ಧನ್ಯತೆಯ ಭಾವ ಮೂಡಿಸಿದ ಉಪಯುಕ್ತ ನ್ಯೂಸ್ ಬಳಗದ ಶ್ರೀರಾಮ ಕಥಾಲೇಖನ ಅಭಿಯಾನ- ಇಂದು ಸಂಪನ್ನ

Upayuktha
0


|| ಶ್ರೀರಾಮ ಜಯಂ|| ಶ್ರೀರಾಮ ವೈಭವ


ದಾಖಲೆಯ 150 ದಿನಗಳಿಂದ ಮೂಡಿ ಬಂದ ಶ್ರೀರಾಮಕಥಾ ಲೇಖನ ಅಭಿಯಾನ ಸಂಪನ್ನ. ಹಿಂದೂ ಧರ್ಮದ ಪುನರುತ್ಥಾನದ ಪ್ರೇರಕ ಶಕ್ತಿ ಜಗದ್ಗುರು ಆದಿ ಶಂಕರಾಚಾರ್ಯರ ಮತ್ತು ಭಗವದ್ ರಾಮಾನುಜರ ಜಯಂತಿಯ ಪರ್ವಕಾಲದಲ್ಲಿ ಈ ಲೇಖನ ಅಭಿಯಾನ ಸಂಪನ್ನಗೊಂಡಿರುವುದು ಯೋಗಾಯೋಗವೇ ಸರಿ.


ಅಕ್ಷರ ಯಜ್ಞದಲ್ಲಿ ಪಾಲ್ಗೊಂಡು ಯೋಗದಾನ ಮಾಡಿದ ಎಲ್ಲಾ ಸಹೃದಯಿ ರಾಮ ಭಕ್ತಾಗ್ರಣಿ ಲೇಖಕ ಬಂಧು ವರ್ಗಕ್ಕೆ ಕೃತಜ್ಞತಾಪೂರ್ವಕ ಧನ್ಯವಾದಗಳು.

 

ಜಗತ್ತಿನ ಆದಿಕಾವ್ಯ ರಾಮಾಯಣವು ಆಸ್ತಿಕರಿಗೆ ಪಾರಾಯಣ ಗ್ರಂಥ. ಸಾಹಿತ್ಯಾಸಕ್ತರಿಗೆ ರಸಮಯ ಮಹಾಕಾವ್ಯ. ಜನಮನದ ಜೀವನಾಡಿ. ಶ್ರೀ ರಾಮನ ಚರಿತ್ರೆ ಒಂದು ದೊಡ್ಡ ರೂಪಕ. ದಿಟದಲ್ಲಿ ನಮ್ಮ ಪ್ರಾಚೀನ ರಾಷ್ಟ್ರ ಚರಿತ್ರೆಯೂ ಹೌದು.


ಧರ್ಮವೇ ಮೈವತ್ತ ರೂಪ ಶ್ರೀರಾಮ, ಮನಕುಲಕ್ಕೆ ಆದರ್ಶ ಪುರುಷೋತ್ತಮ, ಸಮಸ್ತ ಭಾರತೀಯರ ಸಾಕ್ಷೀಪ್ರಜ್ಞೆ.


ಶತಮಾನಗಳ ಕನಸೊಂದು ಸಾಕಾರಗೊಂಡು, ರಾಷ್ಟ್ರೀಯ ಸಂಸ್ಕೃತಿಯ ಪುನರುತ್ಥಾನದ ಐತಿಹಾಸಿಕ ಸನ್ನಿವೇಶ, ಭಾರತೀಯ ಸಾಂಸ್ಕೃತಿಕ ಏಕತೆಗೆ ಸಾಕ್ಷಿ, ದಿವ್ಯ ಭೂಮಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಭವ್ಯ ಆಲಯದ ಲೋಕಾರ್ಪಣೆಯನ್ನು ನಿಮಿತ್ತೀಕರಿಸಿಕೊಂಡು ಕಳೆದ ವರ್ಷ 2023  ಡಿಸೆಂಬರ್ 15 ರಿಂದ ಆರಂಭಗೊಂಡ ಶ್ರೀ ರಾಮಾಯಣಧಾರಿತ ರಾಮಕಥಾ ಲೇಖನ ಅಭಿಯಾನ ಇಂದು ಶ್ರೀ ರಾಮನ ಮಹಾಪ್ರಸ್ಥಾನ ಲೇಖನದೊಂದಿಗೆ ದಾಖಲೆಯ 150 ದಿನಗಳ ತನ್ನ ಅಕ್ಷರ ಪಯಣವು ಸಂಪನ್ನವಾಗಿ, ರಾಮಾವತಾರ ಸಾಕ್ಷಾತ್ಕಾರದ ರಾಮರಾಜ್ಯದ ಸಂಕಲ್ಪದಿಂದ ಕಾರ್ಯಸಿದ್ಧಿಯಡೆಗೆ ಧನ್ಯತೆಯ ಸಮರ್ಪಣಾ ಭಾವ ಆವರಿಸಿದೆ.


ಸಕಾರಾತ್ಮಕ ಆಲೋಚನೆಯ ಸುದ್ದಿ ಪ್ರಸರಣದಲ್ಲಿ ಸನ್ಮಿತ್ರ ಹಿರಿಯ ಪತ್ರಕರ್ತ ಚಂದ್ರಶೇಖರ ಕುಳಮರ್ವ ಸಾರಥ್ಯದಲ್ಲಿ ಪ್ರಕಟವಾಗುತ್ತಿರುವ ಉಪಯುಕ್ತ  ನ್ಯೂಸ್ ಡಿಜಿಟಲ್ ಮಾಧ್ಯಮ ಬಳಗ (https://www.upayuktha.com/ ಮತ್ತು https://epaper.upayuktha.com/), ಈ ಶತಮಾನದ ಬಹಳ ವಿಶೇಷವಾದ ಸಂಭ್ರಮದ ವಿದ್ಯಮಾನ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ಸುಸಂದರ್ಭದಲ್ಲಿ ಅಭಿಯಾನಕ್ಕೆ ವೇದಿಕೆ ಒದಗಿಸಿ ಶ್ರೀ ರಾಮಾಯಣದ ಪುನರಾವಲೋಕನದತ್ತ ಈ ಲೇಖನ ಸರಣಿಗೆ ಅವಕಾಶ ಮಾಡಿಕೊಟ್ಟು ಕಳೆದ 5 ತಿಂಗಳಿಂದ ನಿರಂತರವಾಗಿ ಪ್ರತಿದಿನವೂ ಶ್ರೀರಾಮಕಥಾ ಮೃತಧಾರೆ ಮೂಡಿಬರಲು ಸಹಕರಿಸಿದ್ದಾರೆ. ಆಸಾಮಾನ್ಯವಾದ ಈ ಕೆಲಸದ ಮೂಲಕ ಕನ್ನಡ ಸಾಹಿತ್ಯ ಸೇವೆಯನ್ನು ತನ್ನದೇ ಆದ ರೀತಿಯಲ್ಲಿ ಸಲ್ಲಿಸಿ ಸನ್ಮಾನ್ಯರಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಮತ್ತು ಪ್ರೇರಣೆಯ ಸಂಗತಿ.


ಶ್ರೀರಾಮ ಭಕ್ತಿಯ ಹೊನಲು ಹರಡಿ ಈ ಅಭಿಯಾನಕ್ಕೆ ಜೀವ ಕಳೆ ತುಂಬಿದವರು ವಿದ್ವತ್ ವಿಭೂತಿ ಸಜ್ಜನ ಸಂಪನ್ನರಾದ ಲೇಖಕರ ಬಳಗ. 

ಅಭಿಯಾನದ ಕಾರಣದಿಂದ ನಾಡಿನುದ್ದಕ್ಕೂ ಅಲ್ಲದೆ ಹೊರನಾಡಿನಿಂದಲೂ ಕನ್ನಡದ ಅಭಿಮಾನವಿರುವ ಹೂಮನಸಿನ ಬರಹಗಾರರು ರಾಮ- ರಾಮಾಯಣ- ರಾಮಜನ್ಮಭೂಮಿ: ಜಗದಗಲ ಹರಡಿರುವ ರಾಮಾಯಣದ ಕಂಪು ಮೊದಲಾದ ಮೌಲಿಕ -ವಿಷಯ ವಸ್ತುಗಳ ಸ್ಪೂರ್ತಿದಾಯಕ ಆಪ್ಯಾಯಮಾನ ನುಡಿ ಸಿಂಚನ ಅನುಷ್ಠಾನ ವೇದಾಂತದ ಸಂದೇಶ ಸೌರಭದಿಂದ ವೈವಿಧ್ಯಮಯ ಮಾಹಿತಿ ಕಣಜವಾಗಿ ಸಕಾಲದಲ್ಲಿ ಬರೆದು ಕಳುಹಿಸಿ ಯಶಸ್ಸಿಗೆ ನಿಜ ಅರ್ಥದಲ್ಲಿ ಸೇವೆ ಸಲ್ಲಿಸಿದವರೆಲ್ಲರಿಗೂ ಶರಣು ಶರಣಾರ್ಥಿ.


ಕಳೆದ 5 ತಿಂಗಳಿಂದ ಬಾಳನ್ನು ನಿತ್ಯ ಬೆಳಗುವ ಅನಿರುದ್ಧ ಸಂಕರ್ಷಣ ಪ್ರದ್ಯುಮ್ನ ವಾಸುದೇವ ನಾರಾಯಣ ಪಂಚರೂಪಿ ಪರಮಾತ್ಮನ ಚಿಂತನಾತ್ಮಕವಾಗಿ ಆಧ್ಯಾತ್ಮಿಕ ಅನುಭೂತಿಯ ಆಚರಣೆಗಳ ಕುರಿತು ಬೆಳಕು ಚೆಲ್ಲಲು ವಿನಮ್ರವಾಗಿ ಪ್ರಯತ್ನ ಮಾಡಲಾಗಿದೆ. ಎಲ್ಲಿಯವರೆಗೆ ಪರ್ವತ ಸಮುದ್ರ ನದಿಗಳು ಈ ಭೂಮಿಯಲ್ಲಿರುವವೊ ಅಲ್ಲಿಯವರೆಗೆ ಕಥೆ ಈ ಲೋಕದಲ್ಲಿ ಪ್ರಚಲಿತವಾಗಿರುತ್ತದೆ ಎಂಬ ಮಹರ್ಷಿ ವಾಲ್ಮೀಕಿಗಳ ವಾಣಿಯಂತೆ ಉದಾತ್ತ ವಿಚಾರಧಾರೆಯಿಂದ ಈ ಅಭಿಯಾನದ ವಿಶಾಲತೆ ಹೆಚ್ಚಾಗಿ ಜನರ ಹಾಗೂ ಸಮಾಜದ ಅಭಿವೃದ್ಧಿಗೆ ಕಾರಣವಾಗಲಿ ಎಂದು ಆಶಿಸುತ್ತಾ, ಈ ಅಭಿಯಾನದ ಆಯೋಜನೆ ಸಂಘಟನೆಯಲ್ಲಿ ಬೆನ್ನು ತಟ್ಟಿ ಪ್ರೋತ್ಸಾಹಿಸಿ ಸಲಹೆ ಸೂಚನೆ ನೀಡಿದ ಅನೇಕ ಗಣ್ಯ ಮಾನ್ಯರಿಗೆ ಚಿರಋಣಿ.



ಪ್ರಿಯ ರಾಮ ಭಕ್ತರಲ್ಲಿ ವಿನಮ್ರ ಬಿನ್ನಹ 

ಇದುವರೆಗೂ ಪ್ರಕಟವಾದ ಲೇಖನಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಂಕಲಿಸಿ ಶ್ರೀ ರಾಮಾಯಣ ಜ್ಞಾನ ದರ್ಪಣವೆಂಬ ಸಾರ್ವಕಾಲಿಕ ಸಂಗ್ರಹ ಯೋಗ್ಯ ಸಂಪುಟ ಒಂದನ್ನು ಪ್ರಕಟಪಡಿಸಲು ಉದ್ದೇಶಿಸಿದ್ದೇನೆ. 1/4 ಕ್ರೌನ್ ಆಕಾರದ 600 ಪುಟಗಳ ಹೆಬ್ಬೊತ್ತಿಗೆ ಮುದ್ರಣ ಕಾರ್ಯಕ್ಕೆ ಉದಾರ ಕಾಣಿಕೆ ನೀಡಿ ಸಹಕರಿಸಲು ಸವಿನಯ ಮನವಿ.


ಓದುಗರ ಔದಾರ್ಯ ದೇಣಿಗೆ ಸಂಗ್ರಹವು ಆರಂಭವಾಗಿದ್ದು ಶೀಘ್ರದಲ್ಲೇ ಅಂದರೆ ಈ ವರ್ಷದೊಳಗೆ ಶ್ರೀರಾಮಕಥಾ ಲೇಖನ ಅಭಿಯಾನದಲ್ಲಿ ಪಾಲ್ಗೊಂಡ ನಿಮ್ಮೆಲ್ಲರ ಸಮ್ಮುಖದಲ್ಲಿ ವಿಶೇಷ ಕಾರ್ಯಕ್ರಮ ಒಂದನ್ನು ಆಯೋಜಿಸಿಈ ಗ್ರಂಥದ ಅನಾವರಣ ಮಾಡುವ ಯೋಜನೆ ಇದೆ.


ನಮ್ಮ ಸಾಂಸ್ಕೃತಿಕ ನೆಲೆಯಲ್ಲಿ ಮೌಲ್ಯಯುತ ಪುಸ್ತಕ ಪ್ರಕಟಣೆ ಗಳಿಂದ ಉತ್ತಮ ನಿರ್ಮಿಸುವತ್ತ ಒಂದು ಹೆಜ್ಜೆ ಇಟ್ಟಿರುವ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಮೂಲಕ ಎಲ್ಲಾ ವಯೋಮಾನದವರಿಗೂ ರುಚಿಸುವಂತಹ ರಾಮಾಯಣದ ಕುರಿತು ವಿಷಯ ಹಂದರ: ವ್ಯಾಪ್ತಿ -ವಿಸ್ತಾರ 150 ಅಧ್ಯಯನಶೀಲ ಬರಹಗಳ ಸಂಕಲನ ಇದಾಗಲಿದೆ.


ನೀವು ಹೀಗೆ ತೊಡಗಿಸಿಕೊಳ್ಳಬಹುದು:


  • ಕನಿಷ್ಠ ₹ 1000 ಗಳನ್ನು ನೀಡಿ ಪ್ರಾಯೋಜಕ ಪುಟ ಪ್ರಾಯೋಜಕ ರಾಗಬಹುದು.
  • ಪ್ರಕಟನಾ ಪೂರ್ವ ಖರೀದಿಗೆ ಮುಂಗಡ ಹಣಕೊಟ್ಟು ಕಾಯ್ದಿರಿಸಬಹುದು (ಮುಖಬೆಲೆ ₹ 600 ಪ್ರಕಟಣಾ ಪೂರ್ವ ರಿಯಾಯಿತಿ ₹500).
  • ನಿಮ್ಮ ಆಸಕ್ತ ಆಪ್ತ ವರ್ಗಕ್ಕೆ ಉಡುಗೊರೆಯಾಗಿ ನೀಡಬಹುದು. 
  • ಕಾರ್ಯಕ್ರಮಗಳಲ್ಲಿ ಸ್ಮರಣಿಕೆಯ ಬದಲು ಇದನ್ನು ನೀಡಿದರೆ ಉತ್ತಮ.
  • ನಿಮ್ಮ ದೇಣಿಗೆಗಳನ್ನು 9739369621 ಗೆ ಗೂಗಲ್ ಪೇ ಅಥವಾ ಫೋನ್ ಪೇ ಮಾಡಿ ಪೂರ್ಣ ಅಂಚೆ ವಿಳಾಸದೊಂದಿಗೆ ಸ್ಕ್ರೀನ್ ಶಾಟ್ಸ್ ಕಳುಹಿಸಿ
  • ಪುಸ್ತಕದ ಬಗ್ಗೆ ಮಾಹಿತಿಯನ್ನು ನಿಮ್ಮ ಆತ್ಮೀಯರೊಂದಿಗೂ ಹಂಚಿಕೊಳ್ಳಿ.
  • ಗ್ರಂಥ ದಾಸೋಹಿಗಳಾಗಿ ನಿಮ್ಮ ಪರಮಾಪ್ತರಿಗೂ ಈ ಗ್ರಂಥವನ್ನು ಉಡುಗೊರೆಯಾಗಿ ನೀಡಬಹುದು.


ಅಭಿಮಾನವಿರಲಿ, ವಂದನೆಗಳೊಂದಿಗೆ,


- ಡಾ. ಗುರುರಾಜ ಪೋಶೆಟ್ಟಿಹಳ್ಳಿ 

ಕಾರ್ಯನಿರ್ವಾಹಕರು

ಪ್ರಣವ ಮೀಡಿಯಾ ಹೌಸ್ ಪ್ರಕಾಶನ, ಬೆಂಗಳೂರು

ಮತ್ತು ಸಂಚಾಲಕರು, ಶ್ರೀರಾಮಕಥಾ ಲೇಖನ ಅಭಿಯಾನ ಉಪಯುಕ್ತ.ಕಾಮ್



ಓದುಗರ ಅಭಿಪ್ರಾಯ

ಇತಿಹಾಸ -ವಿಚಾರ- ಸಂಸ್ಕೃತಿ ಸಮಕಾಲಿನದ ಚತುರ್ಮುಖ ಚಿಂತನವಾಗಿ ಅಭಿಯಾನ ಮೂಡಿಬಂದಿದೆ. ಸರಿಯಾದ ಶೈಕ್ಷಣಿಕ ಸಲಹಾ ಸಮಿತಿ ಯವರು ಪಠ್ಯಪುಸ್ತಕವಾಗಿಯೂ ಆಯ್ಕೆ ಮಾಡಬಹುದು, ಕಾರಣ ಇಲ್ಲಿನ ಲೇಖನಗಳು ಅತ್ಯಂತ ಮೌಲಿಕವಾದ ಸಾಮಾಜಿಕ ಪೌರಾಣಿಕ ಜಾನಪದ ಇತಿಹಾಸ ಅಧ್ಯಯನ ವ್ಯಾಪ್ತಿಯ ದ್ಯೋತಕವಾಗಿ,ಭಾರತೀಯ ಸಂವೇದನೆಯನ್ನು ಜಾಗೃತಗೊಳಿಸುವ ಆಕರವಾಗಿ ಹೊರಹೊಮ್ಮಿದೆ.

ಡಿಜಿಟಲ್ ಪತ್ರಿಕೋದ್ಯಮದಲ್ಲಿ ಇದೊಂದು ಉತ್ತಮ ಉಪಕ್ರಮವಾಗಿ ಪ್ರಕಟವಾಗಿರುವುದು ಅಭಿನಂದನಾರ್ಹ.


- ಕೆ. ರಾಘವೇಂದ್ರ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top