ಫೆ.01-03: ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಉಚಿತ ವಾಕ್ ಮತ್ತು ಶ್ರವಣ ಶಿಬಿರ

Upayuktha
0



ಮಂಗಳೂರು: ತೇಜಸ್ವಿನಿ ಇನ್‍ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ಸ್ಪೆರಾನ್ಝಾ (.... ಸ್ಪೂರ್ತಿದಾಯಕ ಸಂವಹನ) ಸಹಯೋಗದೊಂದಿಗೆ ಉಚಿತ ವಾಕ್ ಮತ್ತು ಶ್ರವಣ ಶಿಬಿರ ಫೆಬ್ರವರಿ 1 ರಿಂದ 3ರ ವರೆಗೆ ಮಂಗಳೂರಿನ ಕದ್ರಿ ದೇವಸ್ಥಾನದ ಬಳಿಯಿರುವ ತೇಜಸ್ವಿನಿ ಆಸ್ಪತ್ರೆಯ ನೆಲಮಹಡಿಯಲ್ಲಿ ಬೆಳಗ್ಗೆ 9:30 ರಿಂದ ಸಂಜೆ 6:00ರ ವರೆಗೆ ನಡೆಯಲಿದ್ದು, ಮಾತು ಮತ್ತು ಶ್ರವಣದ ಸವಾಲುಗಳನ್ನು ಜಯಿಸಲು ಮತ್ತು ಈ ಅಸಾಮಥ್ರ್ಯಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ಇದರ ಪ್ರಯೋಜನವನ್ನು ಪಡೆಯಲು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 




ಶಿಬಿರದಲ್ಲಿ ಉಚಿತವಾಗಿ ಲಭಿಸುವ ಸೇವೆಗಳು:

ಶ್ರವಣ ಸಮಸ್ಯೆಯುಳ್ಳವರಿಗೆ ಸಮಗ್ರ ಶ್ರವಣ ಪರೀಕ್ಷೆ ಹಾಗೂ ಅರ್ಹರಿಗೆ ಶ್ರವಣ ಸಾಧನಗಳ ಪ್ರಯೋಗ.

ಧ್ವನಿ ಸಮಸ್ಯೆಯುಳ್ಳವರಿಗೆ ವಿಶೇಷ ಮೌಲ್ಯಮಾಪನ ಮತ್ತು ಸಮಾಲೋಚನೆ.

ತೊದಲುವಿಕೆ ಸಮಸ್ಯೆಯುಳ್ಳವರಿಗೆ ವೈಯಕ್ತಿಕವಾಗಿ ಚಿಕಿತ್ಸೆಗೆ ಬೆಂಬಲ.

ಪೋಸ್ಟ್-ಸ್ಟ್ರೋಕ್, ಅಪಘಾತ ಮತ್ತು ಮಿದುಳಿನ ಗಾಯಗಳಾದ ವಯಸ್ಕರಲ್ಲಿ ಮಾತು ಮತ್ತು ಭಾಷಾ ಸಮಸ್ಯೆಗಳಿದ್ದಲ್ಲಿ ಸಮಗ್ರ ಮೌಲ್ಯಮಾಪನ ಮತ್ತು ಸೂಕ್ತ ಚಿಕಿತ್ಸೆಯ ಸಲಹೆ.

ಮಕ್ಕಳಲ್ಲಿ ಮಾತು ಮತ್ತು ಭಾಷಾ ಸಮಸ್ಯೆಗಳಿದ್ದಲ್ಲಿ ಸಕಾಲದಲ್ಲಿ ಸಮಾಲೋಚನೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳುವುದು. 



ಶಿಬಿರದ ವಿಶೇಷ ಕೊಡುಗೆಗಳು:

ಶ್ರವಣ ಸಾಧನಗಳ ಖರೀದಿಯ ಮೇಲೆ ವಿಶೇಷ ರಿಯಾಯಿತಿ.

ಹಳೆಯ ಶ್ರವಣ ಸಾಧನಗಳಲ್ಲಿ ವಿನಿಮಯ ಕೊಡುಗೆ. 

ಖರೀದಿಸಿದ ಶ್ರವಣ ಸಾಧನಗಳ ಮೇಲೆ ವಾರಂಟಿ ವಿಸ್ತರಣೆ.

ಉಚಿತ ಚಿಕಿತ್ಸೆ ಮತ್ತು ಮೌಲ್ಯಮಾಪನ 

ನೋಂದಣಿಗಾಗಿ ಸಂಪರ್ಕಿಸಿರಿ: 7483992927 / 9916879333




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
To Top