರ್ಯಕರ್ತರೇ ದೊಡ್ಡ ಸವಾಲಾದಾರು. ಗಮನಿಸಿ ಅಷ್ಟೇ

ಒಳಿತಾಗಲಿ.


- ಜಿ. ವಾಸುದೇವ ಭಟ್ ಪೆರಂಪಳ್ಳಿ, ಉಡುಪಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top