ನಂದನೇಶ್ವರ ದೇವಳದಲ್ಲಿ ಕೊಲ್ಲಂಗಾನ ಮೇಳದ ಯಕ್ಷ ಪಂಚಕ ಉದ್ಘಾಟನೆ

Upayuktha
0

ಮಂಗಳೂರು: ಯಕ್ಷಗಾನಕ್ಕೆ ಭಾಷೆ - ರಾಜ್ಯಗಳ ಬೇಧವಿಲ್ಲ. ಕಾಸರಗೋಡಿನ ಕೊಲ್ಲಂಗಾನವೂ ಮಲೆಯಾಳೀ ಪ್ರದೇಶದಲ್ಲಿದ್ದರೂ ನಮ್ಮ ಸಂಸ್ಕೃತಿಯ ಪ್ರತೀಕವಾದ ಯಕ್ಷಗಾನವನ್ನು ಶುದ್ಧ ಕನ್ನಡದಲ್ಲಿ ಹಾಗೂ ಪೌರಾಣಿಕ ಪ್ರಸಂಗಗಳನ್ನೇ ಪ್ರದರ್ಶಿಸುತ್ತಾ ಜನರಂಜನೆ ಮಾಡುತ್ತಾ ಬರುತ್ತಿದೆ. ನಟನಾಪ್ರಿಯನಾದ ಶ್ರೀ ನಂದನೇಶ್ವರ ದೇವಳದಲ್ಲಿ ಕಳೆದ 7 ವರ್ಷಗಳಿಂದ ಯಕ್ಷ ಪಂಚಕವನ್ನು ನಡೆಸುತ್ತಾ ಬರುತ್ತಿದೆ. ನಾವು ನಮ್ಮ ಕಡೆಯಿಂದ ಪೂರ್ಣ ಬೆಂಬಲ ನೀಡುತ್ತಾ ಬರುತ್ತಿದ್ದೇವೆ. ಕಲೆ- ಕಲಾವಿದರನ್ನು ಗೌರವಿಸುವುದು ಸಮಾಜದ ಕರ್ತವ್ಯ ಎ೦ದು ಪಿ. ಅನಂತ ಐತಾಳರು ಹೇಳಿದರು.


ಶ್ರೀದೇವಳದಲ್ಲಿ ಕೊಲ್ಲಂಗಾನ ಮೇಳದ ಐದು ದಿನಗಳ ಯಕ್ಷ ಪಂಚಕವನ್ನು ಉದ್ಘಾಟಿಸುತ್ತಾ ಅವರು ಮಾತನಾಡಿದರು. ಹಿರಿಯ ನಿವೃತ್ತ ಬ್ಯಾಂಕ್ ಉದ್ಯೋಗಿ ಹಾಗೂ ಯಕ್ಷಗಾನ ಕಲಾವಿದ ಶ್ರೀಧರ ಐತಾಳರು ದೇವಸ್ಥಾನದ ಪ್ರೋತ್ಸಾಹವನ್ನು ನೆನಪಿಸುತ್ತಾ ಮೇಳಕ್ಕೆ ಶುಭ ಹಾರೈಸಿದರು.


ಕಲಾ ಪೋಷಕರಾದ ಗಣಪತಿ ಐತಾಳ್, ರಾಜೇಶ್ ಹಾಗೂ ಸುಬ್ಬರಾವ್ ಅತಿಥಿಗಳಾಗಿದ್ದರು. ಬ್ರಹ್ಮಶ್ರೀ ಗಣಾಧಿರಾಜ ತಂತ್ರಿಗಳು ಮೇಳದ ಬಗ್ಗೆ ಪ್ರಸ್ತಾವನೆಗೈದರು. ಸುಮನ್ ರಾಜ್ ನೀಲೇಂಗಳ ಸ್ವಾಗತಿಸಿದರು. ಯಕ್ಷಗುರು ವರ್ಕಾಡಿ ರವಿ ಅಲೆವೂರಾಯರು ಕಾರ್ಯಕ್ರಮ ನಿರ್ವಹಿಸಿದರೆ, ಸುಬ್ರಹ್ಮಣ್ಯ ಭಟ್ ಧನ್ಯವಾದವಿತ್ತರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top