ಮತದಾನ ಲೆಕ್ಕಾಚಾರ ಹಾಕುತ್ತ ಮತಗಟ್ಟೆಗೆ ಹೊರಟ ದೇಶದ ಮೂರನೆ (ಕರ್ನಾಟಕಕ್ಕೆ ಎರಡನೆ ಮತ್ತು ಕೊನೆಯ) ಹಂತದ ಚುನಾವಣೆ ನೆಡೆಯುತ್ತಿರುವ 'ವ್ಯಾಪ್ತಿ ಪ್ರದೇಶದ' ಮತದಾರರು, ಪೆನ್ಡ್ರೈವ್ ಹಂಚಿಕೆ, 'ಮಂತ್ರಿ'ಸಿದ ಲಿಂಬೇಹಣ್ಣು ವಿಚಾರಗಳನ್ನು ಬಿಟ್ಟು, ಲೇಟೆಸ್ಟ್ ನ್ಯೂಸ್ ಏನಿದೆ ಅಂತ ಗೂಗಲ್ ಕಟ್ಟೆಯ ಡಿಜಿಟಲ್ NEWSಗಳ ಮೇಲೆ ಕಣ್ಣು ಹಾಯಿಸಿದರೆ... ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಮಮಂದಿರ ತೀರ್ಪು ರದ್ದತಿಗೆ ಚಿಂತನೆ ಎಂಬ ಸುದ್ದಿ ಕಣ್ಣಿಗೆ ರಾಚುತ್ತಿದೆ.
ಹೀಗೆ ಅನೇಕ ಡಿಜಿಟಲ್ ಪ್ರಿಂಟ್ ಪತ್ರಿಕೆಗಳಲ್ಲಿ ಮೂಡಿ ಬಂದಿವೆ.
ಸುದ್ದಿಯ ವಿವರ:
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಮಮಂದಿರ ಕುರಿತ *ಸುಪ್ರೀಂ ಕೋರ್ಟ್ ತೀರ್ಪು ರದ್ದುಗೊಳಿಸುವ ಯೋಚನೆಯನ್ನು ಪಕ್ಷದ ನಾಯಕ ರಾಹುಲ್ ಗಾಂಧಿ ಹೊಂದಿದ್ದಾರೆ ಎಂದು ಪಕ್ಷದ ಮಾಜಿ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಸುದ್ದಿಯ ಬಾಂಬ್ ಸಿಡಿಸಿದ್ದಾರೆ. ಆಚಾರ್ಯರು ಸುದ್ದಿಗಾರರ ಜತೆ ಸೋಮವಾರ ಮಾತನಾಡಿ, ‘ನಾನು ಕಾಂಗ್ರೆಸ್ನಲ್ಲಿ 32 ವರ್ಷಗಳಿಗಿಂತ ಹೆಚ್ಚು ಕಾಲ ಕಳೆದಿದ್ದೇನೆ ಮತ್ತು ರಾಮಮಂದಿರ ಸುಪ್ರೀಂ ಕೋರ್ಟ್ ತೀರ್ಪು ಬಂದಾಗ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ತಮ್ಮ ಆಪ್ತರ ಜತೆ ಸಭೆ ನಡೆಸಿದ್ದರು. ಈ ವೇಳೆ ನಾಯಕರು ‘ನಮ್ಮ ಪಕ್ಷದ ಸರ್ಕಾರ ರಚನೆಯಾದ ನಂತರ ಒಂದು ಉನ್ನತ ಆಯೋಗ ರಚಿಸೋಣ. ಹಿಂದೆ ರಾಜೀವ್ ಗಾಂಧಿಯವರು 'ಶಾ ಬಾನೋ ತೀರ್ಪಿನ ನಿರ್ಧಾರವನ್ನು ರದ್ದುಗೊಳಿಸಿದಂತೆಯೇ, ಆಯೋಗದ ಶಿಫಾರಸು ಅನುಸರಿಸಿ ನಾವು ರಾಮಮಂದಿರ ಕುರಿತ ಸುಪ್ರೀಂ ಕೋರ್ಟ್ ತೀರ್ಪನ್ನು ರದ್ದುಗೊಳಿಸೋಣ’ ಎಂದು ಹೇಳಿದ್ದರು’ ಎಂದು ಆರೋಪಿಸಿದರು.
(ಪೂರ್ತಿ ಸ್ಪಷ್ಟ ಸುದ್ದಿಗೆ ಗೂಗಲ್ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಯೋಧ್ಯೆ ತೀರ್ಪು ಅಂತ ಸರ್ಚ್ ಕೊಟ್ಟು ಓದಬಹುದು)
**
ಈಗ ಕುತೂಹಲಕರ ಪ್ರಶ್ನೆ ಇಷ್ಟೆ:
ಮತದಾನದ ಸರದಿಯಲ್ಲಿ ನಿಂತು, ಇಂತಹ ಬಟನ್ ಒತ್ತಬೇಕು ಅಂತ ನಿರ್ಧಾರ ಮಾಡಿದ ಮತದಾರ, ಈಗ, ಈ ನ್ಯೂಸ್ ನೋಡಿ ಮೊಬೈಲ್ EVM ಬಳಿ ಹೋದಾಗ ಮನಸ್ಸು ಬದಲಾಯಿಸಬಹುದಾ? ಮತದಾನ ಲೆಕ್ಕಾಚಾರ ವ್ಯತ್ಯಾಸ ಸಾಧ್ಯತೆ ಇದೆಯಾ? ಒಂದು ಪಕ್ಷಕ್ಕೆ ಸಿಗುವ ಓಟು ಹೆಚ್ಚಾಗಬಹುದಾ ಮತ್ತು ಇನ್ನೊಂದು ಪಕ್ಷಕ್ಕೆ ಓಟು ಕಡಿಮೆ ಆಗಬಹುದಾ?
ಮತದಾರನ ಯೋಚನೆ ಇವತ್ತು ಒಂದಿಷ್ಟು ನಿರ್ಧಾರ ಆಗಬಹುದು. ಆದರೆ ಆ ನಿರ್ಧಾರ ಏನು ಅಂತ ಗೊತ್ತಾಗುವುದು ಜೂನ್ ಮೊದಲ ವಾರದ ಫಲಿತಾಂಶದ ದಿನವೆ.
ಇವತ್ತು ಮತದಾನ ಮಾಡುತ್ತಿರುವವರಿಗೆ ಶುಭಾಶಯಗಳು
-ಅರವಿಂದ ಸಿಗದಾಳ್, ಮೇಲುಕೊಪ್ಪ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ