ಒಂದು ಕಾಲವಿತ್ತು. ವಿಧಾನಪರಿಷತ್ ನಲ್ಲಿ ಬಹುಮುಖ್ಯವಾಗಿ ಶಿಕ್ಷಕರ ಕ್ಷೇತ್ರ; ಪದವೀಧರರ ಕ್ಷೇತ್ರಗಳೆಂದರೆ ಬಿಜೆಪಿಯೇ ತುಂಬಿ ತುಳುಕುವ ಸದನವಾಗಿತ್ತು. ಬಿಜೆಪಿ ಬಿಟ್ಟರೆ ಜೆಡಿಎಸ್ ಆ ಸ್ಥಾನ ತುಂಬಿಸಿಕೊಳ್ಳುತ್ತಿತ್ತು. ಆದರೆ ಇತ್ತೀಚಿನ ಈ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿತನಕ್ಕೆ ಹೆಚ್ಚಿನ ಬೇಡಿಕೆ ಇದೆ ಮಾತ್ರವಲ್ಲ ಗೆದ್ದು ಬರುವ ಅವಕಾಶ ಹೆಚ್ಚಾಗಿ ವೇದ್ಯವಾಗುವ ವಾತಾವರಣ ಸೃಷ್ಟಿಯಾಗುತ್ತಿದೆ. ಹಾಗಾಗಿ ರಾಜ್ಯ ವ್ಯಾಪಿಯಾಗಿ ಬಿಜೆಪಿ ಜೆಡಿಎಸ್ ವಿಧಾನ ಪರಿಷತ್ ಸದಸ್ಯರು ರಾಜೀನಾಮೆ ನೀಡಿರುವುದು ಮಾತ್ರವಲ್ಲ ಅವರು ಕಾಂಗ್ರೆಸ್ ಪಕ್ಷವನ್ನೇ ಒಪ್ಪಿಕೊಳ್ಳುವ ಅಪ್ಪಿಕೊಳ್ಳುವ ಪರಿಸ್ಥಿತಿ ಯಾಕೆ ಬಂದಿದೆ ಅನ್ನುವುದನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಬೇಕಾದ ಪರಿಸ್ಥಿತಿ ನಿಮಾ೯ಣವಾಗಿದೆ.
ಹಿಂದೆ ಬಿಜೆಪಿಗೆ ಈ ಶಿಕ್ಷಕರ ಪದವೀಧರ ಕ್ಷೇತ್ರಗಳಲ್ಲಿ ವಿರೇೂಧಿಗಳೇ ಇಲ್ಲ ಅನ್ನುವ ಮಟ್ಟಿಗೆ ಪರಿಸ್ಥಿತಿ ಇತ್ತು. ಆದರೆ ಇಂದು ಈ ಪರಿಸ್ಥಿತಿ ಬದಲಾಗುತ್ತಿದೆ. ಇದಕ್ಕೆ ಕಾರಣಗಳೇನು?
1. ಹತ್ತು ಹದಿನೈದು ವರುಷಗಳ ಹಿಂದಿನ ಅವಧಿಯಲ್ಲಿ ಈ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಬಿಜೆಪಿ ಅಭ್ಯರ್ಥಿಗಳು ತಮ್ಮದೇ ಸಿದ್ಧಾಂತ ಒಪ್ಪಿಕೊಂಡ ಶಿಕ್ಷಕರನ್ನು ಪದವೀಧರರನ್ನು ಈ ಕ್ಷೇತ್ರಗಳಲ್ಲಿ ಮತದಾರರನ್ನಾಗಿ ನೊಂದಾಯಿಸಿಕೊಂಡು ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದರು. ಅದೆಷ್ಟೊ ಕಾಲದ ತನಕ ಈ ಕ್ಷೇತ್ರಗಳಲ್ಲಿ ಚುನಾಯಿತ ಸದಸ್ಯರು ಕೆಲಸ ಮಾಡಲಿ ಮಾಡದಿರಲಿ ಸಲೀಸಾಗಿ ಗೆದ್ದು ಬರುತ್ತಿದ್ದರು.
ಈ ಚುನಾಯಿತ ಸದಸ್ಯರ ಅಸಡ್ಧೆ ಸೇೂಮಾರಿತನ ಶಿಕ್ಷಕರ ಪದವೀಧರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸದೇ ಇರುವ ಈ ಚುನಾಯಿತ ಸದಸ್ಯರನ್ನು ನಾವೇಕೆ ಬೆಂಬಲಿಸ ಬೇಕು ಅನ್ನುವ ಪ್ರಶ್ನೆ ಈ ಮತದಾರರಲ್ಲಿ ಹುಟ್ಟಿ ಕೊಂಡ ಕಾರಣ. ಬಿಜೆಪಿ ತನ್ನ ನಂಬಿಗ್ಥ ಮತದಾರರ ವಿಶ್ವಾಸ ನಿಧಾನವಾಗಿ ಕಳೆದುಕೊಳ್ಳುವ ಸ್ಥಿತಿಗೆ ಬಂತು.
2. ಇನ್ನೂ ಒಂದು ಬಹುಮುಖ್ಯ ಕಾರಣ ಬಹು ಸಂಖ್ಯೆಯ ಸರಕಾರಿ ಮತ್ತು ಖಾಸಗಿ ರಂಗದ ಉದ್ಯೋಗಳಿಗೆ 2006ರ ಅನಂತರದಲ್ಲಿ ಕಾಡುತ್ತಿದ್ದ ಪಿಂಚಣಿ ಸಮಸ್ಯೆ ಬಗ್ಗೆ ಬಿಜೆಪಿಯ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಅವರ ಬೇಡಿಕೆಗಳಿಗೆ ಬಿಡಿಕಾಸಿನ ಮನ್ನಣೆ ನೀಡಲೇ ಇಲ್ಲ. ಇಲ್ಲಿ ಬಿಜೆಪಿಯಿಂದ ಆಯ್ಕೆಕೊಂಡ ವಿಧಾನಪರಿಷತ್ ಸದಸ್ಯರ ಪರಿಸ್ಥಿತಿ ಹೇಗಿತ್ತು ಅಂದರೆ ಈ ವಿಚಾರದಲ್ಲಿ ಅವರದ್ದೇ ಸರ್ಕಾರದ ವಿರುದ್ಧ ಧ್ವನಿ ಎತ್ತಿದಾಗಲೂ ಕೂಡಾ ಸರ್ಕಾರ ಅದಕ್ಕೆ ಎಳ್ಳು ಕಾಳಿನಷ್ಟು ಮಯಾ೯ದೆ ಸದನದ ಒಳಗೂ ಕೊಡಲಿಲ್ಲ ಹೊರಗೂ ಕೊಡಲಿಲ್ಲ. ಮಾತ್ರವಲ್ಲ ಪ್ರಶ್ನೆ ಕೇಳಿದ ಸದಸ್ಯರ ಬಾಯಿ ಮುಚ್ಚಿಸುವ ಕೆಲಸವನ್ನು ಮುಖ್ಯ ಮಂತ್ರಿಗಳು ಸಚಿವರು ಆದಿಯಾಗಿ ಕೈಗೆತ್ತಿಕೊಂಡರು. ಇದು ಎಲ್ಲಾ ವಿದ್ಯಾವಂತ ಮತದಾರರ ಗಮನಕ್ಕೂ ಬಂತು. ಪದವೀಧರ ಹತ್ತು ಹಲವು ಸಮಸ್ಯೆಗಳಿಗೂ ಸರ್ಕಾರದ ನಿಲೀ೯ಪ್ತ ಧೇೂರಣೆ ಈ ಎಲ್ಲಾ ಮತದಾರರನ್ನು ತಾವು ನಂಬಿಕೊಂಡಿದ್ದ ಪಕ್ಷದಿಂದ ನಿಧಾನವಾಗಿ ದೂರವಾಗಲೂ ಕಾರಣವಾಯಿತು. ಈ ಸ್ಥಿತಿಯ ಸತ್ಯತೆ ಚುನಾಯಿತ ಸದಸ್ಯರಿಗೆ ಗೊತ್ತಾಗಿದೆ. ಇಷ್ಟಾದರೂ ಬಿಜೆಪಿಯ ರಾಷ್ಟ್ರ್ರ ರಾಜ್ಯದ ನಾಯಕರುಗಳಿಗೆ ಇನ್ನೂ ಗಮನಕ್ಕೆ ಬಾರದಿರುವುದು ಆಶ್ಚರ್ಯವೇ ಸರಿ?
ಹಾಗಾಗಿ ಇತ್ತೀಚೆಗೆ ನಡೆದ ವಿಧಾನಪರಿಷತ್ನ ಸುಶಿಕ್ಷಿತರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಲು ಸಾಧ್ಯವಾಯಿತು. ಅಂದರೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆಯನ್ನು ನೀಡುತ್ತಾ ಬಂದಿರುವ ಕಾರಣ ಈ ಸುಶಿಕ್ಷಿತ ಶಿಕ್ಷಕರ ಪದವಿಧರರ ಗಮನ ಸೆಳೆಯಲು ಕಾರಣವಾಯಿತು.
3. ಇತ್ತೀಚೆಗೆ ವಿಧಾನಪರಿಷತ್ ಅಧ್ಯಕ್ಷರಾದ ಬಸವರಾಜ ಹೊರಟ್ಟಿ ಹೇಳಿದ ಹೇಳಿಕೆ ಅಂದರೆ "ತಾನು ವಿಧಾನಪರಿಷತ್ ಅಧ್ಯಕ್ಷನಾದ ಮೇಲೆ ಹತ್ತು ಮಂದಿ ವಿಧಾನ ಪರಿಷತ್ ಸದಸ್ಯರು ಅವಧಿ ಮುಗಿಯುವ ಮುನ್ನವೇ ರಾಜೀನಾಮೆ ಸಲ್ಲಿಸಿದ್ದಾರೆ."
4. ರಾಜೀನಾಮೆ ಸಲ್ಲಿಸಿದವರ ಮುಂದಿನ ಹೆಜ್ಜೆ ಕಾಂಗ್ರೆಸ್ ಪಕ್ಷ ದಿಂದಲೇ ಸ್ಪರ್ಧಿಸಿ ವಿಧಾನ ಪರಿಷತ್ ಪ್ರವೇಶ ಮಾಡುವ ರಾಜಕೀಯ ನಡೆಯೂ ಹೌದು. ಬಿಜೆಪಿಯಲ್ಲಿ ಇದ್ದರೆ ತಮಗೆ ಕನಿಷ್ಠ ಪಕ್ಷ ವಿಧಾನ ಪರಿಷತ್ ಸದಸ್ಯ ಹುದ್ದೆಗೂ ಸಂಚಕಾರ ಬರಬಹುದು ಅನ್ನುವ ಹೆದರಿಕೆ.
ಅಂತೂ ವಿದ್ಯಾವಂತ ಮತದಾರರು ಕೂಡಾ ತಾವು ನಂಬಿದ ಪಕ್ಷದಿಂದ ದೂರವಾಗುವ ಎಚ್ಚರಿಕೆಯ ಘಂಟೆ ಬಾರಿಸುತ್ತಿರುವುದಂತೂ ಇತ್ತೀಚಿನ ವಿಧಾನಪರಿಷತ್ ಸದಸ್ಯರ ರಾಜೀನಾಮೆ ಪರ್ವಕ್ಕೆ ಕನ್ನಡಿ ಹಿಡಿದಂತಿದೆ.
- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ