ಅಯೋಧ್ಯೆ: 48 ದಿನಗಳ ಮಂಡಲೋತ್ಸವ ಇನ್ನು ನಾಲ್ಕು ದಿನಗಳಲ್ಲಿ ಮುಕ್ತಾಯ

Upayuktha
0

ಸಂಸದ ನಳಿನ್‌ ಕುಮಾರ್ ಕಟೀಲ್, ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರಿಂದ ಶ್ರೀರಾಮನ ದರ್ಶನ




ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದಲ್ಲಿ ಉಡುಪಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ 48 ದಿನಗಳ ಮಂಡಲೋತ್ಸವದ ವೈಭವಕ್ಕೆ ಇನ್ನು ನಾಲ್ಕು ದಿನಗಳಲ್ಲಿ ತೆರೆ ಬೀಳಲಿದೆ. ಈ ಸಂದರ್ಭದಲ್ಲಿ ಇಂದು (ಮಾ.6, ಬುಧವಾರ) ಕರ್ನಾಟಕದ ಬಿಜೆಪಿಯ ನಿಕಟಪೂರ್ವ ರಾಜ್ಯಾಧ್ಯಕ್ಷರು ಹಾಗೂ ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಬಾಲರಾಮನಿಗೆ ರಜತ ಕಲಶ ಹಾಗೂ ಚಾಮರ ಸೇವೆ ನೆರವೇರಿಸಿದರು. ಅಲ್ಲದೆ ಪೂಜ್ಯ ಪೇಜಾವರ ಶ್ರೀಗಳಿಂದ ಆಶೀರ್ವಾದ ಪಡೆದರು.

 


ಕನ್ನಡದ ಪ್ರಸಿದ್ಧ ನಟ ರಕ್ಷಿತ್ ಶೆಟ್ಟಿ ಅವರೂ ಸಹ ಇಂದು ಶ್ರೀರಾಮನ ದರ್ಶನ ಪಡೆದು ಸೇವೆ ನೆರವೇರಿಸಿದರು.

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top