ಮಂಗಳೂರು: ಕಾಯಿನ್ ಶೋ ಇಂಡಿಯಾ ಇವರು ಮಾರ್ಚ್ 2 ಮತ್ತು 3ರಂದು ಆಯೋಜಿಸಿರುವ ನಾಣ್ಯಗಳು, ಅಂಚೆಚೀಟಿಗಳು, ಬ್ಯಾಂಕ್ ನೋಟುಗಳ ಮೆಡಲ್ಸ್ ಹಾಗೂ ಸಂಗ್ರಹಕ ವಸ್ತುಗಳ ಪ್ರದರ್ಶನ ಮಾರ್ಚ್ 2 ಮತ್ತು 3ರಂದು ಸಿಟಿ ಸೆಂಟರ್ ಹತ್ತಿರ ಇರುವ ಹೊಟೇಲ್ ಶ್ರೀನಿವಾಸ ಮಂಗಳಾ ಹಾಲ್ನಲ್ಲಿ ನಡೆಯುತ್ತಿದೆ.
ಈ ಪ್ರದರ್ಶನವನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀನಿವಾಸ ವಿಶ್ವವಿದ್ಯಾಲಯದ ಸಿಎ ರಾಘವೇಂದ್ರ ರಾವ್ ಉದ್ಘಾಟನೆಯನ್ನು ನೆರವೇರಿಸಿದರು. ಪ್ರದರ್ಶನವು ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ನಡೆಯಲಿದ್ದು, ಪ್ರವೇಶ ಉಚಿತವಾಗಿದೆ ಹಾಗೂ ನಾಣ್ಯ ಅಂಚೆಚೀಟಿಗಳು, ಬ್ಯಾಂಕ್ ನೋಟುಗಳನ್ನು ವೀಕ್ಷಿಸಲು, ಖರೀದಿಸಲು ಮತ್ತು ಮಾರಾಟ / ವಿನಿಮಯ ಮಾಡಲೂ ಅವಕಾಶವಿದೆಯೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಾಹಿತಿಗಾಗಿ ಸಂಪರ್ಕಿಸಿರಿ: 98434 48548
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ