ರಾಮಚರಿತ ಮಾನಸ
ವಾಲ್ಮೀಕಿ ವಿರಚಿತ ರಾಮಾಯಣ ನಮ್ಮ ಹಿಂದೂ ಸಂಸ್ಕೃತಿಯ ಮಹಾಕಾವ್ಯಗಳಲ್ಲಿ ಒಂದು. ಶ್ರೀ ರಾಮರನ್ನು ದೇವರೆಂದು ಭಜಿಸಿ ಪೂಜಿಸುವ ಈ ಭರತ ಭೂಮಿಯಲ್ಲಿ ಶ್ರೀರಾಮರು ಅವತರಿಸಿ ಪಾವನವಾಗಿಸಿದ ಭಗವಾನ್ ವಿಷ್ಣುವಿನ ದಶಾವತಾರಗಳಲ್ಲಿ ಇದು ಏಳನೇ ಅವತಾರ. ಇಂತಹ ಶ್ರೀ ರಾಮರ ಚರಿತೆಯನ್ನು ಸರಳವಾಗಿ ಸುಶ್ರಾವ್ಯವಾಗಿ ಹಾಡಿ ಭಜಿಸಲು ಅನುಕೂಲವಾಗುವಂತೆ ಈ ಕವಿತೆಯಲ್ಲಿ ಇಡೀ ರಾಮಾಯಣವನ್ನು ತರುವ ಪ್ರಯತ್ನ ಮಾಡಿದ್ದೇನೆ. ಜೈ ಶ್ರೀರಾಮ್.
-ವಿ.ಎಸ್. ಕುಮಾರ್.
ಇಕ್ಷ್ವಾಕು ವಂಶದ ರಾಜ ಶ್ರೀರಾಮ
ದಶರಥ ನಂದನ ರಾಜಾ ರಾಮ
ಕೌಸಲ್ಯಾಸುತ ನಂದನ ರಾಮ
ರಾಮ ರಾಮ ಜಯ ರಾಜಾ ರಾಮ
ಗುರು ಋಷಿಮುನಿಗಳ ರಕ್ಷಿಪ ರಾಮ
ಧನುಸ್ಸನು ಮುರಿದು ವರಿಸಿದ ರಾಮ
ಸೀತಾವಲ್ಲಭ ಜಾನಕಿ ರಾಮ
ರಾಮ ರಾಮ ಜಯ ರಾಜಾ ರಾಮ
ಮಾತೆಯ ಮಾತಿಗೆ ಶರಣಾದ ರಾಮ
ತಂದೆಯ ಮಾತನು ಉಳಿಸಿದ ರಾಮ
ರಾಜ್ಯವ ತ್ಯಜಿಸಿ ಹೊರಟಿಹ ರಾಮ
ರಾಮ ರಾಮ ಜಯ ರಾಜಾ ರಾಮ
ಪತಿಯ ಜೊತೆಯೊಳು ನಡೆದಳು ರಾಮ
ಅಣ್ಣ ನೆರಳಾಗಿ ಲಕ್ಷ್ಮಣ ರಾಮ
ಹೊರಟೇ ಬಿಟ್ಟರು ಕಾಡಿಗೆ ರಾಮ
ರಾಮ ರಾಮ ಜಯ ರಾಜಾ ರಾಮ
ಅರಸುತ ಬಂದಿಹ ಭರತ ಶ್ರೀರಾಮ
ಕೊಟ್ಟಿಹ ಮಾತನು ಮೀರದ ರಾಮ
ಭಾತೃಪ್ರೇಮದ ಭರತ ಶ್ರೀರಾಮ
ರಾಮ ರಾಮ ಜಯ ರಾಜಾ ರಾಮ
ರಾವಣ ಸೋದರಿ ಶೂರ್ಪಣಖಿ ರಾಮ
ಲಕ್ಷ್ಮಣನಂದಕೆ ವರಿಸೆಂದ ರಾಮ
ಕೋಪದಿ ಮೂಗನು ಕಡಿದಿಹ ರಾಮ
ರಾಮ ರಾಮ ಜಯ ರಾಜಾ ರಾಮ
ಮಾಯಾಜಿಂಕೆಯ ಕಂಡಿಹ ರಾಮ
ಜಿಂಕೆಯ ಅಂದಕೆ ಮರುಳಾದ ರಾಮ
ಸತಿಯ ಮಾತಿಗೆ ಮಣಿದಿಹ ರಾಮ
ರಾಮ ರಾಮ ಜಯ ರಾಜಾ ರಾಮ
ರಾಮನ ಬಿಲ್ಲಿಗೆ ಮಡಿದಿಹ ರಾಮ
ಮಡಿಯುವ ಮುನ್ನ ಕೂಗಿಹ ರಾಮ
ಲಕ್ಷ್ಮಣ ರೇಖೆಗೆ ಮುಂದಾದ ರಾಮ
ರಾಮ ರಾಮ ಜಯ ರಾಜಾ ರಾಮ
ಸನ್ಯಾಸಿ ವೇಷದಿ ರಾವಣ ರಾಮ
ಪರ್ಣಕುಟೀರಕೆ ಬಂದಿಹ ರಾಮ
ಭಿಕ್ಷೆಯ ನೀಡಲು ಮುಂದಾದ ರಾಮ
ರಾಮ ರಾಮ ಜಯ ರಾಜಾ ರಾಮ
ಲಕ್ಷ್ಮಣ ರೇಖೆಯ ಲೆಕ್ಕಿಸದ ರಾಮ
ಸೀತೆಯ ಹೊತ್ತೊಯ್ದ ರಾವಣ ರಾಮ
ಜಠಾಯು ಹೋರಾಟಕೆ ನಿಲುಕದ ರಾಮ
ರಾಮ ರಾಮ ಜಯ ರಾಜಾ ರಾಮ
ಪರಿಪರಿಯಾಗಿ ವ್ಯಥಿಸಿದ ರಾಮ
ಸುಳಿವನು ನೀಡಿದ ಜಠಾಯು ರಾಮ
ಸೀತೆಯ ಹುಡುಕುತ ಹೊರಟರು ರಾಮ
ರಾಮ ರಾಮ ಜಯ ರಾಜಾ ರಾಮ
ಕಾಯುತ ಹಣ್ಣಾದ ಶಬರಿ ಶ್ರೀರಾಮ
ಫಲಪುಷ್ಪ ನೀಡಿ ಧನ್ಯಳಾದ ರಾಮ
ಶಬರಿಯ ಭಕುತಿಯ ಮೆಚ್ಚಿಹ ರಾಮ
ರಾಮ ರಾಮ ಜಯ ರಾಜಾ ರಾಮ
ಭಕ್ತಾಗ್ರೇಸರ ಹನುಮ ಶ್ರೀರಾಮ
ಸುಗ್ರೀವ ನೆರವಿಗೆ ಬಂದಿಹ ರಾಮ
ವಾಲಿಯ ವಧಿಸಿ ಜಯಿಸಿಹ ರಾಮ
ರಾಮ ರಾಮ ಜಯ ರಾಜಾ ರಾಮ
ಕೊಟ್ಟಿಹ ಮಾತನು ಉಳಿಸಿಹ ರಾಮ
ಸೀತೆಯ ಹುಡುಕಲು ಸುಗ್ರೀವ ರಾಮ
ವಾನಸ ಸೇನೆಯೊಳು ಹೊರಟಿಹ ರಾಮ
ರಾಮ ರಾಮ ಜಯ ರಾಜಾ ರಾಮ
ಸೀತೆಯ ಕಾಣಲು ಅಣಿಯಾದ ರಾಮ
ಗುರುತಿಗೆ ಉಂಗುರ ನೀಡಿದ ರಾಮ
ಸಾಗರ ದಾಟಿಹ ಹನುಮ ಶ್ರೀರಾಮ
ರಾಮ ರಾಮ ಜಯ ರಾಜಾ ರಾಮ
ಅಶೋಕ ವನದೊಳು ಸೀತೆ ಶ್ರೀರಾಮ
ಹನುಮನ ಕಂಡು ನಲಿದಿಹ ರಾಮ
ಉಂಗುರ ನೀಡಿ ಶರಣಾದ ರಾಮ
ರಾಮ ರಾಮ ಜಯ ರಾಜಾ ರಾಮ
ಹನುಮನ ಬಾಲಕೆ ಬೆಂಕಿಯು ರಾಮ
ಅಶೋಕವನವ ದಹಿಸಿದ ರಾಮ
ಲಂಕೆಯ ಉರಿಸಿ ಜಯಿಸಿದ ರಾಮ
ರಾಮ ರಾಮ ಜಯ ರಾಜಾ ರಾಮ
ರಾಮನ ನೆರವಿಗೆ ವಿಭೀಷಣ ರಾಮ
ಸೇತುವೆ ಕಟ್ಟಲು ಅಣಿಯಾದ ರಾಮ
ಸ್ಮರಣೆ ಮಾತ್ರದಿ ಸ್ಪಂದಿಸಿದ ರಾಮ
ರಾಮ ರಾಮ ಜಯ ರಾಜಾ ರಾಮ
ಘನೋರ ಯುದ್ಧಕೆ ಮೊದಲಾದ ರಾಮ
ಮಾಯಾಯುದ್ಧದ ಇಂದ್ರಜಿತ್ತು ರಾಮ
ಮೂರ್ಚೆಯ ಹೋಗಿಹ ಲಕ್ಷ್ಮಣ ರಾಮ
ರಾಮ ರಾಮ ಜಯ ರಾಜಾ ರಾಮ
ಸಂಜೀವಿನಿ ಪರ್ವತವ ಹೊತ್ತುತಂದ ರಾಮ
ಹನುಮನ ದೆಸೆಯಿಂದ ಉಳಿದಿಹ ರಾಮ
ಹನುಮನ ಉಸಿರೊಳು ಒಂದಾದ ರಾಮ
ರಾಮ ರಾಮ ಜಯ ರಾಜಾ ರಾಮ
ಮಾಯಾಜಾಲಕೆ ಮಣಿಯದ ರಾಮ
ಸೋಲಿನ ಸುಳಿಯೊಳು ರಾವಣ ರಾಮ
ಪುತ್ರನ ಕಳಕೊಂಡ ದಶಕಂಠ ರಾಮ
ರಾಮ ರಾಮ ಜಯ ರಾಜಾ ರಾಮ
ಕೊನೆಗೂ ಎಚ್ಚೆದ್ದ ಕುಂಭಕರ್ಣ ರಾಮ
ತಮ್ಮನ ಮಾತನು ಲೆಕ್ಕಿಸದ ರಾಮ
ರಾಮನ ಬಾಣಕೆ ಉರುಳಿದ ರಾಮ
ರಾಮ ರಾಮ ಜಯ ರಾಜಾ ರಾಮ
ಘನಘೋರ ಯುದ್ಧಕೆ ಮೊದಲಾದ ರಾಮ
ಬೆಚ್ಚಿದ ದಶಕಂಠ ರಾವಣ ರಾಮ
ರಾಮನ ಬಾಣಕೆ ಹತನಾದ ರಾಮ
ರಾಮ ರಾಮ ಜಯ ರಾಜಾ ರಾಮ
ಮಾತೆ ಸೀತೆಯ ರಕ್ಷಿಪ ರಾಮ
ವಿಭೀಷಣಗೆ ಪಟ್ಟ ಶ್ರೀರಾಮ
ಅಯೋಧ್ಯೆಯತ್ತ ನಡೆದಿಹ ರಾಮ
ರಾಮ ರಾಮ ಜಯ ರಾಜಾ ರಾಮ
ಮೂಲೋಕದೊಡೆಯ ಜಾನಕಿ ರಾಮ
ಮರ್ಯಾದ ಪುರುಷ ರಾಜ ಶ್ರೀರಾಮ
ಏಕಪತ್ನಿ ವ್ರತಸ್ಥ ಕೋದಂಡ ರಾಮ
ರಾಮ ರಾಮ ಜಯ ರಾಜಾ ರಾಮ
ಚಿತ್ರ ರಚನೆ ಮತ್ತು ಸಾಹಿತ್ಯ :- ವಿ.ಎಸ್.ಕುಮಾರ್.
ಎಂ.ಎ.ಕನ್ನಡ
ಮೊಬೈಲ್ ಸಂಖ್ಯೆ: 7892346105 / 9844604465
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ