ಮುಲ್ಕಿ: ದ.ಕ. ಜಿಲ್ಲಾಧಿಕಾರಿಯವರ ಸೂಚನೆಯಂತೆ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪಗಳನ್ನು ಎದುರಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಠರಾದ ಡಾ. ಮುರಳಿ ಮೋಹನ್ ಚೂಂತಾರು ರವರ ಉಪಸ್ಥಿತಿಯಲ್ಲಿ ಮುಲ್ಕಿ ಘಟಕದ ಪ್ರವಾಹ ರಕ್ಷಣಾ ತಂಡ ರಚಿಸಲಾಯಿತು.
ರಕ್ಷಣಾ ಕಾರ್ಯಾಚರಣೆಯಲ್ಲಿ ಬಳಸುವ ರಬ್ಬರ್ ದೋಣಿ, ಎಂಜಿನ ಲೈಫ್ ಜಾಕೆಟ್ ಅಸ್ಕಲೆಟ್ , ಮರ ಕತ್ತರಿಸುವ ಯಂತ್ರ ಸೇರಿದಂತೆ ಎಲ್ಲಾ ರಕ್ಷಣಾ ಸಲಕರಣೆಗಳನ್ನು ಡಾ. ಮುರಳಿ ಮೋಹನ್ ಚೂಂತಾರುರವರು ಪರಿಶೀಲನೆ ನಡೆಸಿದರು .ಮುಲ್ಕಿ ಗೃಹರಕ್ಷಕ ದಳದ ಘಟಕ ಅಧಿಕಾರಿ ಲೋಕೇಶ್ ಚಿತ್ರಪು ನೇತೃತ್ವದಲ್ಲಿ ಪ್ರವಾಹ ರಕ್ಷಣಾ ತಂಡ ದಲ್ಲಿ ನುರಿತ ಈಜುಪಟುಗಳು ಮತ್ತು ವಿಪತ್ತು ನಿರ್ವಹಣಾ ತರಬೇತಿ ಪಡೆದ ಸಯ್ಯದ್, ಅಜೀದ್, ನಾಸಿರು ಹುಸೇನ್, ಪುಂಡಲಿಕ, ಶ್ರೀಧರ್ ರವರು ಈ ತಂಡದಲ್ಲಿದ್ದು
ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳಿನ ಅಂತ್ಯದವರೆಗೂ ಸಮುದ್ರದ ನೆರೆಭಾಗ , ನೆರೆಪೀಡಿತ ಪ್ರದೇಶ ಮತ್ತಿತರ ಅಪಾಯಕಾರಿ ಸ್ಥಳಗಳಲ್ಲಿ ದೋಣಿ ಸಹಿತ ರಕ್ಷಣಾ ಸಲಕರಣೆ ದೊಂದಿಗೆ ಬೀಡು ಬಿಟ್ಟಿರಲಿದೆ.ಯಾವುದೇ ಜನಜೀವನದ ಆಸ್ತಿಪಾಸ್ತಿ ಮುಂಜಾಗೃತಾ ಕ್ರಮವಾಗಿ ಇಲ್ಲದ ಮತ್ತು ತಾಲೂಕು ಆಡಳಿತ ಜೊತೆಗೆ ಒಗ್ಗೂಡಿ ರಕ್ಷಣೆಯನ್ನು ಮಾಡಲು ಗೃಹರಕ್ಷಕ ದಳವು ಸನ್ನದರಾಗಿದ್ದು ಈ ವರ್ಷದ ಮಳೆಗಾಲವನ್ನು ಯಶಸ್ವಿಯಾಗಿ ಯಾವುದೇ ಅವಘಡವಾಗದಂತೆ ಮಾನಸಿಕವಾಗಿ ತರಬೇತಿ ನೀಡಲಾಯಿತು ಎಂದು ಡಾ ಮುರಳಿ ಮೋಹನ್ ಚುಂತಾರು ತಿಳಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ