ಫೆ.1ರಿಂದ 3ರ ವರೆಗೆ ಅಲೆವೂರಾಯ ಪ್ರತಿಷ್ಠಾನದ ಯಕ್ಷ ತ್ರಿವೇಣಿ 7ನೇ ವರ್ಷಾಚರಣೆ

Upayuktha
0



ಶರವು: ವರ್ಕಾಡಿ ರವಿ ಅಲೆವೂರಾಯ ಹಾಗೂ ಮಧುಸೂದನ ಅಲೆವೂರಾಯರು ಅಲೆವೂರಾಯರ ಪ್ರತಿಷ್ಠಾನವನ್ನು ಸ್ಥಾಪಿಸಿ ಇದೀಗ 7ನೇ ವರ್ಷಾಚರಣೆಯನ್ನು ಇದೇ ಬರುವ ಫೆಬ್ರವರಿ 1, 2, 3ರಂದು ಶ್ರೀಕ್ಷೇತ್ರ ಶರವಿನಲ್ಲಿ 3 ಬಯಲಾಟ, 4 ಸನ್ಮಾನಗಳನ್ನು ನಡೆಸಲಿದ್ದಾರೆ.



ಶ್ರೀಕ್ಷೇತ್ರ ಶರವಿನ ಶಿಲೆಶಿಲೆ ಮೊಕ್ತೇಸರರಾದ  ರಾಘವೇಂದ್ರ ಶಾಸ್ತ್ರಿಗಳು  ಹಾಗೂ ಡಾ| ಸುದೇಶ್ ಶಾಸ್ತ್ರಿಗಳು  ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಪ್ರೊ. ಎಂ.ಬಿ ಪುರಾಣಿಕ್ ರವರೂ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವೀರ ಕುಶ-ಲವ. 'ಶ್ರೀ ಮಾತೇ ಭದ್ರಕಾಳಿ, ತುಳನಾಡ ಬಲಿಯೇಂದ್ರೆ ಎಂಬ ಪೌರಾಣಿಕ ಪ್ರಸಂಗಗಳು ಬಯಲಾಟ ರೂಪದಲ್ಲಿ ಪ್ರದರ್ಶನಗೊಳ್ಳಲಿದೆ. 



ದಿ.ಲಕ್ಮೀನಾರಾಯಣ ಅಲೆವೂರಾಯರು ವರ್ಕಾಡಿಯವರು ಕುಗ್ರಾಮದಲ್ಲೂ ಯಕ್ಷಗಾನದ ಕಂಪನ್ನು ಪಸರಿಸಿದ ಎಲೆಮರೆಯ ಕಾಯಿಯಂತೆ ಇದ್ದು ಇತಿಹಾಸ ಸೇರಿದವರು. ಹಿಂದಿ ಭಾಷಾ ಪಂಡಿತರಾಗಿದ್ದು ಕನ್ನಡದ ಮೇಲೆ ಪ್ರಭುತ್ವವನ್ನು ಹೊಂದಿದ್ದು, ಅನೇಕ ಕಲಾವಿದರನ್ನು ಯಕ್ಷರಂಗಕ್ಕೆ ನೀಡಿದ್ದಾರೆ. ತಮ್ಮ ಪ್ರಬುದ್ದ ಜಾಣ್ಮೆಯಿಂದ ಯಕ್ಷರಂಗವನ್ನು ಆಳಿದವರು. ಅವರು ಸೇರಿ ಸ್ಥಾಪಿಸಿದ ಕಾವೀಃ ಸುಬ್ರಹ್ಮಣ್ಯೇಶ್ವರ ಯಕ್ಷ ಮಂಡಳಿಗೆಗೀಗ 51 ವರ್ಷ. ಉತ್ತಮ, ಸ್ಫುಟ ಬರವಣಿಗೆಯ ಮೂಲಕ ಅನೇಕ ಹಸ್ತಪ್ರತಿಗಳನ್ನು ತಾಳೆಗರಿ ಓಲೆಯಲ್ಲಿದ್ದುದ್ದನ್ನು ಬರೆದು ಯಕ್ಷಕವಿಯೂ ಆಗಿದ್ದಾರೆ. ಯಕ್ಷ ನಿರ್ದೇಶಕರಾಗಿ ಹಲವು ಹವ್ಯಾಸಿ ಕಲಾವಿದರ ಗುರುವೂ ಆಗಿದ್ದಾರೆ. 



ಪ್ರತಿಕಾಗೋಷ್ಠಿಯಲ್ಲಿ ಡಾ| ಹರಿಕೃಷ್ಣ ಪುನರೂರು, ಸುಧಾಕರ ರಾವ್ ಪೇಜಾವರ, ವಿಜಯಲಕ್ಷ್ಮೀ ಎಲ್. ಎನ್. 'ಸೌಮ್ಯಾ ಪುರುಷೋತ್ತಮ್ , ರವೀಂದ್ರ ಪೂಜಾರಿ, ಅನ್ವಿ ಉಪಸ್ಥಿತರಿದ್ದರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top