ಕಣಚೂರು ಆಯುರ್ವೇದ ಆಸ್ಪತ್ರೆಯಿಂದ ಉಚಿತ ಚಿಕಿತ್ಸಾ ಶಿಬಿರ

Upayuktha
0


ಮಂಗಳೂರು: ಏಪ್ರಿಲ್ 4ರಂದು ಗುರುವಾರ ಮಂಗಳೂರಿನ ಮೇರಿಹಿಲ್ ಸಮೀಪದ ಗೃಹರಕ್ಷಕ ದಳ ಸಹಯೋಗದಲ್ಲಿ ಅಲ್ಲಿನ ಕಛೇರಿ ಆವರಣದಲ್ಲಿ ಕಣಚೂರು ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ದೇಹ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ.

ಸಂಧಿವಾತ, ಆಮವಾತ, ಚರ್ಮರೋಗ, ಮೂಲವ್ಯಾಧಿ, ಪಿಶರ್, ಪಿಸ್ತುಲಾ, ಅಸ್ತಮಾ ಮತ್ತಿತರ ಕಾಯಿಲೆಯ ತಪಾಸಣೆ ಚಿಕಿತ್ಸೆ ಹಾಗೂ ಕಣಚೂರು ಆಸ್ಪತ್ರೆಯಲ್ಲಿ ಪಂಚಕರ್ಮ, ಕ್ಷಾರಕರ್ಮ ಮುಂತಾದ ಒಳರೋಗಿ ಚಿಕಿತ್ಸಾ ಸೌಲಭ್ಯ ಹಾಗೂ ಪಥ್ಯಾಹಾರ ಸೌಲಭ್ಯವನ್ನೂ ಒದಗಿಸಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.


- ಡಾ ಸುರೇಶ ನೆಗಳಗುಳಿ


إرسال تعليق

0 تعليقات
إرسال تعليق (0)
To Top