ಪುತ್ತೂರು: ಮಂಗಳೂರು ನಗರದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯದಲ್ಲಿ ನಡೆದ ಇಂಟಿಗ್ರಲ್ ಯೋಗ ಸತ್ಸಂಗ (ರಿ ).ಇದರ 2023-24 ನೇ ಸಾಲಿನ "ದಿವ್ಯಾಸ್ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ" ಯನ್ನು ಪುತ್ತೂರು ವಿವೇಕಾನಂದ (ಸ್ವಾಯತ್ತ) ಕಾಲೇಜಿನ ವಿದ್ಯಾರ್ಥಿನಿಯರಾದ ಪ್ರಜ್ಞಾ. ಡಿ ಹಾಗೂ ಐದನೇ ಸುತ್ತಿನ ಸೇವಾ ಪ್ರಾಜೆಕ್ಟ್ ನಲ್ಲಿ ನಗದು ಹಾಗೂ ವೈಯಕ್ತಿಕ ಟ್ರೋಫಿಯನ್ನು ಒಳಗೊಂಡ ಎರಡನೆಯ ಬಹುಮಾನವನ್ನು ತೃತೀಯ ಬಿ ಎ ವಿದ್ಯಾರ್ಥಿನಿ ದೀಪ್ತಿ ಅಡ್ಡಂತ್ತಡ್ಕ ಪಡೆದುಕೊಂಡಿದ್ದಾರೆ
ಪ್ರಶಸ್ತಿಯು ರೋಲಿಂಗ್ ಶೀಲ್ಡ್ , ನಗದು ಹಾಗೂ ವೈಯಕ್ತಿಕ ಟ್ರೋಫಿ ಒಳಗೊಂಡಿದೆ. ಮಂಗಳೂರಿನ ಇಂಟಿಗ್ರೆಲ್ ಯೋಗ ಸತ್ಸಂಗ ಇವರು ಈ ಸ್ಪರ್ಧೆಯನ್ನು ಹಲವಾರು ವರ್ಷಗಳಿಂದ ಜಿಲ್ಲೆಯ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ನಡೆಸಿ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.
ಮಂಗಳೂರಿನ ರೋಶನಿ ನಿಲಯ ಕಾಲೇಜಿನಲ್ಲಿ ಕಳೆದ ಆರು ತಿಂಗಳಿಂದ , ಆರು ಸುತ್ತಿನಲ್ಲಿ ಸ್ಪರ್ಧೆ ಯು ನಡೆದಿತ್ತು. ಅಂತಿಮ ಸುತ್ತಿಗೆ ಹಿಂದಿನ ಐದು ಸುತ್ತುಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹತ್ತು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಾದ . ಪ್ರಜ್ಞಾ ಡಿ ನಾಲ್ಕನೇ ಸುತ್ತಿನ ಲರ್ನ್ ಅಂಡ್ ಟೆಕ್ ನಲ್ಲಿ ಪ್ರಥಮ ಸ್ಥಾನ. ಹಾಗೂ ಐದನೇ ಸುತ್ತಿನ ಸೇವಾ ಪ್ರಾಜೆಕ್ಟ್ ನಲ್ಲಿ ಪ್ರಜ್ಞಾ. ಡಿ ಪ್ರಥಮ ಸ್ಥಾನ ಮತ್ತು ದೀಪ್ತಿ ಅಡ್ಡಂತ್ತಡ್ಕ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ .
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ