ಮಾನವ ನಡವಳಿಕೆಯಲ್ಲಿ ಎಐ ಪಾತ್ರ: ಉಜಿರೆಯಲ್ಲಿ ಡಿ. 4-5ರಂದು ಅಂತರರಾಷ್ಟ್ರೀಯ ವಿಚಾರ ಸಂಕಿರಣ

Upayuktha
0


ಮಂಗಳೂರು: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಮನೋವಿಜ್ಞಾನ ಪಿಜಿ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಡಿ.4 ಮತ್ತು 5ರಂದು ಕಾಲೇಜಿನ ಸಿಎನ್‌ವೈಎಸ್ ಸಭಾಂಗಣದಲ್ಲಿ 'ಮಾನವ ನಡವಳಿಕೆಯಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಪಾತ್ರ ಮತ್ತು ಭವಿಷ್ಯ' ಎಂಬ ವಿಷಯದ ಕುರಿತು ಅಂತಾರಾಷ್ಟ್ರೀಯ ಬಹುಶಿಸ್ತೀಯ ವಿಚಾರ ಸಂಕಿರಣವನ್ನು ಆಯೋಜಿಸಿದೆ.


ಬೆಳಗ್ಗೆ 10 ಗಂಟೆಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ ವಾನಳ್ಳಿ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಎಸ್‌ಡಿಎಂಇ ಸೊಸೈಟಿ ಕಾರ್ಯದರ್ಶಿ ಡಾ.ಸತೀಶ್‌ಚಂದ್ರ ಎಸ್, ಗೌರವ ಅತಿಥಿಗಳಾಗಿ ಎಸ್‌ಡಿಎಂ ಪಿಜಿ ಸೆಂಟರ್ ಡೀನ್ ಡಾ.ವಿಶ್ವನಾಥ ಪಿ ಆಗಮಿಸಲಿದ್ದಾರೆ. ಎಸ್‌ಡಿಎಂಸಿ ಪ್ರಾಂಶುಪಾಲ ಡಾ.ಬಿ.ಎ. ಕುಮಾರ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.


ಗ್ರ್ಯಾಂಡ್ ಮಾಸ್ಟರ್ ಆಫ್ ರೂಬಿಕ್ಸ್ ಕ್ಯೂಬ್ (ಮುಂಬೈ) ಮಾಸ್ಟರ್ ಅಫ್ಫಾನ್ ಕುಟ್ಟಿ ಅವರಿಂದ ವಿಶೇಷ ಪ್ರಸ್ತುತಿ ಇರುತ್ತದೆ ಮತ್ತು ಅದರ ನಂತರ ವಿದ್ಯಾರ್ಥಿಗಳ ಪ್ಯಾನೆಲ್ ಸಿಂಪೋಸಿಯಾ ಮತ್ತು ತಜ್ಞರ ಪ್ಯಾನೆಲ್ ಸಿಂಪೋಸಿಯಾ (ಆನ್‌ಲೈನ್) ನಡೆಯಲಿದೆ. ಸಾಂಸ್ಕೃತಿಕ ಸಂಜೆಯ ಅಂಗವಾಗಿ ಹಿನ್ನೆಲೆ ಗಾಯಕಿ ಅನುರಾಧ ಭಟ್ ಅವರೊಂದಿಗೆ ವಿಶೇಷ ಸಂವಾದ ನಡೆಯಲಿದೆ.


ಡಿಸೆಂಬರ್ 5 ರಂದು, ನಾಸಾ ಜಾಗತಿಕ ಬಾಹ್ಯಾಕಾಶ ರಾಯಭಾರಿ ಡಾ. ರವಿ ಮಾರ್ಗಸಹಾಯಂ ಅವರಿಂದ ವಿಶೇಷ ಭಾಷಣ, ನಂತರ ತಜ್ಞರ ಸಮಿತಿ ವಿಚಾರ ಸಂಕಿರಣ ನಡೆಯಲಿದೆ. ಟಂಪೆರೆ ವಿಶ್ವವಿದ್ಯಾಲಯ (ಫಿನ್‌ಲ್ಯಾಂಡ್) ಇಂಜಿನಿಯರಿಂಗ್ ಮತ್ತು ನೈಸರ್ಗಿಕ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ.ನೋಣಪ್ಪ ಮಧ್ಯಾಹ್ನ 3.30 ಗಂಟೆಗೆ ಸಮಾರೋಪ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಎಸ್‌ಡಿಎಂ ಕ್ಷೇಮವನ (ಬೆಂಗಳೂರು) ಸಿಇಒ ಶ್ರದ್ದಾ ಅಮಿತ್ ಮತ್ತು ಎಸ್‌ಡಿಎಂಸಿ ಉಪಾಧ್ಯಕ್ಷ ಪ್ರೊ.ಎಸ್‌ಎನ್ ಕಾಕತ್ಕರ್ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಎಸ್ ಡಿಎಂಸಿ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸುವರು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top