ಭಾವಗೀತೆ ಗಾಯನ ಕಾರ್ಯಕ್ರಮ
ಹಾಸನ: ಹಾಸನ ನಗರದಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿರುವ ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆ ವತಿಯಿಂದ ಪದ್ಮಾವತಿ, ಅಧ್ಯಕ್ಷರು, ಹಾಸನಾಂಬ ವೇದಿಕೆ, ಹಾಸನ ಇವರ ಪ್ರಾಯೋಜಕತ್ವದಲ್ಲಿ ಆದಿ ಚುಂಚನಗಿರಿ ಕಲ್ಯಾಣ ಮಂಟಪದ ಪಕ್ಕದಲ್ಲಿ ಇರುವ ಗಣಪತಿ ದೇವಸ್ಥಾನ ಯಜ್ಞ ಮಂಟಪದ ಆವರಣ, ಎಂ.ಜಿ.ರಸ್ತೆ, ಹಾಸನ ಇಲ್ಲಿ ದಿ. 03-03-2024ರ ಭಾನುವಾರ ಸಂಜೆ 3.00 ಗಂಟೆಗೆ ಸಾಹಿತ್ಯ ಉಪನ್ಯಾಸ, ಕವಿಗೋಷ್ಠಿ, ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ರಾಷ್ಟ್ರ ಕವಿ ಡಾ. ಜಿ.ಎಸ್.ಶಿವರುದ್ರಪ್ಪರವರ ಕವಿತೆಗಳಲ್ಲಿ ಬದುಕಿನ ನೈಜ ಪ್ರೀತಿ ವಿಷಯವಾಗಿ ರಾಣಿ ಚರಾಶ್ರೀ, ಶಿಕ್ಷಕಿ ಇವರಿಂದ ಉಪನ್ಯಾಸ, ಆಗಮಿತ ಕವಿಗಳಿಂದ ಕವಿಗೋಷ್ಠಿ ಕಾವ್ಯ ವಿಮರ್ಶೆ ಹಾಗೂ ಗಾಯಕ ಗಾಯಕಿಯರಿಂದ ವಿಶೇಷವಾಗಿ ಡಾ. ಜಿ.ಎಸ್.ಶಿವರುದ್ರಪ್ಪರವರ ಭಾವಗೀತೆಗಳ ಗಾಯನ ಇರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಕವಿಗಳು ಗಾಯಕರು ಭಾಗವಹಿಸಬೇಕೆಂದು ಮನೆ ಮನೆ ಕವಿಗೋಷ್ಠಿ ಸಂಚಾಲಕರು ಸಾಹಿತಿಗಳಾದ ಗೊರೂರು ಅನಂತರಾಜು ಅವರು ಕೋರಿರುತ್ತಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ