ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಶಾಕಾಂಬರಿನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮೇ 7 ರಿಂದ 10ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ :
ಭಜನಾ ಕಾರ್ಯಕ್ರಮ : (ಪ್ರತಿದಿನ ಸಂಜೆ 6 ಗಂಟೆಗೆ) ಮೇ 7 : ಚಿಂತಲವಾಡಿ ಭಜನಾ ಮಂಡಳಿ, ಮೇ 8 : ಸುಮಧ್ವ ಭಜನಾ ಮಂಡಳಿ, ಮೇ 9 : ಸುಜ್ಞಾನ ಭಜನಾ ಮಂಡಳಿ.
ಪ್ರವಚನ ಕಾರ್ಯಕ್ರಮ : ವೇಣುಗೋಪಾಲಾಚಾರ್ ಗುಡಿ ಇವರಿಂದ ಮೇ 7, 8 ಮತ್ತು 9, ಪ್ರತಿದಿನ ಸಂಜೆ 7 ರಿಂದ 8.
ಹರಿನಾಮ ಸಂಕೀರ್ತನೆ : ಮೇ 10, ಶುಕ್ರವಾರ ಸಂಜೆ 6-30ಕ್ಕೆ. ಗಾಯನ : ಸುಶ್ರಾವ್ಯ ಆಚಾರ್ಯ ಪಿಟೀಲು : ಎಸ್. ಶಶಿಧರ್, ಮೃದಂಗ : ಶ್ರೀನಿವಾಸ್ ಅನಂತರಾಮಯ್ಯ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ