ನೈಋತ್ಯ ಕ್ಷೇತ್ರ: ಬಿಜೆಪಿ ನಾಯಕರ ತೀರ್ಮಾನಕ್ಕೆ ಅಸಮಾಧಾನ, ಪಕ್ಷೇತರ ಸ್ಪರ್ಧೆಗೆ ರಘುಪತಿ ಭಟ್ ನಿರ್ಧಾರ

Upayuktha
0

ಉಡುಪಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಕಳೆದ 36 ವರ್ಷಗಳ ಸಂಪ್ರದಾಯವನ್ನು ಮೀರಿ ಕರಾವಳಿಯನ್ನು ಕಡೆಗಣಿಸಿದ ಪಕ್ಷದ ವರಿಷ್ಠರ ತೀರ್ಮಾನವನ್ನು ವಿರೋಧಿಸಿ ಮಾಜಿ ಶಾಸಕ ಕೆ ರಘುಪತಿ ಭಟ್ ಪಕ್ಷೇತರ ಸ್ಪರ್ಧೆಗೆ ಘೋಷಿಸಿದ್ದಾರೆ.


ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಿದಾಗ ಪಕ್ಷದ ಮೇಲಿನ ನಿಷ್ಠೆಯಿಂದ ಪಕ್ಷಕ್ಕೆ ವಿರೋಧಿ ಕೆಲಸ ಮಾಡದೇ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ್ದೆ.


ಆ ವೇಳೆ ಪಕ್ಷದ ನಾಯಕರು ಪರಿಷತ್ ಚುನಾವಣೆಯಲ್ಲಿ ಅವಕಾಶ ಕೊಡುವ ಭರವಸೆ ನೀಡಿದ್ದರು.‌ ಆ ಹಿನ್ನೆಲೆಯಲ್ಲಿ ಕ್ಚೇತ್ರಾದ್ಯಂತ ಸುತ್ತಾಡಿ ಸಾವಿರಾರು ಮತದಾರರ ನೋಂದಣಿಮಾಡಿಸಿದ್ದೆ. ಲೋಕಸಭಾ ಚುನಾವಣೆಯಲ್ಲೂ ಶಿವಮೊಗ್ಗ ಉಸ್ತುವಾರಿಯಾಗಿ ಬಿಜೆಪಿ ಅಭ್ಯರ್ಥಿ ಬಿ‌ವೈ ರಾಘವೇಂದ್ರರ ಪರವಾಗಿ‌ 42 ದಿನ ಅಲ್ಲೇ ಇದ್ದು ಹಗಲಿರುಳೂ ಶ್ರಮಿಸಿದ್ದೇನೆ. ಮೂರು ಬಾರಿ ಶಾಸಕನಾಗಿಯೂ ಅತ್ಯಂತ ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರನಾಗಿದ್ದೇನೆ.‌ ಇಷ್ಟೆಲ್ಲ ಇದ್ದಾಗಿಯೂ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡದೇ ಇರುವ ಪಕ್ಷದ ತೀರ್ಮಾನದಿಂದ ಅಸಮಾಧಾನವಾಗಿದೆ.‌ ಈ ಎಲ್ಲ ಹಿನ್ನೆಲೆಯಲ್ಲಿ ನನ್ನ ಅಭಿಮಾನಿಗಳು ಹಿತೈಷಿಗಳು ಹಾಗೂ ಪದವೀಧರ ಕ್ಷೇತ್ರದ ಸಾವಿರಾರು ಮತದಾರರ ಒತ್ತಾಸೆಯಿಂದ ಪಕ್ಷೇತರನಾಗಿ‌ ಕಣಕ್ಕಿಳಿಯಲು ತೀರ್ಮಾನಿಸಿದ್ದೇನೆ ಎಂದು ರಘುಪತಿ ಭಟ್ ತಿಳಿಸಿದ್ದಾರೆ.  


ನಾನು ಬಿಜೆಪಿ ವಿರೋಧಿಯಲ್ಲ. ಪಕ್ಷದ ಧೋರಣೆಯ ವಿರೋಧಿ. ಚುನಾವಣೆಯಲ್ಲಿ ಗೆದ್ದರೂ ಸೋತರೂ ನಾನು ಬಿಜೆಪಿಯವನೇ ಆಗಿದ್ದೇನೆ ಆಗಿರ್ತೇನೆ ಎಂದು ಭಟ್ ಹೇಳಿದ್ದಾರೆ.

ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಉಡುಪಿಯ ನಿಕಟಪೂರ್ವ ಶಾಸಕರಾದ ಕೆ. ರಘುಪತಿ ಭಟ್ ಅವರು ಬಿಜೆಪಿ ಕಾರ್ಯಕರ್ತರ ಅಭ್ಯರ್ಥಿಯಾಗಿ ಸ್ಪರ್ಧೆಸುತ್ತಿರುವುದರಿಂದ ಅವರ ಹಿತೈಷಿಗಳ ಸಭೆ ಆಯೋಜಿಸಲಾಗಿದೆ. ಹಾಗೂ ಈ ಸಂದರ್ಭದಲ್ಲಿ ಚುನಾವಣಾ ಕಚೇರಿ ಉದ್ಘಾಟನೆ ನಡೆಯಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top