ಉಪ್ಪಿನಂಗಡಿ: ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿರುವ ಶಾಸನತಂತ್ರದ ಉಪ್ಪಿನಂಗಡಿ ಮಂಡಲಾಂತರ್ಗತ ಉಪ್ಪಿನಂಗಡಿ ವಲಯದ ಮಾರ್ಚ್ ತಿಂಗಳ ಮಾಸಿಕ ಸಭೆ ಭಾನುವಾರ ಮಹಾಮಂಡಲದ ಮುಷ್ಠಿಭಿಕ್ಷಾ - ಬಿಂದುಸಿಂಧು ವಿಭಾಗ ಪ್ರಧಾನ ಹೇರಂಭ ಶಾಸ್ತ್ರೀ ಇವರ ಧರ್ಮಚಕ್ರ ಮನೆಯಲ್ಲಿ ನಡೆಯಿತು.
ಶಂಖನಾದ, ಗುರುವಂದನೆ ಬಳಿಕ ಹೇರಂಬ ಶಾಸ್ತ್ರಿಗಳು ಸ್ವಾಗತಿಸಿದರು. ಅಧ್ಯಕ್ಷರು ವರದಿ ಮಂಡಿಸಿದರು. ಬಳಿಕ ಪದಾಧಿಕಾರಿಗಳ ವಿಭಾಗದ ಪ್ರಗತಿ ಪರಿಶೀಲನೆ ನಡೆಯಿತು. ಸಭೆಯಲ್ಲಿ ವಿದ್ಯಾರ್ಥಿ ವಾಹಿನಿ ವಿಭಾಗದ ಅವನೀಶ ಮಕ್ಕಳ ಬೇಸಿಗೆ ಶಿಬಿರ ನಡೆಸುವ ಪ್ರಸ್ತಾವನೆಯನ್ನು ಮಂಡಿಸಿದರು. ಸೇವಾಸಹಾಯ ವಿಭಾಗದ ಹರಿಕೃಷ್ಣ ಇವರು ರಕ್ತದಾನ ಶಿಬಿರ ಸಂಯೋಜನೆಯ ಮಾಹಿತಿ ನೀಡಿದರು. ಮಾತೃಪ್ರಧಾನ ವಿಭಾಗದ ದುರ್ಗಾಂಬಿಕೆ, ಶಿಷ್ಯ ಮಾಧ್ಯಮದ ಜ್ಯೋತಿ ಹೇರಂಬ ಪಾಲ್ಗೊಂಡರು.
ಗುರಿಕ್ಕಾರರು ವಿವಿಧ ಸಲಹೆಗಳನ್ನು ನೀಡಿದರು. ಕೋಶಾಧ್ಯಕ್ಷ ರವಿ ಗಣೇಶ ಈನಡ್ಕ ಸಂಗ್ರಹದ ವರದಿ ಮಂಡಿಸಿದರು. ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ವಿದ್ಯಾರ್ಥಿಗಳ ಸೇರ್ಪಡೆ ಅಭಿಯಾನದ ವಿವರಗಳನ್ನು ಮುಖ್ಯಸ್ಥ ಅಂಬಾಪ್ರಸಾದ ಪಾತಾಳ ನೀಡಿದರು.
ಸಭೆಯಲ್ಲಿ ಭಾಗವಹಿಸಿದ ಸುರಕ್ಷಾ ಫಾರ್ಮ್ಸ ನ ವೆಂಕಟರಮಣ ಭಟ್ಟರು ತಮ್ಮ ಮನೆಯಲ್ಲಿ ಮಾ.24 ರಂದು ನಡೆಯುವ ಸ್ವರ್ಣಪಾದುಕೆ ಭಿಕ್ಷಾ ಕಾರ್ಯಕ್ರಮಕ್ಕೆ ಸರ್ವರನ್ನೂ ಆಮಂತ್ರಿಸಿದರು.
ಅಶೋಕೆಯಲ್ಲಿ ಎರಡನೇ ಖ್ಯಾಪನಾ ಕಾರ್ಯಕ್ರಮ ಎಪ್ರಿಲ್ 14 ರಂದು ಆಯೋಜಿಸಲಾಗಿದ್ದು, ಅದೇದಿನ ಯೋಗಪಟ್ಟಾಭಿಷೇಕ ನಡೆಯಲಿದ್ದು ಶಿಷ್ಯರು ಪಾಲ್ಗೊಳ್ಳುವಂತೆ ವಿನಂತಿಸಲಾಯಿತು. ಮಾಣಿಮಠದಲ್ಲಿ ನಡೆಯುವ ವಸಂತ ವೇದಪಾಠ ಶಾಲೆಯ ಮಾಹಿತಿ, ಮಾರ್ಚ್ 18 ರಂದು ಗೋಲೋಕದಲ್ಲಿ ನಡೆಯುವ ಕೃಷ್ಣಾರ್ಪಣಮ್ ಕಾರ್ಯಕ್ರಮ, ವಿಷ್ಣುಸಹಸ್ರನಾಮ ಅನುಸಂಧಾನಗಳ ಕುರಿತು ಸಭೆಯಲ್ಲಿ ವಿವರಿಸಲಾಯಿತು.
ಈ ಸಂದರ್ಭದಲ್ಲಿ ಬೆಳ್ಳಾರೆಯ ನಿಡ್ಮಾರಿನ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ನೆರವು ನೀಡಿದ ಡಾ.ಕೆ.ಜಿ.ಭಟ್ ಮತ್ತು ಶಾಂತಾರಾಮ ಕಾಂಚನ ಅವರನ್ನು ಅಭಿನಂದಿಸಲಾಯಿತು. ಶಿಷ್ಯ ಮಾಧ್ಯಮ ಪ್ರಧಾನೆ ಜ್ಯೋತಿ ಹೇರಂಬ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ