ಬೆಂಗಳೂರು : ತ್ಯಾಗರಾಜನಗರದಲ್ಲಿರುವ ಶ್ರೀ ಕಂಭದ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರತಿ ಶುಕ್ರವಾರ ಹಾಗೂ ಪ್ರತಿ ತಿಂಗಳ ಸ್ವಾತಿ ನಕ್ಷತ್ರದಂದು ಸಂಜೆ 6-30 ರಿಂದ 8ರ ವರೆಗೆ ದಾಸರ ಪದಗಳ ಗಾಯನ /ಭರತನಾಟ್ಯ ಪ್ರದರ್ಶನ / ವಾದ್ಯ ಸಂಗೀತ ಈ ಕಾರ್ಯಕ್ರಮಗಳನ್ನು ಸೇವಾ ರೂಪದಲ್ಲಿ ಸಲ್ಲಿಸಲು ಅವಕಾಶವಿರುತ್ತದೆ.
ಇದರಲ್ಲಿ ಯಾವುದೇ ರೀತಿಯ ಸಂಭಾವನೆ ಇರುವುದಿಲ್ಲ. ದೇವಸ್ಥಾನದಿಂದ "ಪ್ರಶಸ್ತಿ ಪತ್ರ" ಮತ್ತು ಶ್ರೀ ಸ್ವಾಮಿಯ ಪ್ರಸಾದ ನೀಡಲಾಗುತ್ತದೆ. ಗಾಯಕ/ಗಾಯಕಿಯರು ಶೃತಿ ಪೆಟ್ಟಿಗೆ ಒಂದನ್ನು ಮಾತ್ರ ಬಳಸಿಕೊಂಡು ಹಾಡಬಹುದು ಅಥವಾ ಪಕ್ಕವಾದ್ಯದೊಂದಿಗೆ ಕಾರ್ಯಕ್ರಮ ಮಾಡಲು ಅಪೇಕ್ಷಿಸುವವರು ಅವರ ಸಂಭಾವನೆಯ ವೆಚ್ಚವನ್ನು ಗಾಯನ ಸೇವೆ ಮಾಡುವವರೇ ಭರಿಸತಕ್ಕದ್ದು.
ಈ ದೇವಸ್ಥಾನದ ಯೂಟ್ಯೂಬ್ ವಾಹಿನಿಯಲ್ಲಿ ನಿಮ್ಮ ಕಾರ್ಯಕ್ರಮ "ನೇರಪ್ರಸಾರ" ಆಗುತ್ತದೆ. ಸೇವಾಸಕ್ತರು ಸಂಪರ್ಕಿಸಿ : ಮೊಬೈಲ್ : 9980400535 / 7019475877
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ